ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಸಂಜಯ್ ತಿವಾರಿ, ‘ನನ್ನ ಕಾರಿನಲ್ಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ, ಕಾರನ್ನು ಜಗದೀಶ್ಪುರದಲ್ಲಿ ಪಡಿತರ ವಿತರಿಸಲು ತೆಗೆದುಕೊಂಡು ಹೋಗಲಾಗಿತ್ತು. ಕಾರಿನಲ್ಲಿ ಮದ್ಯ ಪತ್ತೆಯಾಗಿರುವುದು ನನಗೂ ಆಶ್ಚರ್ಯವಾಗಿದೆ. ಇನ್ನಷ್ಟೆ ಪಡಿತರ ವಿತರಿಸಲು ಹೋದ ಕಾರ್ಮಿಕರನ್ನು ವಿಚಾರಿಸುತ್ತೇನೆ’ ಎಂದು ಹೇಳಿದ್ದಾರೆ.