ಗೋರಖ್ಪುರದ ಬೆಲ್ಘಾಟ್ ಎಂಬಲ್ಲಿಯೂ ಇದೇ ರೀತಿ 52 ಬಾವಲಿಗಳು ಕೇವಲ ಒಂದೇ ಗಂಟೆಯ ಅವಧಿಯಲ್ಲಿ ಸತ್ತಿದ್ದವು. ಇದರಿಂದ ಉತ್ತರ ಪ್ರದೇಶದಲ್ಲಿ ಆತಂಕ ಮನೆ ಮಾಡಿತ್ತು. ಸ್ಥಳಕ್ಕೆ ಬಂದಿದ್ದ ಅರಣ್ಯ ಅಧಿಕಾರಿಗಳು, ಬಾವಲಿಗಳ ಕಳೇಬರವನ್ನು ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ರವಾನಿಸಿದ್ದರು. ಈ ವೇಳೆ ಮಾತನಾಡಿದ್ದ ಅಧಿಕಾರಿಗಳು, ‘ಬಿಸಿಗಾಳಿ ಅಥವಾ ಕೀಟನಾಶಗಳಿಂದ ಬಾವಲಿಗಳು ಸತ್ತಿರಬಹುದು,’ ಎಂದು ಹೇಳಿದ್ದರು.