<p><strong>ನವದೆಹಲಿ</strong>: ಕೋಮು ದಳ್ಳುರಿಯಿಂದ ನಲುಗಿದ್ದ ಈಶಾನ್ಯ ದೆಹಲಿಯಲ್ಲಿ ಪರಿಸ್ಥಿತಿ ಶಾಂತಿಯುತವಾಗಿರುವುದು ಶನಿವಾರ ಕಂಡು ಬಂತು. ಹಲ್ಲೆ, ಬೆಂಕಿ ಹಚ್ಚಿದ ಪರಿಣಾಮ ಸುಟ್ಟುಹೋಗಿರುವ ಮನೆ, ಅಂಗಡಿಗಳ ಅವಶೇಷಗಳನ್ನು ತೆರವುಗೊಳಿಸಿ, ಅಲ್ಲಿಯೇ ಹೊಸ ಬದುಕು ಕಟ್ಟಿಕೊಳ್ಳುವ ಧಾವಂತವೂ ಜನರಲ್ಲಿ ಕಂಡು ಬಂತು.</p>.<p>ಜನರಲ್ಲಿ ಮನೆ ಮಾಡಿದ್ದ ಭಯವನ್ನು ದೂರ ಮಾಡುವ ಉದ್ದೇಶದಿಂದ ಭದ್ರತಾ ಪಡೆ ಸಿಬ್ಬಂದಿ ಈಶಾನ್ಯ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿದರು. ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಯಾವುದೇ ಕಾರಣಕ್ಕೂ ಭೀತಿಗೊಳಗಾದಂತೆ ಅವರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮುಂದುವರಿಸಿದರು.</p>.<p>ಸಾಮಾಜಿಕ ಜಾಲತಾಣಗಳ ಮೂಲಕ ಹರಡಲಾಗುತ್ತಿರುವ ವದಂತಿಗಳಿಗೆ ಕಿವಿಗೊಡದೇ ಇರುವಂತೆಯೂ ಜನರಲ್ಲಿ ಅವರು ಮನವಿ ಮಾಡಿದರು.</p>.<p>ದ್ವೇಷಪೂರಿತ ಸಂದೇಶ, ಮಾಹಿತಿಯನ್ನು ಪ್ರಸರಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡುವ ಸಲುವಾಗಿ ವಾಟ್ಸ್ಆ್ಯಪ್ ಸಂಖ್ಯೆಯೊಂದನ್ನು ನೀಡಲು ದೆಹಲಿ ಪೊಲೀಸರು ಮುಂದಾಗಿದ್ದಾರೆ.</p>.<p><strong>ಕಾಯುವುದು ತಪ್ಪಿಲ್ಲ:</strong> ಇನ್ನೊಂದೆಡೆ, ಹಿಂಸಾಚಾರ ಸಂದರ್ಭದಲ್ಲಿ ಮೃತಪಟ್ಟವರ ಶವಗಳನ್ನು ಪಡೆಯುವ ಸಲುವಾಗಿ ಸಂಬಂಧಪಟ್ಟವರು ಜಿಟಿಬಿ ಆಸ್ಪತ್ರೆಯ ಹೊರಗಡೆ ಕಾಯುತ್ತಿರುವುದು ಕಂಡು ಬಂತು.</p>.<p><strong>ಮಾ.7ರ ವರೆಗೆ ಶಾಲೆ ಬಂದ್:</strong> ಗಲಭೆ ಹಿನ್ನೆಲೆಯಲ್ಲಿ ಈಶಾನ್ಯ ದೆಹಲಿಯ ಶಾಲೆಗಳನ್ನು ಮಾ. 7ರ ವರೆಗೆ ಮುಚ್ಚಲು ದೆಹಲಿ ಸರ್ಕಾರ ನಿರ್ಧರಿಸಿದೆ. ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.</p>.<p><strong>ಕಾನ್ಸ್ಟೆಬಲ್ ಮನೆ ಮರುನಿರ್ಮಾಣಕ್ಕೆ ಬಿಎಸ್ಎಫ್ ನಿರ್ಧಾರ</strong><br />ಗಲಭೆ ಸಂಭವಿಸಿದ ಸಂದರ್ಭದಲ್ಲಿ ಈಶಾನ್ಯ ದೆಹಲಿಯ ಖಜೂರಿ ಖಾಸ್ನಲ್ಲಿರುವ ಹಲವಾರು ಮನೆಗಳು ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಆಹುತಿಯಾಗಿವೆ. ಇವುಗಳಲ್ಲಿ, ಗಡಿ ಭದ್ರತಾ ಪಡೆ (ಬಿಎಸ್ಎಫ್) ಕಾನ್ಸ್ಟೆಬಲ್ ಮೊಹಮ್ಮದ್ ಅನೀಸ್ ಅವರ ಮನೆಯೂ ಸೇರಿದ್ದು, ಅವರ ಪಾಲಕರು ಬೀದಿಗೆ ಬಂದಿದ್ದಾರೆ.