ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ಹಣದಿಂದಲೇ ಈ ಕಟ್ಟಡವನ್ನು ನಿರ್ಮಿಸಿದ್ದರು. ಈ ಕಟ್ಟಡವನ್ನು ಖಾಲಿ ಮಾಡುವಂತೆ ಸಿಆರ್ಡಿಎ ಈಚೆಗೆ ಟಿಡಿಪಿಗೆ ನೋಟಿಸ್ ನೀಡಿತ್ತು. ಇದಾದ ಬಳಿಕ, ‘ಕಟ್ಟಡವನ್ನು ಪಕ್ಷದ ಚಟುವಟಿಕೆಗಳಿಗಾಗಿ
ನಿರ್ಮಿಸಲಾಗಿತ್ತು, ಆ ಉದ್ದೇಶಕ್ಕೆ ಬಳಸಲು ಅನುಮತಿ ಕೊಡಬೇಕು’ ಎಂದು ನಾಯ್ಡು ಅವರು ಸಿಆರ್ಡಿಎಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದರು. ಆದರೆ ಜಗನ್ಮೋಹನ್ ನೇತೃತ್ವದ ಸರ್ಕಾರವು ಅದನ್ನು ಒಪ್ಪದೆ, ಟಿಡಿಪಿಗೆ ಸೇರಿದ್ದ ಎಲ್ಲಾ ವಸ್ತುಗಳನ್ನು ಕಟ್ಟಡದೊಳಗಿಂದ ತೆರವು ಮಾಡುವ ಕೆಲಸ ಆರಂಭಿಸಿದೆ.