<p><strong>ಲಖನೌ:</strong> ಉತ್ತರ ಪ್ರದೇಶದ ದೇವಾಲಯಗಳಲ್ಲೂ ಕೊರೊನಾ ವೈರಸ್ ಆತಂಕ ಮೂಡಿಸಿದೆ.</p>.<p>ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಪೂಜಾರಿಗಳು ದೇವತೆಗಳಿಗೆ ಮಾಸ್ಕ್ಗಳನ್ನು ಧರಿಸಿದ್ದಾರೆ. ಜತೆಗೆ, ದೇವಾಲಯದಲ್ಲಿನ ವಿಗ್ರಹಗಳನ್ನು ಮುಟ್ಟುವ ಮುನ್ನ ಸ್ಯಾನಿಟೈಸರ್ ಉಪಯೋಗಿಸುವಂತೆ ಭಕ್ತಾದಿಗಳಿಗೆ ಸೂಚಿಸುತ್ತಿದ್ದಾರೆ.</p>.<p>ಲಖಿಮಪುರ–ಖೇರಿ ಜಿಲ್ಲೆಯ ಪ್ರಸಿದ್ಧ ಸಂಕಟ ದೇವಿ ದೇವಾಲಯದಲ್ಲಿನ ದೇವರ ವಿಗ್ರಗಳ ಕುತ್ತಿಗೆ ಫಲಕವನ್ನು ಸಹ ಹಾಕಲಾಗಿದೆ. ವೈರಸ್ ಹಬ್ಬುವುದನ್ನು ತಡೆಯಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ವಿವರ ಇದರಲ್ಲಿದೆ.</p>.<p>‘ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುವುದರಿಂದ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ’ ಎಂದು ಪೂಜಾರಿಯೊಬ್ಬರು ತಿಳಿಸಿದ್ದಾರೆ.</p>.<p><strong>ಗೋಮೂತ್ರಕ್ಕೆ ಮೊರೆ!</strong><br /><strong>ನವದೆಹಲಿ(ಪಿಟಿಐ):</strong> ‘ಗೋಮೂತ್ರ ಸೇವಿಸಿ ಕೊರೊನಾ ವೈರಸ್ನಿಂದ ರಕ್ಷಣೆ ಪಡೆಯಿರಿ’ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಶನಿವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.</p>.<p>‘ಗೋಮೂತ್ರ ಪಾರ್ಟಿ’ ಹೆಸರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಲಿನಲ್ಲಿ ನಿಂತು ಜನರು ಗೋಮೂತ್ರ ಪಡೆದರು.</p>.<p>ಮಹಾಸಭಾದ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಸ್ವಾಮಿ ಚಕ್ರಪಾಣಿ ಮಾತನಾಡಿ, ’ಮಾಂಸಾಹಾರ ಸೇವಿಸುವವರಿಗೆ ಶಿಕ್ಷೆ ವಿಧಿಸಲು ಕೊರೊನಾ ವೈರಸ್ ಅವತಾರದ ರೂಪದಲ್ಲಿ ಬಂದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಉತ್ತರ ಪ್ರದೇಶದ ದೇವಾಲಯಗಳಲ್ಲೂ ಕೊರೊನಾ ವೈರಸ್ ಆತಂಕ ಮೂಡಿಸಿದೆ.</p>.<p>ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಪೂಜಾರಿಗಳು ದೇವತೆಗಳಿಗೆ ಮಾಸ್ಕ್ಗಳನ್ನು ಧರಿಸಿದ್ದಾರೆ. ಜತೆಗೆ, ದೇವಾಲಯದಲ್ಲಿನ ವಿಗ್ರಹಗಳನ್ನು ಮುಟ್ಟುವ ಮುನ್ನ ಸ್ಯಾನಿಟೈಸರ್ ಉಪಯೋಗಿಸುವಂತೆ ಭಕ್ತಾದಿಗಳಿಗೆ ಸೂಚಿಸುತ್ತಿದ್ದಾರೆ.</p>.<p>ಲಖಿಮಪುರ–ಖೇರಿ ಜಿಲ್ಲೆಯ ಪ್ರಸಿದ್ಧ ಸಂಕಟ ದೇವಿ ದೇವಾಲಯದಲ್ಲಿನ ದೇವರ ವಿಗ್ರಗಳ ಕುತ್ತಿಗೆ ಫಲಕವನ್ನು ಸಹ ಹಾಕಲಾಗಿದೆ. ವೈರಸ್ ಹಬ್ಬುವುದನ್ನು ತಡೆಯಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ವಿವರ ಇದರಲ್ಲಿದೆ.</p>.<p>‘ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುವುದರಿಂದ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ’ ಎಂದು ಪೂಜಾರಿಯೊಬ್ಬರು ತಿಳಿಸಿದ್ದಾರೆ.</p>.<p><strong>ಗೋಮೂತ್ರಕ್ಕೆ ಮೊರೆ!</strong><br /><strong>ನವದೆಹಲಿ(ಪಿಟಿಐ):</strong> ‘ಗೋಮೂತ್ರ ಸೇವಿಸಿ ಕೊರೊನಾ ವೈರಸ್ನಿಂದ ರಕ್ಷಣೆ ಪಡೆಯಿರಿ’ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಶನಿವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.</p>.<p>‘ಗೋಮೂತ್ರ ಪಾರ್ಟಿ’ ಹೆಸರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಲಿನಲ್ಲಿ ನಿಂತು ಜನರು ಗೋಮೂತ್ರ ಪಡೆದರು.</p>.<p>ಮಹಾಸಭಾದ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ ಸ್ವಾಮಿ ಚಕ್ರಪಾಣಿ ಮಾತನಾಡಿ, ’ಮಾಂಸಾಹಾರ ಸೇವಿಸುವವರಿಗೆ ಶಿಕ್ಷೆ ವಿಧಿಸಲು ಕೊರೊನಾ ವೈರಸ್ ಅವತಾರದ ರೂಪದಲ್ಲಿ ಬಂದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>