ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಗಾಂಧಿ ಹತ್ಯೆಗೆ ಬಿಜೆಪಿಯ ದ್ವೇಷ ರಾಜಕೀಯವೇ ಕಾರಣ: ಅಹ್ಮದ್ ಪಟೇಲ್

Last Updated 9 ಮೇ 2019, 9:21 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಗೆ ಬಿಜೆಪಿಯ ದ್ವೇಷ ರಾಜಕೀಯವೇ ಕಾರಣ ಎಂದು ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಆರೋಪಿಸಿದ್ದಾರೆ.

‘ದೇಶಕ್ಕಾಗಿ ಹುತಾತ್ಮರಾದ ಮಾಜಿ ಪ್ರಧಾನಿಯನ್ನು ನಿಂದಿಸುವುದು ಹೇಡಿತನದ ಪರಮಾವಧಿ, ಈ ಹತ್ಯಗೆ ಯಾರು ಕಾರಣ? ರಾಜೀವ್ ಗಾಂಧಿಯವರ ಜೀವಕ್ಕೆ ಅಪಾಯವಿರುವುದಾಗಿ ಗುಪ್ತಚರ ಮಾಹಿತಿ ಇದ್ದರೂ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರ ಹೆಚ್ಚುವರಿ ಭದ್ರತೆಯನ್ನು ನಿರಾಕರಿಸಿರುವುದು ಹತ್ಯೆಗೆ ಮೂಲ ಕಾರಣ ಎಂದು ಅಹ್ಮದ್ ಪಟೇಲ್ ಟ್ವೀಟ್ ಮಾಡಿದ್ದಾರೆ.


ಹೆಚ್ಚುವರಿ ಭದ್ರತೆಗಾಗಿ ಹಲವು ಬಾರಿ ವಿ.ಪಿ.ಸಿಂಗ್ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ಪಟೇಲ್ ತಿಳಿಸಿದ್ದಾರೆ.

ಬಿಜೆಪಿ ದ್ವೇಷ ರಾಜಕಾರಣದಿಂದಾಗಿ ಮಾಜಿ ಪ್ರಧಾನಿಯ ಹತ್ಯೆ ನಡೆಯಿತು. ಅವರ ಮೇಲೆ ಇರುವ ಆರೋಪಗಳಿಗೆ ಉತ್ತರಿಸಲು ಇಂದು ಅವರು ನಮ್ಮೊಂದಿಗಿಲ್ಲ ಎಂದು ಪಟೇಲ್ ಹೇಳಿದ್ದಾರೆ

ರಾಜೀವ್ ಗಾಂಧಿ ಅವರು ನಂಬರ್ 1 ಭ್ರಷ್ಟಾಚಾರಿಯಾಗಿ ಜೀವನ ಕೊನೆಗೊಳಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ವ್ಯಂಗ್ಯವಾಡಿದ್ದರು. ಐಎನ್‌ಎಸ್ ಯುದ್ಧ ನೌಕೆಯನ್ನು ಕುಟುಂಬದೊಂದಿಗೆ ರಜಾದಿನ ಕಳೆಯಲು ರಾಜೀವ್ ಗಾಂಧಿ ಬಳಸಿರುವುದಾಗಿ ಮೋದಿ ಬುಧವಾರ ಆರೋಪಿಸಿದ್ದರು. ಇದಕ್ಕೆ ಅಹ್ಮದ್ ಪಟೇಲ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT