ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಜೈ ಶ್ರೀರಾಮ್ ಎಂದು ಹೇಳದವರನ್ನು ಸ್ಮಶಾನಕ್ಕೆ ಕಳಿಸಿ' ವೈರಲ್ ಹಾಡಿನ ಗಾಯಕ ಬಂಧನ

Last Updated 26 ಜುಲೈ 2019, 12:53 IST
ಅಕ್ಷರ ಗಾತ್ರ

ಲಖನೌ: ಜೊ ನ ಬೋಲೆ ಜೈ ಶ್ರೀರಾಮ್, ಭೇಜ್ ದೊ ಉಸ್‌ಕೊ ಕಬರಿಸ್ತಾನ್ ( ಜೈ ಶ್ರೀರಾಮ್ ಎಂದು ಹೇಳದವರನ್ನು ಸ್ಮಶಾನಕ್ಕೆ ಕಳಿಸಿ) ಎಂಬ ಹಾಡಿನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಈ ಹಾಡಿನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಹಾಡು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಒತ್ತಾಯಿಸಿದ್ದರು.

ಆ ಹಾಡಿನ ಬಗ್ಗೆ ಕ್ರಮ ಕೈಗೊಂಡ ಲಖನೌ ಅಪರಾಧ ದಳ ಮತ್ತು ಸೋಷ್ಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಅಧಿಕಾರಿಗಳು ಯೂಟ್ಯೂಬ್‌ನಲ್ಲಿ ಈ ರೀತಿಯ ದ್ವೇಷ ಬಿತ್ತುವ ಹಾಡು ಅಪ್‌ಲೋಡ್ ಮಾಡಿದವರನ್ನು ಶುಕ್ರವಾರ ಬಂಧಿಸಿರುವುದಾಗಿ ಲಖನೌ ಎಸ್‌ಎಸ್‌ಪಿ ಕಲಾನಿಧಿ ನೈತಾನಿ ಹೇಳಿದ್ದಾರೆ.

ಹಾಡಿನ ಗಾಯಕ ವರುಣ್ ಉಪಾಧ್ಯಾಯ್ ಮತ್ತು ಇತರಮೂವರು ವ್ಯಕ್ತಿಗಳನ್ನುಬಂಧಿಸಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT