ಕೈಥಪೋಯಿಲ್ನ ಶಿಬಿರದಲ್ಲಿಪರಿಹಾರ ಸಾಮಗ್ರಿ ವಿತರಣೆ ವೇಳೆ ಮಾತನಾಡಿದ ರಾಹುಲ್, ‘ನಿಮ್ಮ ಸಂಸದನಾಗಿ ಮುಖ್ಯಮಂತ್ರಿಯವರಿಗೆ ಕರೆ ಮಾಡಿ ಎಷ್ಟು ಸಾಧ್ಯವೋ ಅಷ್ಟು ಗರಿಷ್ಠ ಪ್ರಮಾಣದಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದೇನೆ. ಪ್ರಧಾನ ಮಂತ್ರಿಯವರಿಗೂ ಕರೆ ಮಾಡಿ ಮಾತನಾಡಿದ್ದು ಇಲ್ಲಿನ ದುರಂತದ ಬಗ್ಗೆ ವಿವರಿಸಿದ್ದೇನೆ. ಕೇಂದ್ರ ಸರ್ಕಾರದ ನೆರವನ್ನು ಕೋರಿದ್ದೇನೆ’ ಎಂದು ತಿಳಿಸಿದ್ದಾರೆ.