ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1 ಶುಲ್ಕ ಪಡೆಯಲು ನಾಳೆ ಬನ್ನಿ ಎಂದಿದ್ದರು ಸುಷ್ಮಾ: ಹರೀಶ್ ಸಾಳ್ವೆ

Last Updated 7 ಆಗಸ್ಟ್ 2019, 6:47 IST
ಅಕ್ಷರ ಗಾತ್ರ

ನವದೆಹಲಿ: ಕುಲಭೂಷಣ್‌ ಜಾಧವ್‌ ಅವರ ಮರಣದಂಡನೆ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಜಾಧವ್‌ ಪರ ವಾದ ಮಂಡಿಸಿದ್ದ ಹರೀಶ್ ಸಾಳ್ವೆ ಅವರಲ್ಲಿ ವಾದ ಮಂಡನೆಗಾಗಿರುವ ಶುಲ್ಕ ₹1 ಪಡೆಯಲು ನಾಳೆ ಬನ್ನಿ ಎಂದಿದ್ದರು ಸುಷ್ಮಾ ಸ್ವರಾಜ್.

ಸುಷ್ಮಾ ಸ್ವರಾಜ್ ನನ್ನಲ್ಲಿ ನಾಳೆ ಬನ್ನಿ ಎಂದು ಹೇಳಿದ ಒಂದು ಗಂಟೆಯಲ್ಲಿ ಅವರು ನಿಧನರಾದರು ಎಂದು ಟೈಮ್ಸ್ ನೌ ಜತೆ ಮಾತನಾಡಿದ ಸಾಳ್ವೆ ಹೇಳಿದ್ದಾರೆ.

ನಾನು ಮಂಗಳವಾರ ರಾತ್ರಿ 8.50ಕ್ಕೆ ಅವರೊಂದಿಗೆ ಮಾತನಾಡಿದ್ದೆ.ಅದೊಂದು ಭಾವುಕ ಸಂವಾದ ಆಗಿತ್ತು. ನನ್ನನ್ನು ಭೇಟಿಯಾಗಬೇಕಿತ್ತೆಂದು ಅವರು ಹೇಳಿದರು. ನೀವು ವಾದಿಸಿ ಗೆಲುವು ಸಾಧಿಸಿದ ಪ್ರಕರಣದ ಶುಲ್ಕವನ್ನು ನಾನು ನಿಮಗೆ ನೀಡಬೇಕಿದೆ.ಖಂಡಿತವಾಗಿಯೂ ನಾನು ಆ ಅಮೂಲ್ಯ ಶುಲ್ಕವನ್ನು ಪಡೆಯಲು ಬಂದೇ ಬರುತ್ತೇನೆ ಎಂದು ನಾನು ಹೇಳಿದೆ. ಹಾಗಾದರೆ ನಾಳೆ 6 ಗಂಟೆಗೆ ಬನ್ನಿ ಎಂದಿದ್ದರು ಸುಷ್ಮಾ ಅಂತಾರೆ ಸಾಳ್ವೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT