<p><strong>ನವದೆಹಲಿ:</strong>ಬಜೆಟ್ ಮಂಡನೆಯಾದ ಬಳಿಕವೂ ದೆಹಲಿಯ ನಾರ್ಥ್ ಬ್ಲಾಕ್ನಲ್ಲಿರುವ ಹಣಕಾಸು ಸಚಿವಾಲಯದ ಕಚೇರಿಗೆ ಪತ್ರಕರ್ತರ ಪ್ರವೇಶ ನಿರ್ಬಂಧ ಮುಂದುವರಿಸಲಾಗಿದೆ ಎಂದು ವರದಿಯಾಗಿದೆ.</p>.<p>ಪಿಐಬಿಯಿಂದ (ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ) ಮಾನ್ಯತೆ ಪಡೆದಿರುವ ಪತ್ರಕರ್ತರೂ ಸಹ ಸರ್ಕಾರಿ ಅಧಿಕಾರಿಗಳಿಂದ ಅನುಮತಿ ಪಡೆದರೆ ಮಾತ್ರವೇ ಸದ್ಯ ಹಣಕಾಸು ಸಚಿವಾಲಯ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪಿಐಬಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೂ ಸಚಿವಾಲಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಇದೇ ಮೊದಲು ಎನ್ನಲಾಗಿದೆ.</p>.<p>ಸಾಮಾನ್ಯವಾಗಿ ಬಜೆಟ್ ಮಂಡನೆಗೂ ಮೊದಲಿನ ಎರಡು ತಿಂಗಳು, ಬಜೆಟ್ ಸಿದ್ಧತೆ ವೇಳೆ ಸಚಿವಾಲಯಕ್ಕೆ ಪತ್ರಪರ್ತರ ಪ್ರವೇಶ ನಿರ್ಬಂಧಿಸಿರಲಾಗುತ್ತದೆ. ಆದರೆ, ಪಿಐಬಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆಬಜೆಟ್ ಮಂಡನೆಯಾದ ಬಳಿಕ ಸಚಿವಾಲಯಕ್ಕೆ ಮುಕ್ತ ಪ್ರವೇಶವಿದೆ.</p>.<p>ಈ ಮಧ್ಯೆ, ಪತ್ರಕರ್ತರ ನಿರ್ಬಂಧಕ್ಕೆ ಸಂಬಂಧಿಸಿ ಅಧಿಕೃತ ಆದೇಶ ಹೊರಡಿಸಲಾಗಿಲ್ಲ ಎಂದು ಹಣಕಾಸು ಸಚಿವಾಲಯದ ವಕ್ತಾರರು ತಿಳಿಸಿರುವುದಾಗಿ <a href="https://theprint.in/india/governance/budget-done-but-nirmala-sitharaman-restricts-entry-of-journalists-into-finance-ministry/260372/" target="_blank"><strong>ದಿ ಪ್ರಿಂಟ್</strong></a> ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong>ಬಜೆಟ್ ಮಂಡನೆಯಾದ ಬಳಿಕವೂ ದೆಹಲಿಯ ನಾರ್ಥ್ ಬ್ಲಾಕ್ನಲ್ಲಿರುವ ಹಣಕಾಸು ಸಚಿವಾಲಯದ ಕಚೇರಿಗೆ ಪತ್ರಕರ್ತರ ಪ್ರವೇಶ ನಿರ್ಬಂಧ ಮುಂದುವರಿಸಲಾಗಿದೆ ಎಂದು ವರದಿಯಾಗಿದೆ.</p>.<p>ಪಿಐಬಿಯಿಂದ (ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ) ಮಾನ್ಯತೆ ಪಡೆದಿರುವ ಪತ್ರಕರ್ತರೂ ಸಹ ಸರ್ಕಾರಿ ಅಧಿಕಾರಿಗಳಿಂದ ಅನುಮತಿ ಪಡೆದರೆ ಮಾತ್ರವೇ ಸದ್ಯ ಹಣಕಾಸು ಸಚಿವಾಲಯ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪಿಐಬಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೂ ಸಚಿವಾಲಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಇದೇ ಮೊದಲು ಎನ್ನಲಾಗಿದೆ.</p>.<p>ಸಾಮಾನ್ಯವಾಗಿ ಬಜೆಟ್ ಮಂಡನೆಗೂ ಮೊದಲಿನ ಎರಡು ತಿಂಗಳು, ಬಜೆಟ್ ಸಿದ್ಧತೆ ವೇಳೆ ಸಚಿವಾಲಯಕ್ಕೆ ಪತ್ರಪರ್ತರ ಪ್ರವೇಶ ನಿರ್ಬಂಧಿಸಿರಲಾಗುತ್ತದೆ. ಆದರೆ, ಪಿಐಬಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆಬಜೆಟ್ ಮಂಡನೆಯಾದ ಬಳಿಕ ಸಚಿವಾಲಯಕ್ಕೆ ಮುಕ್ತ ಪ್ರವೇಶವಿದೆ.</p>.<p>ಈ ಮಧ್ಯೆ, ಪತ್ರಕರ್ತರ ನಿರ್ಬಂಧಕ್ಕೆ ಸಂಬಂಧಿಸಿ ಅಧಿಕೃತ ಆದೇಶ ಹೊರಡಿಸಲಾಗಿಲ್ಲ ಎಂದು ಹಣಕಾಸು ಸಚಿವಾಲಯದ ವಕ್ತಾರರು ತಿಳಿಸಿರುವುದಾಗಿ <a href="https://theprint.in/india/governance/budget-done-but-nirmala-sitharaman-restricts-entry-of-journalists-into-finance-ministry/260372/" target="_blank"><strong>ದಿ ಪ್ರಿಂಟ್</strong></a> ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>