</p>.<p>ಆದರೆ, ಬಿಎಸ್ಎಫ್ ಅಧಿಕಾರಿಗಳು, ಅನೀಸ್ ಅವರ ಮನೆಯನ್ನು ಮರು ನಿರ್ಮಾಣ ಮಾಡಿ, ಅದನ್ನು ಅವರ ಮದುವೆಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.</p>.<p>29 ವರ್ಷದ ಅನೀಸ್ ಈಗ ಪಶ್ಚಿಮ ಬಂಗಾಳದ ಸಿಲಿಗುಡಿ ಬಳಿಯ ರಾಧಾಬರಿಯಲ್ಲಿರುವ ಸೇನಾ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.</p>.<p>‘ಮನೆಯನ್ನು ಮರು ನಿರ್ಮಾಣ ಮಾಡಿ ಕೊಡುವ ಜೊತೆಗೆ ಅನೀಸ್ ಅವರನ್ನು ಶೀಘ್ರವೇ ದೆಹಲಿಗೆ ವರ್ಗಾಯಿಸಲಾಗುವುದು. ಇದರಿಂದ ಅನೀಸ್ ಹಾಗೂ ಕುಟುಂಬಕ್ಕೆ ಅವರ ಮದುವೆ ತಯಾರಿಗೆ ಅನುಕೂಲವಾಗಲಿದೆ’ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>‘ಅನೀಸ್ ಪಾಲಕರನ್ನು ಭೇಟಿಯಾಗಿ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಲಾಗಿದೆ. ಬಿಎಸ್ಎಫ್ ಕಲ್ಯಾಣ ನಿಧಿಯಿಂದ ಆತನ ಕುಟುಂಬಕ್ಕೆ ₹ 10 ಲಕ್ಷ ನೆರವು ನೀಡಲು ನಿರ್ಧರಿಸಲಾಗಿದೆ’ ಎಂದು ಬಿಎಸ್ಎಫ್ನ ಡಿಐಜಿ ಪುಷ್ಪೇಂದ್ರ ರಾಥೋಡ್ ಶನಿವಾರ ಹೇಳಿದ್ದಾರೆ.</p>.<p><strong>ಜಂತರ್ಮಂತರ್ನಲ್ಲಿ ಶಾಂತಿ ಮೆರವಣಿಗೆ</strong><br />ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಕೋಮು ಗಲಭೆಯನ್ನು ಖಂಡಿಸಿ ಇಲ್ಲಿನ ಜಂತರ್ ಮಂತರ್ನಲ್ಲಿ ಶನಿವಾರ ಶಾಂತಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.</p>.<p>ದೆಹಲಿ ಶಾಂತಿ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಪಥಸಂಚಲನದಲ್ಲಿ ರಾಷ್ಟ್ರಧ್ವಜದೊಂದಿಗೆ ಪಾಲ್ಗೊಂಡಿದ್ದ ನೂರಾರು ಜನರು ‘ಜೈ ಶ್ರೀರಾಮ್’, ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಸಹ ಪಾಲ್ಗೊಂಡಿದ್ದರು.</p>.<p>ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕೆಲವರು, ‘ದೇಶ ದ್ರೋಹಿಗಳಿಗೆ ಗುಂಡಿಕ್ಕಿ’ಎಂಬುದಾಗಿ ಘೋಷಣೆಗಳನ್ನು ಕೂಗಿದರು.