ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಂಕ್‌ ಸ್ವಚ್ಛಗೊಳಿಸಲು ಇಳಿದ ಏಳು ಮಂದಿ ಉಸಿರುಗಟ್ಟಿ ಸಾವು 

Last Updated 15 ಜೂನ್ 2019, 6:42 IST
ಅಕ್ಷರ ಗಾತ್ರ

ವಡೋದರ: ಗುಜರಾತ್‌ನ ವಡೋದರ ಸಮೀಪದ ಫರ್ತಿಕ್ವೈ ಎಂಬಲ್ಲಿ ಹೋಟೆಲ್‌ವೊಂದರ ಟ್ಯಾಂಕ್‌ ಸ್ವಚ್ಛಗೊಳಿಸಲು ಇಳಿದಿದ್ದ ಏಳು ಮಂದಿ ವಿಷಾನಿಲ ಸೇವನೆಯಿಂದ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಡೆದಿದೆ.

ಮೃತರ ಪೈಕಿ ಮೂವರು ಹೋಟೆಲ್‌ ಸಿಬ್ಬಂದಿಯಾಗಿದ್ದು, ಇನ್ನುಳಿದ ನಾಲ್ವರು ಪೌರಕಾರ್ಮಿಕರು ಎನ್ನಲಾಗಿದೆ. ನಿರ್ಲಕ್ಷ್ಯದ ಆರೋಪದ ಮೇಲೆ ಹೋಟೆಲ್‌ ಮಾಲೀಕನ ಮೇಲೆ ಪ್ರಕರಣ ದಾಖಲಿಸಿಲಾಗಿದೆ. ಮೃತ ಹೋಟೆಲ್‌ ಸಿಬ್ಬಂದಿಯನ್ನು ಜೈ ವಾಸವ (24), ವಿಜಯ್‌ ಚೌಹಾಣ್‌ (22), ಸಹದೇವ ವಾಸವ (22) ಎಂದು ಗುರುತಿಸಲಾಗಿದೆ. ಮೃತ ಪೌರ ಕಾರ್ಮಿಕರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಹೊಟೇಲ್‌ನ ಟ್ಯಾಂಕ್‌ ಸ್ವಚ್ಛಗೊಳಿಸಲೆಂದು ಮೊದಲಿಗೆ ಸಿಬ್ಬಂದಿಯೊಬ್ಬರುಟ್ಯಾಂಕ್‌ಗೆ ಇಳಿದಿದ್ದಾರೆ. ಕೆಲ ನಿಮಿಷಗಳ ನಂತರ ಅವರು ಪ್ರಜ್ಞಾ ಹೀನರಾಗಿದ್ದಾರೆ. ಅವರನ್ನು ಮೇಲೆತ್ತಲೆಂದು ಮತ್ತೊಬ್ಬರು ಇಳಿದಿದ್ದಾರೆ. ಆವರಿಗೂ ಅದೇ ಪರಿಸ್ಥಿತಿಯುಂಟಾಗಿದೆ. ಹೀಗೆ ಮೂವರೂ ಸಾವಿಗೀಡಾಗಿದ್ದರು. ವಿಷಾನಿಲದ ಪರಿಣಾಮವಾಗಿಹೋಟೆಲ್‌ ಸಿಬ್ಬಂದಿ ಮೃತಪಟ್ಟಿದ್ದರು. ಇದಾದ ನಂತರ ಟಾಂಕ್‌ ಇಳಿದ ನಾಲ್ವರು ಕಾರ್ಮಿಕರೂ ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದಾರೆ.

ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು ದೇಹಗಳನ್ನು ಹೊರತೆಗೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT