ನವದೆಹಲಿ: ಕೋವಿಡ್ -19 ಜಾಗತಿಕ ಪಿಡುಗು ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ಭಾರತೀಯ ಸೇನೆ ಆಪರೇಷನ್ ನಮಸ್ತೆ ಎಂಬ ಅಭಿಯಾನ ಆರಂಭಿಸಿದೆ. ಭಾರತೀಯ ಸೇನೆ ಇದನ್ನು ಆ್ಯಂಟಿ ಕೋವಿಡ್ 19 ಎಂದು ಕರೆಯುತ್ತಿದ್ದು, ಈ ಮೂಲಕ ದೇಶದಲ್ಲಿ 8 ಕ್ವಾರಂಟೈನ್ ಸೌಲಭ್ಯಗಳನ್ನು ಒದಗಿಸಿದೆ.
ನಿಮ್ಮ ಆಪ್ತರ ಬಗ್ಗೆ ಯಾವ ರೀತಿಯ ಆತಂಕವೂ ಬೇಡ, ಪರಾಕ್ರಮ್ ಕಾರ್ಯಾಚರಣೆವೇಳೆಯೂ ರಜೆ ರದ್ದು ಮಾಡುವ ಪರಿಸ್ಥಿತಿ ಬಂದಿತ್ತು. ಈ ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ನಿಭಾಯಿಸಿತ್ತು. ಅದೇ ರೀತಿ ಆಪರೇಷನ್ ನಮಸ್ತೆ ಕೂಡಾ ಯಶಸ್ವಿಯಾಗುತ್ತದೆ ಎಂದು ಸೇನೆಯ ಮುಖ್ಯಸ್ಥ ಎಂ.ಎಂ ನರವಣೆ ಸೇನಾ ಸಿಬ್ಬಂದಿಗಳಿಗೆ ಭರವಸೆ ನೀಡಿದ್ದಾರೆ.