₹1 ಶುಲ್ಕ ಪಡೆಯಲು ನಾಳೆ ಬನ್ನಿ ಎಂದಿದ್ದರು ಸುಷ್ಮಾ: ಹರೀಶ್ ಸಾಳ್ವೆ

ನವದೆಹಲಿ: ಕುಲಭೂಷಣ್ ಜಾಧವ್ ಅವರ ಮರಣದಂಡನೆ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಜಾಧವ್ ಪರ ವಾದ ಮಂಡಿಸಿದ್ದ ಹರೀಶ್ ಸಾಳ್ವೆ ಅವರಲ್ಲಿ ವಾದ ಮಂಡನೆಗಾಗಿರುವ ಶುಲ್ಕ ₹1 ಪಡೆಯಲು ನಾಳೆ ಬನ್ನಿ ಎಂದಿದ್ದರು ಸುಷ್ಮಾ ಸ್ವರಾಜ್.
Not fair. #HarishSalve has charged us Rs.1/- as his fee for this case. https://t.co/Eyl3vQScrs
— Sushma Swaraj (@SushmaSwaraj) May 15, 2017
ಸುಷ್ಮಾ ಸ್ವರಾಜ್ ನನ್ನಲ್ಲಿ ನಾಳೆ ಬನ್ನಿ ಎಂದು ಹೇಳಿದ ಒಂದು ಗಂಟೆಯಲ್ಲಿ ಅವರು ನಿಧನರಾದರು ಎಂದು ಟೈಮ್ಸ್ ನೌ ಜತೆ ಮಾತನಾಡಿದ ಸಾಳ್ವೆ ಹೇಳಿದ್ದಾರೆ.
Former Solicitar General and senior lawyer #HarishSalve remembering her words on @TimesNow to @PadmajaJoshi#sushmaswaraj pic.twitter.com/mpHEUcWxiw
— Shruti Rai 🇮🇳 (@TweetShrutiRai) August 6, 2019
ನಾನು ಮಂಗಳವಾರ ರಾತ್ರಿ 8.50ಕ್ಕೆ ಅವರೊಂದಿಗೆ ಮಾತನಾಡಿದ್ದೆ. ಅದೊಂದು ಭಾವುಕ ಸಂವಾದ ಆಗಿತ್ತು. ನನ್ನನ್ನು ಭೇಟಿಯಾಗಬೇಕಿತ್ತೆಂದು ಅವರು ಹೇಳಿದರು. ನೀವು ವಾದಿಸಿ ಗೆಲುವು ಸಾಧಿಸಿದ ಪ್ರಕರಣದ ಶುಲ್ಕವನ್ನು ನಾನು ನಿಮಗೆ ನೀಡಬೇಕಿದೆ. ಖಂಡಿತವಾಗಿಯೂ ನಾನು ಆ ಅಮೂಲ್ಯ ಶುಲ್ಕವನ್ನು ಪಡೆಯಲು ಬಂದೇ ಬರುತ್ತೇನೆ ಎಂದು ನಾನು ಹೇಳಿದೆ. ಹಾಗಾದರೆ ನಾಳೆ 6 ಗಂಟೆಗೆ ಬನ್ನಿ ಎಂದಿದ್ದರು ಸುಷ್ಮಾ ಅಂತಾರೆ ಸಾಳ್ವೆ.
ಇದನ್ನೂ ಓದಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.