</p>.<p><strong>ಗಾಯದ ಮೇಲೆ ಉಪ್ಪು ಸವರುವ ಕೆಲಸ: ನಕ್ವಿ</strong><br />‘ಕೋಮು ಗಲಭೆಯಿಂದ ಸಂತ್ರಸ್ತರಾದವರ ಗಾಯದ ಮೇಲೆ ಕೆಲವು ರಾಜಕೀಯ ಪಕ್ಷಗಳು ಹಾಗೂ ಪ್ರಚೋದನೆಯೇ ವೃತ್ತಿಯನ್ನಾಗಿಸಿಕೊಂಡವರು ಉಪ್ಪು ಸವರುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಶನಿವಾರ ಟೀಕಿಸಿದ್ದಾರೆ.</p>.<div style="text-align:center"><figcaption><em><strong>ಮುಖ್ತಾರ್ ಅಬ್ಬಾಸ್ ನಕ್ವಿ</strong></em></figcaption></div>.<p>‘ಪ್ರಚೋದನೆ ಮಾಡುವವರು ಹಾಗೂ ತಪ್ಪಿತಸ್ಥರಿಗೆ ಜೈಲು ತಪ್ಪದು. ನಗರದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸುವುದು ಹಾಗೂ ಈ ನಿಟ್ಟಿನಲ್ಲಿ ಶ್ರಮಿಸುವುದು ನಮ್ಮ ಬದ್ಧತೆಯಾಗಬೇಕು’ ಎಂದರು.</p>.<p>‘ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿ’ ಎಂದೂ ನಕ್ವಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೋಮು ದಳ್ಳುರಿಯಿಂದ ನಲುಗಿದ್ದ ಈಶಾನ್ಯ ದೆಹಲಿಯಲ್ಲಿ ಪರಿಸ್ಥಿತಿ ಶಾಂತಿಯುತವಾಗಿರುವುದು ಶನಿವಾರ ಕಂಡು ಬಂತು. ಹಲ್ಲೆ, ಬೆಂಕಿ ಹಚ್ಚಿದ ಪರಿಣಾಮ ಸುಟ್ಟುಹೋಗಿರುವ ಮನೆ, ಅಂಗಡಿಗಳ ಅವಶೇಷಗಳನ್ನು ತೆರವುಗೊಳಿಸಿ, ಅಲ್ಲಿಯೇ ಹೊಸ ಬದುಕು ಕಟ್ಟಿಕೊಳ್ಳುವ ಧಾವಂತವೂ ಜನರಲ್ಲಿ ಕಂಡು ಬಂತು.</p>.<p>ಜನರಲ್ಲಿ ಮನೆ ಮಾಡಿದ್ದ ಭಯವನ್ನು ದೂರ ಮಾಡುವ ಉದ್ದೇಶದಿಂದ ಭದ್ರತಾ ಪಡೆ ಸಿಬ್ಬಂದಿ ಈಶಾನ್ಯ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿದರು. ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಯಾವುದೇ ಕಾರಣಕ್ಕೂ ಭೀತಿಗೊಳಗಾದಂತೆ ಅವರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮುಂದುವರಿಸಿದರು.</p>.<p>ಸಾಮಾಜಿಕ ಜಾಲತಾಣಗಳ ಮೂಲಕ ಹರಡಲಾಗುತ್ತಿರುವ ವದಂತಿಗಳಿಗೆ ಕಿವಿಗೊಡದೇ ಇರುವಂತೆಯೂ ಜನರಲ್ಲಿ ಅವರು ಮನವಿ ಮಾಡಿದರು.</p>.