<p><strong>ಪಟ್ನಾ</strong>: ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣಕ್ಕಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ದಂಪತಿಗೆ ಮತದಾನದ ಹಕ್ಕು ನಿರಾಕರಿಸಬೇಕು ಎಂದು ಕೇಂದ್ರ ಪಶುಸಂಗೋಪನೆ ಸಚಿವ ಗಿರಿರಾಜ್ಸಿಂಗ್ ಹೇಳಿದ್ದಾರೆ.</p>.<p>‘ಎಲ್ಲ ಸಮುದಾಯದವರಿಗೂ ಇದು ಅನ್ವಯವಾಗಬೇಕು. ಯಾವುದೇ ಧಾರ್ಮಿಕ ಗುಂಪುಗಳಿಗೂ ವಿನಾಯಿತಿ ನೀಡಬಾರದು’ ಎಂದಿದ್ದಾರೆ.</p>.<p>1947ರಿಂದ 2019ರವರೆಗೆ ಜನಸಂಖ್ಯೆ ಏರಿಕೆಯಾಗಿರುವ ಅಂಕಿ–ಅಂಶಗಳ ಮಾಹಿತಿಯನ್ನು ಅವರು ವಿಶ್ವ ಜನಸಂಖ್ಯಾ ದಿನವಾದ ಗುರುವಾರ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.</p>.<p>‘ಜನಸಂಖ್ಯಾ ಸ್ಫೋಟವು ದೇಶದ ಆರ್ಥಿಕತೆಯ ಅಸಮತೋಲನಕ್ಕೆ ಕಾರಣವಾಗುತ್ತಿದೆ ಮತ್ತು ಸಾಮಾಜಿಕ ಸಾಮರಸ್ಯಕ್ಕೂ ಧಕ್ಕೆ ತರುತ್ತಿದೆ. ಧಾರ್ಮಿಕ ಅಡೆತಡೆಗಳೇ ಇದಕ್ಕೆ ಕಾರಣ’ ಎಂದು ಮುಸ್ಲಿಮರನ್ನು ಗುರಿಯಾಗಿಸಿ ಸಚಿವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.</p>.<p>’1947ರಲ್ಲಿ ನಡೆದಂತೆ ಇನ್ನೊಂದು ‘ಸಾಂಸ್ಕೃತಿಕ ವಿಭಜನೆ’ಯತ್ತ ಭಾರತ ಸಾಗುತ್ತಿದೆ. ಜನನ ನಿಯಂತ್ರಣ ಕಾನೂನು ರೂಪಿಸಲು ಎಲ್ಲ ರಾಜಕೀಯ ಪಕ್ಷಗಳು ಮುಂದೆ ಬರಬೇಕು’ ಎಂದೂ ತಿಳಿಸಿದ್ದಾರೆ.</p>.<p>ಗಿರಿರಾಜ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಹಾರದ ಆರ್ಜೆಡಿ ಅಧ್ಯಕ್ಷ ರಾಮ್ ಚಂದ್ರ ಪುರ್ಬೆ ’ಇದು ಚಿಲ್ಲರೆ ರಾಜಕೀಯ’ ಎಂದಿದ್ದಾರೆ.</p>.<p>‘ಸಚಿವರಿಗೆ ಇಂತಹ ಆಲೋಚನೆಗಳು ಎಲ್ಲಿಂದ ಬರುತ್ತವೆ? ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಂದ ಮತದಾನದ ಹಕ್ಕು ಕಸಿಯುವ ಬಗ್ಗೆ ಸಂವಿಧಾನ ಹೇಳಿದೆಯೇ?’ ಎಂದು ಬಿಹಾರದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪ್ರೇಮ್ ಚಂದ್ರ ಮಿಶ್ರಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ</strong>: ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣಕ್ಕಾಗಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ದಂಪತಿಗೆ ಮತದಾನದ ಹಕ್ಕು ನಿರಾಕರಿಸಬೇಕು ಎಂದು ಕೇಂದ್ರ ಪಶುಸಂಗೋಪನೆ ಸಚಿವ ಗಿರಿರಾಜ್ಸಿಂಗ್ ಹೇಳಿದ್ದಾರೆ.</p>.<p>‘ಎಲ್ಲ ಸಮುದಾಯದವರಿಗೂ ಇದು ಅನ್ವಯವಾಗಬೇಕು. ಯಾವುದೇ ಧಾರ್ಮಿಕ ಗುಂಪುಗಳಿಗೂ ವಿನಾಯಿತಿ ನೀಡಬಾರದು’ ಎಂದಿದ್ದಾರೆ.</p>.<p>1947ರಿಂದ 2019ರವರೆಗೆ ಜನಸಂಖ್ಯೆ ಏರಿಕೆಯಾಗಿರುವ ಅಂಕಿ–ಅಂಶಗಳ ಮಾಹಿತಿಯನ್ನು ಅವರು ವಿಶ್ವ ಜನಸಂಖ್ಯಾ ದಿನವಾದ ಗುರುವಾರ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.</p>.<p>‘ಜನಸಂಖ್ಯಾ ಸ್ಫೋಟವು ದೇಶದ ಆರ್ಥಿಕತೆಯ ಅಸಮತೋಲನಕ್ಕೆ ಕಾರಣವಾಗುತ್ತಿದೆ ಮತ್ತು ಸಾಮಾಜಿಕ ಸಾಮರಸ್ಯಕ್ಕೂ ಧಕ್ಕೆ ತರುತ್ತಿದೆ. ಧಾರ್ಮಿಕ ಅಡೆತಡೆಗಳೇ ಇದಕ್ಕೆ ಕಾರಣ’ ಎಂದು ಮುಸ್ಲಿಮರನ್ನು ಗುರಿಯಾಗಿಸಿ ಸಚಿವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.</p>.<p>’1947ರಲ್ಲಿ ನಡೆದಂತೆ ಇನ್ನೊಂದು ‘ಸಾಂಸ್ಕೃತಿಕ ವಿಭಜನೆ’ಯತ್ತ ಭಾರತ ಸಾಗುತ್ತಿದೆ. ಜನನ ನಿಯಂತ್ರಣ ಕಾನೂನು ರೂಪಿಸಲು ಎಲ್ಲ ರಾಜಕೀಯ ಪಕ್ಷಗಳು ಮುಂದೆ ಬರಬೇಕು’ ಎಂದೂ ತಿಳಿಸಿದ್ದಾರೆ.</p>.<p>ಗಿರಿರಾಜ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಹಾರದ ಆರ್ಜೆಡಿ ಅಧ್ಯಕ್ಷ ರಾಮ್ ಚಂದ್ರ ಪುರ್ಬೆ ’ಇದು ಚಿಲ್ಲರೆ ರಾಜಕೀಯ’ ಎಂದಿದ್ದಾರೆ.</p>.<p>‘ಸಚಿವರಿಗೆ ಇಂತಹ ಆಲೋಚನೆಗಳು ಎಲ್ಲಿಂದ ಬರುತ್ತವೆ? ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಂದ ಮತದಾನದ ಹಕ್ಕು ಕಸಿಯುವ ಬಗ್ಗೆ ಸಂವಿಧಾನ ಹೇಳಿದೆಯೇ?’ ಎಂದು ಬಿಹಾರದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪ್ರೇಮ್ ಚಂದ್ರ ಮಿಶ್ರಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>