<p><strong>ನವದೆಹಲಿ:</strong> ಲಾಕ್ಡೌನ್ ಪರಿಣಾಮ ದೇಶದ ವಿವಿಧೆಡೆ ಅತಂತ್ರರಾಗಿರುವ ಸುಮಾರು 6.6 ಲಕ್ಷ ಜನರ ನೆರವಿಗಾಗಿ 21 ಸಾವಿರ ಪರಿಹಾರ ಶಿಬಿರಗಳು ಕಾರ್ಯಾರಂಭ ಮಾಡಿವೆ ಗೃಹ ಸಚಿವಾಲಯ ತಿಳಿಸಿದೆ.</p>.<p>ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯಾ ಸಲಿಲಾ ಶ್ರೀವಾತ್ಸವ, ಈ ಶಿಬಿರಗಳಲ್ಲಿ ಆಹಾರವನ್ನು ಒದಗಿಸಲಾಗುತ್ತಿದೆ. ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ತೃಪ್ತಿಕರವಾಗಿದೆ ಎಂದು ತಿಳಿಸಿದರು.</p>.<p>ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಒದಗಿಸಿರುವ ಮಾಹಿತಿ ಪ್ರಕಾರ, 21,064 ಶಿಬಿರಗಳಲ್ಲಿ ಒಟ್ಟು 6.66 ಲಕ್ಷ ಜನರಿಗೆ ಆಸರೆ ಒದಗಿಸಲಾಗಿದೆ. ಒಟ್ಟಾರೆ 23 ಲಕ್ಷ ಜನರಿಗೆ ಆಹಾರ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.</p>.<p>ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ದೇಶದಾದ್ಯಂತ ಅಗತ್ಯ ವಸ್ತುಗಳ ಸಾಗಣೆ ವ್ಯವಸ್ಥೆಯೂ ಸಮಾಧಾನಕರವಾಗಿದೆ. ಲಾಕ್ ಡೌನ್ ಯಶಸ್ವಿಯಾಗಲಿದ್ದು, ಒಟ್ಟಾಗಿ ಕೋವಿಡ್ ಸವಾಲುಗಳನ್ನು ಎದುರಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.</p>.<p>ಲಾಕ್ ಡೌನ್ ಕಟ್ಟುನಿಟ್ಟಿನ ಜಾರಿಗೆ ಅರೆಸೇನಾ ಪಡೆ ನಿಯೋಜಿಸುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ, ರಾಜ್ಯಗಳು ಗೃಹ ಸಚಿವಾಲಯ ನೆರವು ಬಯಸಿದರೆ ಆ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಲಾಕ್ಡೌನ್ ಪರಿಣಾಮ ದೇಶದ ವಿವಿಧೆಡೆ ಅತಂತ್ರರಾಗಿರುವ ಸುಮಾರು 6.6 ಲಕ್ಷ ಜನರ ನೆರವಿಗಾಗಿ 21 ಸಾವಿರ ಪರಿಹಾರ ಶಿಬಿರಗಳು ಕಾರ್ಯಾರಂಭ ಮಾಡಿವೆ ಗೃಹ ಸಚಿವಾಲಯ ತಿಳಿಸಿದೆ.</p>.<p>ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯಾ ಸಲಿಲಾ ಶ್ರೀವಾತ್ಸವ, ಈ ಶಿಬಿರಗಳಲ್ಲಿ ಆಹಾರವನ್ನು ಒದಗಿಸಲಾಗುತ್ತಿದೆ. ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ತೃಪ್ತಿಕರವಾಗಿದೆ ಎಂದು ತಿಳಿಸಿದರು.</p>.<p>ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಒದಗಿಸಿರುವ ಮಾಹಿತಿ ಪ್ರಕಾರ, 21,064 ಶಿಬಿರಗಳಲ್ಲಿ ಒಟ್ಟು 6.66 ಲಕ್ಷ ಜನರಿಗೆ ಆಸರೆ ಒದಗಿಸಲಾಗಿದೆ. ಒಟ್ಟಾರೆ 23 ಲಕ್ಷ ಜನರಿಗೆ ಆಹಾರ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.</p>.<p>ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆಯೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ದೇಶದಾದ್ಯಂತ ಅಗತ್ಯ ವಸ್ತುಗಳ ಸಾಗಣೆ ವ್ಯವಸ್ಥೆಯೂ ಸಮಾಧಾನಕರವಾಗಿದೆ. ಲಾಕ್ ಡೌನ್ ಯಶಸ್ವಿಯಾಗಲಿದ್ದು, ಒಟ್ಟಾಗಿ ಕೋವಿಡ್ ಸವಾಲುಗಳನ್ನು ಎದುರಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.</p>.<p>ಲಾಕ್ ಡೌನ್ ಕಟ್ಟುನಿಟ್ಟಿನ ಜಾರಿಗೆ ಅರೆಸೇನಾ ಪಡೆ ನಿಯೋಜಿಸುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ, ರಾಜ್ಯಗಳು ಗೃಹ ಸಚಿವಾಲಯ ನೆರವು ಬಯಸಿದರೆ ಆ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>