<p><strong>ನವದೆಹಲಿ:</strong> ಕೊರೊನಾ ವೈರಸ್ ಸೋಂಕು ಹಾಗೂ ಪ್ರಯಾಣಿಕರಿಲ್ಲದೇ ಇರುವ ಕಾರಣ ಶುಕ್ರವಾರದಿಂದಇದೇ 31ರವರೆಗೆ 84 ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಗುರುವಾರ ರದ್ದುಗೊಳಿಸಿದೆ.</p>.<p>ಈ ಮೂಲಕ ರದ್ದುಗೊಂಡ ಒಟ್ಟು ರೈಲುಗಳ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. ‘ಈ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ರೈಲು ರದ್ದುಗೊಂಡಿರುವ ಮಾಹಿತಿಯನ್ನು ನೀಡಲಾಗುತ್ತಿದ್ದು, ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್ ನೀಡಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಮುಂಜಾಗ್ರತಾ ಕ್ರಮವಾಗಿ ಜ್ವರ, ಶೀತ ಅಥವಾ ಉಸಿರಾಟದ ಸಮಸ್ಯೆ ಇರುವ ಯಾವ ಸಿಬ್ಬಂದಿಯೂ ಊಟ, ತಿಂಡಿ ವಿತರಿಸುವ ವಹಿವಾಟು ನಡೆಸದಂತೆ ಸೂಚಿಸಲು ಆಯಾ ವಲಯಗಳ ಕ್ಯಾಟರಿಂಗ್ ವಿಭಾಗಕ್ಕೆ ರೈಲ್ವೆ ಇಲಾಖೆ ಸೂಚಿಸಿದೆ.</p>.<p class="Subhead">ಎಸಿ ರೈಲುಗಳ ಸಂಚಾರ ಸ್ಥಗಿತ: ಮುಂಜಾಗ್ರತಾ ಕ್ರಮವಾಗಿ ಮುಂಬೈನಲ್ಲಿ 28 ಹವಾನಿಯಂತ್ರಿತ (ಎಸಿ) ರೈಲುಗಳ ಸಂಚಾರ ಸ್ಥಗಿತಗೊಳಿಸಲು ಕೇಂದ್ರ ಹಾಗೂ ಪಶ್ಚಿಮ ರೈಲ್ವೆ ನಿರ್ಧರಿಸಿದೆ. ‘ಎಸಿ ರೈಲುಗಳ ಬದಲಾಗಿ ಸಾಮಾನ್ಯ ರೈಲುಗಳೇ ಕಾರ್ಯಾಚರಣೆ ನಡೆಸಲಿವೆ. ಮಾರ್ಚ್ ಅಂತ್ಯದವರೆಗೆ ಇದು ಜಾರಿಯಲ್ಲಿರಲಿದೆ’ ಎಂದು ವಿಭಾಗದ ವಕ್ತಾರರೊಬ್ಬರು ತಿಳಿಸಿದರು</p>.<p class="Subhead"><strong>ಠಸ್ಸೆ ಇದ್ದವರು ರೈಲಿನಿಂದ ಹೊರಗೆ</strong></p>.<p class="Subhead">ಸೌರಾಷ್ಟ್ರ ಎಕ್ಸ್ಪ್ರೆಸ್ ರೈಲಿನಲ್ಲಿ ಇಲ್ಲಿಂದ ಗುಜರಾತ್ಗೆ ಹೊರಟಿದ್ದ ಆರು ಪ್ರಯಾಣಿಕರನ್ನು ಬೋರಿವಲಿ ರೈಲು ನಿಲ್ದಾಣದಲ್ಲೇ ರೈಲಿನಿಂದ ಕೆಳಗಿಳಿಸಿದ ಘಟನೆ ನಡೆದಿದೆ.</p>.<p>ಈ ಆರೂ ಜನರು ಇತ್ತೀಚೆಗಷ್ಟೇಸಿಂಗಪುರದಿಂದ ಭಾರತಕ್ಕೆ ಮರಳಿದ್ದರು. ಮುಂಜಾಗ್ರತಾ ಕ್ರಮವಾಗಿ 14 ದಿನ ಮನೆ ಬಿಟ್ಟು ಹೊರಹೋಗದಂತೆ ಸರ್ಕಾರ ಅವರ ಕೈಗೆ ಠಸ್ಸೆ ಹಾಕಿತ್ತು. ಈ ಸೂಚನೆಯನ್ನು ಉಲ್ಲಂಘಿಸಿ ಅವರು ವಡೋದರಕ್ಕೆ ಪ್ರಯಾಣ ಬೆಳೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೊರೊನಾ ವೈರಸ್ ಸೋಂಕು ಹಾಗೂ ಪ್ರಯಾಣಿಕರಿಲ್ಲದೇ ಇರುವ ಕಾರಣ ಶುಕ್ರವಾರದಿಂದಇದೇ 31ರವರೆಗೆ 84 ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಗುರುವಾರ ರದ್ದುಗೊಳಿಸಿದೆ.