ಸಂತ್ರಸ್ತೆ ಶುಕ್ರವಾರ (ಏಪ್ರಿಲ್ 19) ಈ ಪತ್ರ ಬರೆದಿದ್ದಾರೆ. ಪತ್ರದ ಆಧಾರದಲ್ಲಿ ಹಲವು ಸುದ್ದಿ ಜಾಲತಾಣಗಳು ಶನಿವಾರ ಬೆಳಿಗ್ಗೆ ಸುದ್ದಿ ಪ್ರಕಟಿಸಿದ್ದವು. ಅದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ನ ಕಾರ್ಯದರ್ಶಿ ‘ನ್ಯಾಯಾಂಗದ
ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ವಿಶೇಷ ಮತ್ತು ಅಸಾಮಾನ್ಯ ವಿಚಾರವೊಂದರ ವಿಚಾರಣೆ ನಡೆಯಲಿದೆ’ ಎಂದು ಸುತ್ತೋಲೆ ಹೊರಡಿಸಿದರು.ಅಂತೆಯೇ ಬೆಳಿಗ್ಗೆ 10.30ಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠವು ವಿಶೇಷ ವಿಚಾರಣೆಯನ್ನು ಕೈಗೆತ್ತಿಕೊಂಡಿತು.