<p>ದ್ವೇಷಪೂರಿತ ಸಂದೇಶ, ಮಾಹಿತಿಯನ್ನು ಪ್ರಸರಣ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡುವ ಸಲುವಾಗಿ ವಾಟ್ಸ್ಆ್ಯಪ್ ಸಂಖ್ಯೆಯೊಂದನ್ನು ನೀಡಲು ದೆಹಲಿ ಪೊಲೀಸರು ಮುಂದಾಗಿದ್ದಾರೆ.</p>.<p><strong>ಕಾಯುವುದು ತಪ್ಪಿಲ್ಲ:</strong> ಇನ್ನೊಂದೆಡೆ, ಹಿಂಸಾಚಾರ ಸಂದರ್ಭದಲ್ಲಿ ಮೃತಪಟ್ಟವರ ಶವಗಳನ್ನು ಪಡೆಯುವ ಸಲುವಾಗಿ ಸಂಬಂಧಪಟ್ಟವರು ಜಿಟಿಬಿ ಆಸ್ಪತ್ರೆಯ ಹೊರಗಡೆ ಕಾಯುತ್ತಿರುವುದು ಕಂಡು ಬಂತು.</p>.<p><strong>ಮಾ.7ರ ವರೆಗೆ ಶಾಲೆ ಬಂದ್:</strong> ಗಲಭೆ ಹಿನ್ನೆಲೆಯಲ್ಲಿ ಈಶಾನ್ಯ ದೆಹಲಿಯ ಶಾಲೆಗಳನ್ನು ಮಾ. 7ರ ವರೆಗೆ ಮುಚ್ಚಲು ದೆಹಲಿ ಸರ್ಕಾರ ನಿರ್ಧರಿಸಿದೆ. ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ.</p>.<p><strong>ಕಾನ್ಸ್ಟೆಬಲ್ ಮನೆ ಮರುನಿರ್ಮಾಣಕ್ಕೆ ಬಿಎಸ್ಎಫ್ ನಿರ್ಧಾರ</strong><br />ಗಲಭೆ ಸಂಭವಿಸಿದ ಸಂದರ್ಭದಲ್ಲಿ ಈಶಾನ್ಯ ದೆಹಲಿಯ ಖಜೂರಿ ಖಾಸ್ನಲ್ಲಿರುವ ಹಲವಾರು ಮನೆಗಳು ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಆಹುತಿಯಾಗಿವೆ. ಇವುಗಳಲ್ಲಿ, ಗಡಿ ಭದ್ರತಾ ಪಡೆ (ಬಿಎಸ್ಎಫ್) ಕಾನ್ಸ್ಟೆಬಲ್ ಮೊಹಮ್ಮದ್ ಅನೀಸ್ ಅವರ ಮನೆಯೂ ಸೇರಿದ್ದು, ಅವರ ಪಾಲಕರು ಬೀದಿಗೆ ಬಂದಿದ್ದಾರೆ.</p>.<p>ಆದರೆ, ಬಿಎಸ್ಎಫ್ ಅಧಿಕಾರಿಗಳು, ಅನೀಸ್ ಅವರ ಮನೆಯನ್ನು ಮರು ನಿರ್ಮಾಣ ಮಾಡಿ, ಅದನ್ನು ಅವರ ಮದುವೆಗೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.</p>.<p>29 ವರ್ಷದ ಅನೀಸ್ ಈಗ ಪಶ್ಚಿಮ ಬಂಗಾಳದ ಸಿಲಿಗುಡಿ ಬಳಿಯ ರಾಧಾಬರಿಯಲ್ಲಿರುವ ಸೇನಾ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.</p>.<p>‘ಮನೆಯನ್ನು ಮರು ನಿರ್ಮಾಣ ಮಾಡಿ ಕೊಡುವ ಜೊತೆಗೆ ಅನೀಸ್ ಅವರನ್ನು ಶೀಘ್ರವೇ ದೆಹಲಿಗೆ ವರ್ಗಾಯಿಸಲಾಗುವುದು. ಇದರಿಂದ ಅನೀಸ್ ಹಾಗೂ ಕುಟುಂಬಕ್ಕೆ ಅವರ ಮದುವೆ ತಯಾರಿಗೆ ಅನುಕೂಲವಾಗಲಿದೆ’ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>‘ಅನೀಸ್ ಪಾಲಕರನ್ನು ಭೇಟಿಯಾಗಿ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಲಾಗಿದೆ. ಬಿಎಸ್ಎಫ್ ಕಲ್ಯಾಣ ನಿಧಿಯಿಂದ ಆತನ ಕುಟುಂಬಕ್ಕೆ ₹ 10 ಲಕ್ಷ ನೆರವು ನೀಡಲು ನಿರ್ಧರಿಸಲಾಗಿದೆ’ ಎಂದು ಬಿಎಸ್ಎಫ್ನ ಡಿಐಜಿ ಪುಷ್ಪೇಂದ್ರ ರಾಥೋಡ್ ಶನಿವಾರ ಹೇಳಿದ್ದಾರೆ.