<p><strong>ಕೊಯಮತ್ತೂರು:</strong>ಹಿಂದೂಪರ ಸಂಘಟನೆಗಳ ನಾಯಕರನ್ನು ಕೊಲ್ಲುವ ಮೂಲಕ ಸಮಾಜದಲ್ಲಿ ಕೋಮುದಳ್ಳುರಿ ಹಬ್ಬಿಸಲು ಸಂಚು ನಡೆಸಿದ್ದ ಆರೋಪದ ಮೇಲೆ ಐವರು ಆರೋಪಿಗಳನ್ನು ವಿಶೇಷ ತನಿಖಾ ದಳದ ಪೊಲೀಸರುಬಂಧಿಸಿದ್ದಾರೆ.</p>.<p>‘ಹಿಂದೂ ಮಕ್ಕಳ್ಕಚ್ಚಿ’ (ಎಚ್ಎಂಕೆ) ಸ್ಥಾಪಕ ಅರ್ಜುನ್ ಸಂಪತ್ ಮತ್ತು ‘ಶಕ್ತಿ ಸೇನಾ ನಾಯಕ’ ಅನ್ಬು ಮಾರಿ ಅವರನ್ನು ಕೊಲ್ಲುವುದು ಆರೋಪಿಗಳ ಉದ್ದೇಶವಾಗಿತ್ತು’ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. ಪೆರೋಲ್ ಮೇಲೆ ಹೊರಗೆ ಬಂದಿದ್ದ ಅಪರಾಧಿಯೊಬ್ಬನ ಮದುವೆಯಲ್ಲಿ ಪಾಲ್ಗೊಳ್ಳಲು ಅವರೆಲ್ಲರೂ ನಗರಕ್ಕೆ ಬಂದಿದ್ದರು. ಈ ಕುರಿತುಗುಪ್ತಚರ ಇಲಾಖೆ ನೀಡಿದ್ದಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.</p>.<p>ಬಂಧಿತರನ್ನು ಕೊಯಮತ್ತೂರಿನ ಆರ್.ಆಶಿಕ್, ಚೆನ್ನೈನ ಜಾಫರ್ ಸಾದಿಕ್ ಅಲಿ, ಎಸ್.ಶಲವುದ್ದೀನ್, ತಿರುವನಂತಪುರದ ಎಸ್. ಇಸ್ಲಾಯಿಲ್ ಹಾಗೂ ಪಲ್ಲವರಂನಎಸ್. ಶಂಸುದ್ದೀನ್ ಎಂದು ಗುರುತಿಸಲಾಗಿದೆ.ಬಂಧಿತರಿಂಧ ಮೊಟರ್ ಸೈಕಲ್, ಐದು ಮಚ್ಚು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p>ನಗರದ ತ್ವರಿತ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಸೆ.4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಯಮತ್ತೂರು:</strong>ಹಿಂದೂಪರ ಸಂಘಟನೆಗಳ ನಾಯಕರನ್ನು ಕೊಲ್ಲುವ ಮೂಲಕ ಸಮಾಜದಲ್ಲಿ ಕೋಮುದಳ್ಳುರಿ ಹಬ್ಬಿಸಲು ಸಂಚು ನಡೆಸಿದ್ದ ಆರೋಪದ ಮೇಲೆ ಐವರು ಆರೋಪಿಗಳನ್ನು ವಿಶೇಷ ತನಿಖಾ ದಳದ ಪೊಲೀಸರುಬಂಧಿಸಿದ್ದಾರೆ.</p>.<p>‘ಹಿಂದೂ ಮಕ್ಕಳ್ಕಚ್ಚಿ’ (ಎಚ್ಎಂಕೆ) ಸ್ಥಾಪಕ ಅರ್ಜುನ್ ಸಂಪತ್ ಮತ್ತು ‘ಶಕ್ತಿ ಸೇನಾ ನಾಯಕ’ ಅನ್ಬು ಮಾರಿ ಅವರನ್ನು ಕೊಲ್ಲುವುದು ಆರೋಪಿಗಳ ಉದ್ದೇಶವಾಗಿತ್ತು’ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. ಪೆರೋಲ್ ಮೇಲೆ ಹೊರಗೆ ಬಂದಿದ್ದ ಅಪರಾಧಿಯೊಬ್ಬನ ಮದುವೆಯಲ್ಲಿ ಪಾಲ್ಗೊಳ್ಳಲು ಅವರೆಲ್ಲರೂ ನಗರಕ್ಕೆ ಬಂದಿದ್ದರು. ಈ ಕುರಿತುಗುಪ್ತಚರ ಇಲಾಖೆ ನೀಡಿದ್ದಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.</p>.<p>ಬಂಧಿತರನ್ನು ಕೊಯಮತ್ತೂರಿನ ಆರ್.ಆಶಿಕ್, ಚೆನ್ನೈನ ಜಾಫರ್ ಸಾದಿಕ್ ಅಲಿ, ಎಸ್.ಶಲವುದ್ದೀನ್, ತಿರುವನಂತಪುರದ ಎಸ್. ಇಸ್ಲಾಯಿಲ್ ಹಾಗೂ ಪಲ್ಲವರಂನಎಸ್. ಶಂಸುದ್ದೀನ್ ಎಂದು ಗುರುತಿಸಲಾಗಿದೆ.ಬಂಧಿತರಿಂಧ ಮೊಟರ್ ಸೈಕಲ್, ಐದು ಮಚ್ಚು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.</p>.<p>ನಗರದ ತ್ವರಿತ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ಸೆ.4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>