</p>.<p>ಈ ಮೂಲಕ ರದ್ದುಗೊಂಡ ಒಟ್ಟು ರೈಲುಗಳ ಸಂಖ್ಯೆ 151ಕ್ಕೆ ಏರಿಕೆಯಾಗಿದೆ. ‘ಈ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ರೈಲು ರದ್ದುಗೊಂಡಿರುವ ಮಾಹಿತಿಯನ್ನು ನೀಡಲಾಗುತ್ತಿದ್ದು, ಪ್ರಯಾಣಿಕರಿಗೆ ಟಿಕೆಟ್ ಹಣ ವಾಪಸ್ ನೀಡಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಮುಂಜಾಗ್ರತಾ ಕ್ರಮವಾಗಿ ಜ್ವರ, ಶೀತ ಅಥವಾ ಉಸಿರಾಟದ ಸಮಸ್ಯೆ ಇರುವ ಯಾವ ಸಿಬ್ಬಂದಿಯೂ ಊಟ, ತಿಂಡಿ ವಿತರಿಸುವ ವಹಿವಾಟು ನಡೆಸದಂತೆ ಸೂಚಿಸಲು ಆಯಾ ವಲಯಗಳ ಕ್ಯಾಟರಿಂಗ್ ವಿಭಾಗಕ್ಕೆ ರೈಲ್ವೆ ಇಲಾಖೆ ಸೂಚಿಸಿದೆ.</p>.<p class="Subhead">ಎಸಿ ರೈಲುಗಳ ಸಂಚಾರ ಸ್ಥಗಿತ: ಮುಂಜಾಗ್ರತಾ ಕ್ರಮವಾಗಿ ಮುಂಬೈನಲ್ಲಿ 28 ಹವಾನಿಯಂತ್ರಿತ (ಎಸಿ) ರೈಲುಗಳ ಸಂಚಾರ ಸ್ಥಗಿತಗೊಳಿಸಲು ಕೇಂದ್ರ ಹಾಗೂ ಪಶ್ಚಿಮ ರೈಲ್ವೆ ನಿರ್ಧರಿಸಿದೆ. ‘ಎಸಿ ರೈಲುಗಳ ಬದಲಾಗಿ ಸಾಮಾನ್ಯ ರೈಲುಗಳೇ ಕಾರ್ಯಾಚರಣೆ ನಡೆಸಲಿವೆ. ಮಾರ್ಚ್ ಅಂತ್ಯದವರೆಗೆ ಇದು ಜಾರಿಯಲ್ಲಿರಲಿದೆ’ ಎಂದು ವಿಭಾಗದ ವಕ್ತಾರರೊಬ್ಬರು ತಿಳಿಸಿದರು</p>.<p class="Subhead"><strong>ಠಸ್ಸೆ ಇದ್ದವರು ರೈಲಿನಿಂದ ಹೊರಗೆ</strong></p>.<p class="Subhead">ಸೌರಾಷ್ಟ್ರ ಎಕ್ಸ್ಪ್ರೆಸ್ ರೈಲಿನಲ್ಲಿ ಇಲ್ಲಿಂದ ಗುಜರಾತ್ಗೆ ಹೊರಟಿದ್ದ ಆರು ಪ್ರಯಾಣಿಕರನ್ನು ಬೋರಿವಲಿ ರೈಲು ನಿಲ್ದಾಣದಲ್ಲೇ ರೈಲಿನಿಂದ ಕೆಳಗಿಳಿಸಿದ ಘಟನೆ ನಡೆದಿದೆ.</p>.<p>ಈ ಆರೂ ಜನರು ಇತ್ತೀಚೆಗಷ್ಟೇಸಿಂಗಪುರದಿಂದ ಭಾರತಕ್ಕೆ ಮರಳಿದ್ದರು. ಮುಂಜಾಗ್ರತಾ ಕ್ರಮವಾಗಿ 14 ದಿನ ಮನೆ ಬಿಟ್ಟು ಹೊರಹೋಗದಂತೆ ಸರ್ಕಾರ ಅವರ ಕೈಗೆ ಠಸ್ಸೆ ಹಾಕಿತ್ತು. ಈ ಸೂಚನೆಯನ್ನು ಉಲ್ಲಂಘಿಸಿ ಅವರು ವಡೋದರಕ್ಕೆ ಪ್ರಯಾಣ ಬೆಳೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>