</p>.<p><strong>ಜಂತರ್ಮಂತರ್ನಲ್ಲಿ ಶಾಂತಿ ಮೆರವಣಿಗೆ</strong><br />ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಕೋಮು ಗಲಭೆಯನ್ನು ಖಂಡಿಸಿ ಇಲ್ಲಿನ ಜಂತರ್ ಮಂತರ್ನಲ್ಲಿ ಶನಿವಾರ ಶಾಂತಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.</p>.<p>ದೆಹಲಿ ಶಾಂತಿ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಪಥಸಂಚಲನದಲ್ಲಿ ರಾಷ್ಟ್ರಧ್ವಜದೊಂದಿಗೆ ಪಾಲ್ಗೊಂಡಿದ್ದ ನೂರಾರು ಜನರು ‘ಜೈ ಶ್ರೀರಾಮ್’, ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಸಹ ಪಾಲ್ಗೊಂಡಿದ್ದರು.</p>.<p>ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕೆಲವರು, ‘ದೇಶ ದ್ರೋಹಿಗಳಿಗೆ ಗುಂಡಿಕ್ಕಿ’ಎಂಬುದಾಗಿ ಘೋಷಣೆಗಳನ್ನು ಕೂಗಿದರು.</p>.<p><strong>ಗಾಯದ ಮೇಲೆ ಉಪ್ಪು ಸವರುವ ಕೆಲಸ: ನಕ್ವಿ</strong><br />‘ಕೋಮು ಗಲಭೆಯಿಂದ ಸಂತ್ರಸ್ತರಾದವರ ಗಾಯದ ಮೇಲೆ ಕೆಲವು ರಾಜಕೀಯ ಪಕ್ಷಗಳು ಹಾಗೂ ಪ್ರಚೋದನೆಯೇ ವೃತ್ತಿಯನ್ನಾಗಿಸಿಕೊಂಡವರು ಉಪ್ಪು ಸವರುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಶನಿವಾರ ಟೀಕಿಸಿದ್ದಾರೆ.</p>.<div style="text-align:center"><figcaption><em><strong>ಮುಖ್ತಾರ್ ಅಬ್ಬಾಸ್ ನಕ್ವಿ</strong></em></figcaption></div>.<p>‘ಪ್ರಚೋದನೆ ಮಾಡುವವರು ಹಾಗೂ ತಪ್ಪಿತಸ್ಥರಿಗೆ ಜೈಲು ತಪ್ಪದು. ನಗರದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸುವುದು ಹಾಗೂ ಈ ನಿಟ್ಟಿನಲ್ಲಿ ಶ್ರಮಿಸುವುದು ನಮ್ಮ ಬದ್ಧತೆಯಾಗಬೇಕು’ ಎಂದರು.</p>.<p>‘ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿ’ ಎಂದೂ ನಕ್ವಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>