ಚೆನ್ನೈ: ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದು, ಈವರೆಗೆ ರಾಜ್ಯದ ಏಕೈಕ ಹಸಿರು ವಲಯದ ಜಿಲ್ಲೆಯಾಗಿತ್ತು.
ಇದರೊಂದಿಗೆ ರಾಜ್ಯದ ಎಲ್ಲ 37 ಜಿಲ್ಲೆಗಳಲ್ಲಿಯೂ ಕೊರೊನಾ ಸೋಂಕು ವ್ಯಾಪಿಸಿದಂತಾಗಿದೆ.
ಆಂಧ್ರಪ್ರದೇಶದಿಂದ ಮರಳಿದ್ದ 67 ವರ್ಷದ ವ್ಯಕ್ತಿಗೆ ಸೋಂಕು ಇರುವುದು ಸಾಬೀತಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ತಮಿಳುನಾಡಿನಲ್ಲಿ ಈವರೆಗೆ 28 ಮಂದಿ ಕೋವಿಡ್ನಿಂದ ಸತ್ತಿದ್ದಾರೆ. ಚೆನ್ನೈ ಸೇರಿದಂತೆ 12 ಜಿಲ್ಲೆಗಳು ರೆಡ್ ಜೋನ್ ಆಗಿವೆ.