ದೇಶದಲ್ಲಿಪರಿವರ್ತನೆ ಬೇಕಾಗಿದೆ. ಜನರಿಗೆ ಹೊಸ ನಾಯಕತ್ವದ ಅಗತ್ಯವಿದೆ.ವಾಜಪೇಯಿ ಅವರ ಕಾಲದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಇತ್ತು. ಈಗ ಅರಾಜಕತೆ ಇದೆ. ನಾನು ಬಿಜೆಪಿ ವಿರುದ್ಧ ಯಾಕೆ ಮಾತನಾಡುತ್ತಿದ್ದೇನೆ ಎಂದು ಜನರು ಕೇಳುತ್ತಿದ್ದಾರೆ.ನಾನು ಸತ್ಯದ ವಿರುದ್ಧ ಮಾತನಾಡಲ್ಲ.ಹಾಗಾಗಿ ನಾನು ಬಿಜೆಪಿ ವಿರುದ್ಧ ಮಾತನಾಡುತ್ತಿದ್ದೇನೆ.ನಾನು ಸತ್ಯ ಹೇಳುವ ಮೂಲಕ ಬಂಡಾಯವೇಳುತ್ತಿದ್ದೇನೆ ಎಂದು ಅನಿಸಿದರೆ ನಾನು ಬಂಡಾಯಗಾರ, ಬಿಜೆಪಿಯ ಸದಸ್ಯನಾಗುವುದಕ್ಕಿಂತ ಮುನ್ನ ನಾನೊಬ್ಬ ಭಾರತೀಯ.