<p>ಪಟ್ನಾ:ಲೇಹ್– ಲಡಾಖ್ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲು 1,500 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ವಿಶೇಷ ರೈಲಿನ ಮೂಲಕ ಜಾರ್ಖಂಡ್ನಿಂದ ತೆರಳಿದರು.</p>.<p>ಗಡಿ ರಸ್ತೆ ಸಂಸ್ಥೆಯು (ಬಿಆರ್ಒ) ಈ ರೈಲು ವ್ಯವಸ್ಥೆ ಮಾಡಿತ್ತು. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. </p>.<p>‘ಭಾರತ– ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿ ದೇಶಕ್ಕಾಗಿ ಈ ಪ್ರಯಾಣ ಬೆಳೆಸಿದ್ದೀರಿ. ನೀವು ಯಾವ ಯೋಧರಿಗೂ ಕಡಿಮೆ ಇಲ್ಲ ಎಂದು ಶ್ಲಾಘಿಸಿದ ಮುಖ್ಯಮಂತ್ರಿ, ನಿಮ್ಮ ಪ್ರಯಾಣ ಸುಖಕರವಾಗಿರಲಿ’ ಎಂದು ಹಾರೈಸಿದರು.</p>.<p>ದೈಹಿಕವಾಗಿ ಸದೃಢವಾಗಿರುವ, ಪ್ರತಿಕೂಲ ಪರಿಸ್ಥಿತಿ ಮತ್ತು ಪ್ರತಿಕೂಲ ಹವಾಮಾನಕ್ಕೆ ಒಗ್ಗಿಕೊಂಡು ಕೆಲಸ ಮಾಡಲು ಶಕ್ತರಾಗಿರುವವರನ್ನೇ ಆಯ್ಕೆ ಮಾಡಿ ಕಳುಹಿಸಲಾಗಿದೆ.</p>.<p>ಈ ಕಾರ್ಮಿಕರಿಗೆ ಸೂಕ್ತ ವೇತನದ ಜೊತೆ ಇತರೆ ಸವಲತ್ತುಗಳನ್ನು ನೀಡುವ ಒಪ್ಪಂದ ಪತ್ರಕ್ಕೆ ಬಿಆರ್ಒ ಸಹಿ ಹಾಕಿದೆ. ಈ ಹಿಂದೆಯೂ ಈ ಕಾರ್ಮಿಕರು ಲೇಹ್ ಲಡಾಖ್ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮಧ್ಯವರ್ತಿಗಳ ಕಾರಣದಿಂದಾಗಿ ಅವರಿಗೆ ಸರಿಯಾದ ವೇತನ ದೊರಕುತ್ತಿರಲಿಲ್ಲ.</p>.<p>ಮುಖ್ಯಮಂತ್ರಿಈ ಕಾರ್ಮಿಕರಿಗೆ ಉದ್ಯೋಗ ಕಾರ್ಡ್ ಮತ್ತು ಪಡಿತರ ಕಿಟ್ಗಳನ್ನು ವಿತರಿಸಿದರು. ಕಾರ್ಮಿಕರಿಗೆ ಈ ಹಿಂದೆ ₹ 15 ಸಾವಿರ ವೇತನ ನೀಡಲಾಗುತ್ತಿತ್ತು. ಈಗ ₹ 18,000 ಸಾವಿರಕ್ಕೆ ಏರಿಕೆ ಮಾಡಲಾಗಿದೆ.</p>.<p>ಲಾಕ್ಡೌನ್ನಿಂದ ಲೇಹ್– ಲಡಾಖ್ನಲ್ಲಿ ಸಿಲುಕಿಕೊಂಡಿದ್ದ ಈ ಕಾರ್ಮಿಕರನ್ನು ಕಳೆದ ತಿಂಗಳು ವಿಮಾನದ ಮೂಲಕ ಸರ್ಕಾರ ರಾಜ್ಯಕ್ಕೆ ಕರೆಸಿಕೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಟ್ನಾ:ಲೇಹ್– ಲಡಾಖ್ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲು 1,500 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ವಿಶೇಷ ರೈಲಿನ ಮೂಲಕ ಜಾರ್ಖಂಡ್ನಿಂದ ತೆರಳಿದರು.</p>.<p>ಗಡಿ ರಸ್ತೆ ಸಂಸ್ಥೆಯು (ಬಿಆರ್ಒ) ಈ ರೈಲು ವ್ಯವಸ್ಥೆ ಮಾಡಿತ್ತು. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. </p>.<p>‘ಭಾರತ– ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿ ದೇಶಕ್ಕಾಗಿ ಈ ಪ್ರಯಾಣ ಬೆಳೆಸಿದ್ದೀರಿ. ನೀವು ಯಾವ ಯೋಧರಿಗೂ ಕಡಿಮೆ ಇಲ್ಲ ಎಂದು ಶ್ಲಾಘಿಸಿದ ಮುಖ್ಯಮಂತ್ರಿ, ನಿಮ್ಮ ಪ್ರಯಾಣ ಸುಖಕರವಾಗಿರಲಿ’ ಎಂದು ಹಾರೈಸಿದರು.</p>.<p>ದೈಹಿಕವಾಗಿ ಸದೃಢವಾಗಿರುವ, ಪ್ರತಿಕೂಲ ಪರಿಸ್ಥಿತಿ ಮತ್ತು ಪ್ರತಿಕೂಲ ಹವಾಮಾನಕ್ಕೆ ಒಗ್ಗಿಕೊಂಡು ಕೆಲಸ ಮಾಡಲು ಶಕ್ತರಾಗಿರುವವರನ್ನೇ ಆಯ್ಕೆ ಮಾಡಿ ಕಳುಹಿಸಲಾಗಿದೆ.</p>.<p>ಈ ಕಾರ್ಮಿಕರಿಗೆ ಸೂಕ್ತ ವೇತನದ ಜೊತೆ ಇತರೆ ಸವಲತ್ತುಗಳನ್ನು ನೀಡುವ ಒಪ್ಪಂದ ಪತ್ರಕ್ಕೆ ಬಿಆರ್ಒ ಸಹಿ ಹಾಕಿದೆ. ಈ ಹಿಂದೆಯೂ ಈ ಕಾರ್ಮಿಕರು ಲೇಹ್ ಲಡಾಖ್ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮಧ್ಯವರ್ತಿಗಳ ಕಾರಣದಿಂದಾಗಿ ಅವರಿಗೆ ಸರಿಯಾದ ವೇತನ ದೊರಕುತ್ತಿರಲಿಲ್ಲ.</p>.<p>ಮುಖ್ಯಮಂತ್ರಿಈ ಕಾರ್ಮಿಕರಿಗೆ ಉದ್ಯೋಗ ಕಾರ್ಡ್ ಮತ್ತು ಪಡಿತರ ಕಿಟ್ಗಳನ್ನು ವಿತರಿಸಿದರು. ಕಾರ್ಮಿಕರಿಗೆ ಈ ಹಿಂದೆ ₹ 15 ಸಾವಿರ ವೇತನ ನೀಡಲಾಗುತ್ತಿತ್ತು. ಈಗ ₹ 18,000 ಸಾವಿರಕ್ಕೆ ಏರಿಕೆ ಮಾಡಲಾಗಿದೆ.</p>.<p>ಲಾಕ್ಡೌನ್ನಿಂದ ಲೇಹ್– ಲಡಾಖ್ನಲ್ಲಿ ಸಿಲುಕಿಕೊಂಡಿದ್ದ ಈ ಕಾರ್ಮಿಕರನ್ನು ಕಳೆದ ತಿಂಗಳು ವಿಮಾನದ ಮೂಲಕ ಸರ್ಕಾರ ರಾಜ್ಯಕ್ಕೆ ಕರೆಸಿಕೊಂಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>