<p><strong>ನವದೆಹಲಿ: </strong>ಕೋವಿಡ್ -19 ಜಾಗತಿಕ ಪಿಡುಗು ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ಭಾರತೀಯ ಸೇನೆ ಆಪರೇಷನ್ ನಮಸ್ತೆ ಎಂಬ ಅಭಿಯಾನ ಆರಂಭಿಸಿದೆ. ಭಾರತೀಯ ಸೇನೆ ಇದನ್ನು ಆ್ಯಂಟಿ ಕೋವಿಡ್ 19 ಎಂದು ಕರೆಯುತ್ತಿದ್ದು, ಈ ಮೂಲಕ ದೇಶದಲ್ಲಿ 8 ಕ್ವಾರಂಟೈನ್ ಸೌಲಭ್ಯಗಳನ್ನು ಒದಗಿಸಿದೆ.<br /><br />ನಿಮ್ಮ ಆಪ್ತರ ಬಗ್ಗೆ ಯಾವ ರೀತಿಯ ಆತಂಕವೂ ಬೇಡ, ಪರಾಕ್ರಮ್ ಕಾರ್ಯಾಚರಣೆವೇಳೆಯೂ ರಜೆ ರದ್ದು ಮಾಡುವ ಪರಿಸ್ಥಿತಿ ಬಂದಿತ್ತು. ಈ ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ನಿಭಾಯಿಸಿತ್ತು. ಅದೇ ರೀತಿ ಆಪರೇಷನ್ ನಮಸ್ತೆ ಕೂಡಾ ಯಶಸ್ವಿಯಾಗುತ್ತದೆ ಎಂದು ಸೇನೆಯ ಮುಖ್ಯಸ್ಥ ಎಂ.ಎಂ ನರವಣೆ ಸೇನಾ ಸಿಬ್ಬಂದಿಗಳಿಗೆ ಭರವಸೆ ನೀಡಿದ್ದಾರೆ.<br /></p>.<p><strong>ಏನಿದು ಆಪರೇಷನ್ ನಮಸ್ತೆ ಅಭಿಯಾನ</strong></p>.<p>ಮಾರ್ಚ್ 27ರಂದು ಆರಂಭವಾದ ಈಅಭಿಯಾನದ ಮೂಲಕ ಸೇನೆಯು ಸಹಾಯವಾಣಿ ಆರಂಭಿಸಿದೆ. ತುರ್ತು ಸಂದರ್ಭಗಳಲ್ಲಿ ಯೋಧರ ಕುಟಂಬವು ಹತ್ತಿರದಲ್ಲಿರುವ ಸೇನಾ ಶಿಬಿರಕ್ಕೆ ಭೇಟಿ ನೀಡಲಿರುವ ಸೌಕರ್ಯ ಒದಗಿಸಲಾಗಿದೆ. ಯುದ್ಧ ತಂತ್ರ ಮತ್ತು ಕಾರ್ಯಾಚರಣೆಯ ಸಲುವಾಗಿ ಯೋಧರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ದೇಶದ ರಕ್ಷಣೆಗಾಗಿ ತಮ್ಮನ್ನು ತಾವು ಸುರಕ್ಷಿತ ಮತ್ತು ಆರೋಗ್ಯಕರವಾಗಿರಿಸಲೇಬೇಕು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನಾವು ಯೋಧರು ಪಾಲಿಸಲೇ ಬೇಕಾದ ಎರಡು ಮೂರು ಸೂಚನೆಗಳನ್ನು ಕಳೆದ ವಾರವೇ ನೀಡಿದ್ದೆವು ಅಂದಿದ್ದಾರೆ ನರವಣೆ.</p>.<p>ಸೇನಾ ಮುಖ್ಯಸ್ಥನಾಗಿರುವ ನನಗೆ ನಮ್ಮ ಸೇನಾಪಡೆಯನ್ನು ಸುರಕ್ಷಿತ ಮತ್ತು ಆರೋಗ್ಯಕರವಾಗಿರಿಸುವ ಹೊಣೆ ಇದೆ. ಕೊರೊನಾ ವೈರಸ್ನಿಂದ ನಮ್ಮನ್ನು ನಾವೇ ರಕ್ಷಿಸಿಕೊಂಡರೇ ಮಾತ್ರ ದೇಶದ ಸೇವೆ ಮಾಡಲು ನಮ್ಮಿಂದ ಸಾಧ್ಯ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕೋವಿಡ್ -19 ಜಾಗತಿಕ ಪಿಡುಗು ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ಭಾರತೀಯ ಸೇನೆ ಆಪರೇಷನ್ ನಮಸ್ತೆ ಎಂಬ ಅಭಿಯಾನ ಆರಂಭಿಸಿದೆ. ಭಾರತೀಯ ಸೇನೆ ಇದನ್ನು ಆ್ಯಂಟಿ ಕೋವಿಡ್ 19 ಎಂದು ಕರೆಯುತ್ತಿದ್ದು, ಈ ಮೂಲಕ ದೇಶದಲ್ಲಿ 8 ಕ್ವಾರಂಟೈನ್ ಸೌಲಭ್ಯಗಳನ್ನು ಒದಗಿಸಿದೆ.<br /><br />ನಿಮ್ಮ ಆಪ್ತರ ಬಗ್ಗೆ ಯಾವ ರೀತಿಯ ಆತಂಕವೂ ಬೇಡ, ಪರಾಕ್ರಮ್ ಕಾರ್ಯಾಚರಣೆವೇಳೆಯೂ ರಜೆ ರದ್ದು ಮಾಡುವ ಪರಿಸ್ಥಿತಿ ಬಂದಿತ್ತು. ಈ ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ನಿಭಾಯಿಸಿತ್ತು. ಅದೇ ರೀತಿ ಆಪರೇಷನ್ ನಮಸ್ತೆ ಕೂಡಾ ಯಶಸ್ವಿಯಾಗುತ್ತದೆ ಎಂದು ಸೇನೆಯ ಮುಖ್ಯಸ್ಥ ಎಂ.ಎಂ ನರವಣೆ ಸೇನಾ ಸಿಬ್ಬಂದಿಗಳಿಗೆ ಭರವಸೆ ನೀಡಿದ್ದಾರೆ.<br /></p>.<p><strong>ಏನಿದು ಆಪರೇಷನ್ ನಮಸ್ತೆ ಅಭಿಯಾನ</strong></p>.<p>ಮಾರ್ಚ್ 27ರಂದು ಆರಂಭವಾದ ಈಅಭಿಯಾನದ ಮೂಲಕ ಸೇನೆಯು ಸಹಾಯವಾಣಿ ಆರಂಭಿಸಿದೆ. ತುರ್ತು ಸಂದರ್ಭಗಳಲ್ಲಿ ಯೋಧರ ಕುಟಂಬವು ಹತ್ತಿರದಲ್ಲಿರುವ ಸೇನಾ ಶಿಬಿರಕ್ಕೆ ಭೇಟಿ ನೀಡಲಿರುವ ಸೌಕರ್ಯ ಒದಗಿಸಲಾಗಿದೆ. ಯುದ್ಧ ತಂತ್ರ ಮತ್ತು ಕಾರ್ಯಾಚರಣೆಯ ಸಲುವಾಗಿ ಯೋಧರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ದೇಶದ ರಕ್ಷಣೆಗಾಗಿ ತಮ್ಮನ್ನು ತಾವು ಸುರಕ್ಷಿತ ಮತ್ತು ಆರೋಗ್ಯಕರವಾಗಿರಿಸಲೇಬೇಕು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನಾವು ಯೋಧರು ಪಾಲಿಸಲೇ ಬೇಕಾದ ಎರಡು ಮೂರು ಸೂಚನೆಗಳನ್ನು ಕಳೆದ ವಾರವೇ ನೀಡಿದ್ದೆವು ಅಂದಿದ್ದಾರೆ ನರವಣೆ.</p>.<p>ಸೇನಾ ಮುಖ್ಯಸ್ಥನಾಗಿರುವ ನನಗೆ ನಮ್ಮ ಸೇನಾಪಡೆಯನ್ನು ಸುರಕ್ಷಿತ ಮತ್ತು ಆರೋಗ್ಯಕರವಾಗಿರಿಸುವ ಹೊಣೆ ಇದೆ. ಕೊರೊನಾ ವೈರಸ್ನಿಂದ ನಮ್ಮನ್ನು ನಾವೇ ರಕ್ಷಿಸಿಕೊಂಡರೇ ಮಾತ್ರ ದೇಶದ ಸೇವೆ ಮಾಡಲು ನಮ್ಮಿಂದ ಸಾಧ್ಯ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>