<p><strong>ನವದೆಹಲಿ</strong>: ಕೊರೊನಾ ವೈರಸ್ ಸೋಂಕು ಪೀಡಿತ ನಗರ ಚೀನಾದ ವುಹಾನ್ನಿಂದ 324 ಭಾರತೀಯರನ್ನು ಏರ್ ಇಂಡಿಯಾ ವಿಮಾನದಲ್ಲಿ ಶನಿವಾರ ದೆಹಲಿಗೆ ಕರೆತರಲಾಯಿತು.</p>.<p>211 ಮಂದಿ ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ತೆರಳಿದ್ದ 110 ಮಂದಿ ಹಾಗೂ ಮೂವರು ಅಪ್ರಾಪ್ತ ವಯಸ್ಕರನ್ನು ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಆದರೆ ತೀವ್ರ ಜ್ವರದ ಕಾರಣ ಆರು ಮಂದಿ ಭಾರತೀಯರು ವಿಮಾನ ಏರುವುದನ್ನು ಚೀನಾದ ಅಧಿಕಾರಿಗಳು ತಡೆದರು ಎಂದು ಹೇಳಿದ್ದಾರೆ.</p>.<p>ಇನ್ನುಳಿದ ಭಾರತೀಯರನ್ನು ಕರೆತರಲು ಇನ್ನೊಂದು ವಿಮಾನವು ಚೀನಾಕ್ಕೆ ತೆರಳಿದೆ ಎಂದೂ ತಿಳಿಸಿದ್ದಾರೆ.</p>.<p>ರಾಮ್ ಮನೋಹರ್ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಯ ಐವರು ವೈದ್ಯರು ಎರಡನೇ ಬಾರಿಯೂ ವಿಮಾನದಲ್ಲಿ ಚೀನಾಕ್ಕೆ ತೆರಳಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.</p>.<p>ಚೀನಾದ ಹುಬೆ ಪ್ರಾಂತ್ಯದಿಂದ ಸ್ಥಳಾಂತರಿಸಿರುವ 300 ಮಂದಿ ವಿದ್ಯಾರ್ಥಿಗಳನ್ನಿರಿಸಲು ಭಾರತೀಯ ಸೇನೆಯು ದೆಹಲಿ ಸಮೀಪದ ಮನೇಸರ್ನಲ್ಲಿ ಚಿಕಿತ್ಸಾ ಶಿಬಿರಗಳನ್ನು ಸಿದ್ಧಪಡಿಸಿದೆ.</p>.<p>ಇಂಡೊ–ಟಿಬೆಟನ್ ಗಡಿ ಪೊಲೀಸ್ ಪಡೆ ಕೂಡ 600 ಹಾಸಿಗೆಗಳ ಚಿಕಿತ್ಸಾ ಶಿಬಿರವನ್ನು ಗುರುಗ್ರಾಮದಲ್ಲಿ ಸ್ಥಾಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೊರೊನಾ ವೈರಸ್ ಸೋಂಕು ಪೀಡಿತ ನಗರ ಚೀನಾದ ವುಹಾನ್ನಿಂದ 324 ಭಾರತೀಯರನ್ನು ಏರ್ ಇಂಡಿಯಾ ವಿಮಾನದಲ್ಲಿ ಶನಿವಾರ ದೆಹಲಿಗೆ ಕರೆತರಲಾಯಿತು.</p>.<p>211 ಮಂದಿ ವಿದ್ಯಾರ್ಥಿಗಳು, ಉದ್ಯೋಗಕ್ಕಾಗಿ ತೆರಳಿದ್ದ 110 ಮಂದಿ ಹಾಗೂ ಮೂವರು ಅಪ್ರಾಪ್ತ ವಯಸ್ಕರನ್ನು ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಆದರೆ ತೀವ್ರ ಜ್ವರದ ಕಾರಣ ಆರು ಮಂದಿ ಭಾರತೀಯರು ವಿಮಾನ ಏರುವುದನ್ನು ಚೀನಾದ ಅಧಿಕಾರಿಗಳು ತಡೆದರು ಎಂದು ಹೇಳಿದ್ದಾರೆ.</p>.<p>ಇನ್ನುಳಿದ ಭಾರತೀಯರನ್ನು ಕರೆತರಲು ಇನ್ನೊಂದು ವಿಮಾನವು ಚೀನಾಕ್ಕೆ ತೆರಳಿದೆ ಎಂದೂ ತಿಳಿಸಿದ್ದಾರೆ.</p>.<p>ರಾಮ್ ಮನೋಹರ್ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಯ ಐವರು ವೈದ್ಯರು ಎರಡನೇ ಬಾರಿಯೂ ವಿಮಾನದಲ್ಲಿ ಚೀನಾಕ್ಕೆ ತೆರಳಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.</p>.<p>ಚೀನಾದ ಹುಬೆ ಪ್ರಾಂತ್ಯದಿಂದ ಸ್ಥಳಾಂತರಿಸಿರುವ 300 ಮಂದಿ ವಿದ್ಯಾರ್ಥಿಗಳನ್ನಿರಿಸಲು ಭಾರತೀಯ ಸೇನೆಯು ದೆಹಲಿ ಸಮೀಪದ ಮನೇಸರ್ನಲ್ಲಿ ಚಿಕಿತ್ಸಾ ಶಿಬಿರಗಳನ್ನು ಸಿದ್ಧಪಡಿಸಿದೆ.</p>.<p>ಇಂಡೊ–ಟಿಬೆಟನ್ ಗಡಿ ಪೊಲೀಸ್ ಪಡೆ ಕೂಡ 600 ಹಾಸಿಗೆಗಳ ಚಿಕಿತ್ಸಾ ಶಿಬಿರವನ್ನು ಗುರುಗ್ರಾಮದಲ್ಲಿ ಸ್ಥಾಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>