ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೀಗ ಸಂಕಷ್ಟದ ಕಾಲ: ಸಿಜೆಐ ಕಳವಳ

ಪೌರತ್ವ ತಿದ್ದುಪಡಿ ಕಾಯ್ದೆ
Last Updated 9 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ‘ದೇಶ ಪ್ರಸ್ತುತ ಸಂಕಷ್ಟದ ಸಮಯ ಎದುರಿಸುತ್ತಿದೆ. ಸಾಕಷ್ಟು ಹಿಂಸೆನಡೆದಿವೆ. ಇಂತಹ ಸನ್ನಿವೇಶದಲ್ಲಿಪೌರತ್ವ ತಿದ್ದುಪಡಿ ಕಾಯ್ದೆಯು ಸಾಂವಿಧಾನಿಕವಾಗಿದೆ ಎಂದು ಘೋಷಿಸಬೇಕು ಎನ್ನುವ ಅರ್ಜಿಯ ತುರ್ತು ವಿಚಾರಣೆ ಕೈಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅರ್ಜಿಯ ಉದ್ದೇಶ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ನ್ಯಾಯಪೀಠ, ‘ಕಾಯ್ದೆಯು ಸಾಂವಿಧಾನಿಕವಾಗಿದೆ ಎಂದು ಘೋಷಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿರುವುದು ಇದೇ ಮೊದಲು’ ಎಂದು ಅಭಿಪ್ರಾಯಪಟ್ಟಿತು.

‘ಕಾಯ್ದೆಗೆ ಸಂಬಂಧಿಸಿ ನಡೆಯುತ್ತಿರುವ ಹಿಂಸಾತ್ಮಕ ಬೆಳವಣಿಗಳು ಸ್ಥಗಿತಗೊಂಡ ಬಳಿಕವೇಕಾಯ್ದೆಯ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯ ಪೀಠವು ಸ್ಪಷ್ಟಪಡಿಸಿತು.

‘ಕೋರ್ಟ್‌ನ ಕಾರ್ಯವು ಒಂದು ಕಾಯ್ದೆಯ ಕ್ರಮಬದ್ಧತೆಯನ್ನು ನಿರ್ಧರಿಸುವುದಾಗಿದೆ. ಅದು, ಸಾಂವಿಧಾನಿಕವಾಗಿದೆ ಎಂದು ಘೋಷಿಸುವುದಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಬೊಬಡೆ ಅವರು
ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಸಾಂವಿಧಾನಿಕವಾಗಿದೆ ಎಂದು ಘೋಷಿಸಬೇಕು ಹಾಗೂ ಇದರ ಜಾರಿಗೆ ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ಪುನೀತಾ ಕೌರ್ ಧಾಂಡಾ ಪರ ಸಲ್ಲಿಸಿದ್ದ ಅರ್ಜಿಯಲ್ಲಿ ವಕೀಲ ವಿನೀತ್‌ ಧಾಂಡಾ ಮನವಿ ಅವರು ಮಾಡಿದ್ದರು.

***

ಸಿಎಎಗೆ ಕಾಯ್ದೆಗೆ ಸಂಬಂಧಿಸಿ ಹಿಂಸಾಚಾರಗಳು ನಡೆಯುತ್ತಿವೆ. ದೇಶದಲ್ಲಿ ಈಗ ಸಂಕಷ್ಟದ ಕಾಲವಿದೆ. ಶಾಂತ ಪರಿಸ್ಥಿತಿಯನ್ನು ಸ್ಥಾಪಿಸಲು ಪ್ರಯತ್ನಿಸಬೇಕಾಗಿದೆ
-ಎಸ್‌.ಎ.ಬೊಬಡೆ,ಮುಖ್ಯನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT