<p><strong>ಹೈದರಾಬಾದ್:</strong> ಐಐಟಿ ಹೈದರಾಬಾದ್ನ 21 ವರ್ಷ ವಯಸ್ಸಿನ ವಿದ್ಯಾರ್ಥಿ ಹಾಸ್ಟೆಲ್ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶನಿವಾರ ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಸಿಕಂದರಾಬಾದ್ ಮೂಲದ ವಿದ್ಯಾರ್ಥಿ ಅನಿರುಧ್ಯ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದಾಗ ಆಯತಪ್ಪಿ ಐಐಟಿ ಕ್ಯಾಂಪಸ್ ಹಾಸ್ಟೆಲ್ ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದಿರಬಹುದು ಎಂದು ಮೊದಲು ಊಹಿಸಲಾಗಿತ್ತು.</p>.<p>ಆದರೆ, ತನಿಖೆ ಮುಂದುವರಿದಂತೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಾಕ್ಷ್ಯಗಳು ದೊರೆತಿವೆ. ಖಿನ್ನತೆಗೆ ಒಳಗಾಗಿದ್ದ ಅನಿರುಧ್ಯ, ಬದುಕು ಅಂತ್ಯಗೊಳಿಸಿ ಕೊಳ್ಳುತ್ತಿರುವುದಾಗಿ ತನ್ನ ಸ್ನೇಹಿತಿಗೆ ಸಂದೇಶ ಕಳುಹಿಸಿದ್ದ. ಗುರುವಾರ ನಡೆದಿದ್ದ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ತನಿಖೆ ಕೈಗೊಂಡಿದ್ದರು.</p>.<p>ಅನಿರುಧ್ಯ ಕಳುಹಿಸಿರುವ ಸಂದೇಶದಲ್ಲಿ ’ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ನಾನು ಮಾಡಿರುವ ಅಂದಾಜಿನ ಪ್ರಕಾರ, ಬದುಕನ್ನು ಕೊನೆಗೊಳಿಸಿಕೊಳ್ಳುವ ನನ್ನ ನಿರ್ಧಾರ ಸಂಪೂರ್ಣ ತಾರ್ಕಿಕವಾದುದಾಗಿದೆ. ಜೀವನದಲ್ಲಿ ಇನ್ನು ಆಸಕ್ತಿ ಉಳಿದಿಲ್ಲ ಹಾಗೂ ಸಮಯ ಕಳೆದಂತೆ ನಿತ್ಯದ ಕೆಲಸಗಳು ಮತ್ತಷ್ಟು ಕಠಿಣಗೊಳ್ಳುತ್ತಿವೆ’ ಎಂದು ಬರೆದಿದ್ದಾನೆ.</p>.<p>ಸಾಕಷ್ಟು ಚಿಂತಿಸಿದ ನಂತರವೇ ಕಳೆದ ವಾರ ಈ ಅಂತಿಮ ಆಲೋಚನೆ ಮಾಡಿರುವೆ ಎಂದು ಸಂದೇಶದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ಮನಸ್ಥಿತಿಯಲ್ಲಿ ಕೆಲವು ದಿನಗಳ ಹಿಂದಷ್ಟೇ ಅನಿರುಧ್ಯ ಮನಃಶಾಸ್ತ್ರಜ್ಞರನ್ನು ಭೇಟಿ ಮಾಡಿ ಬಂದಿದ್ದ ಎಂದು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಐಐಟಿ ಹೈದರಾಬಾದ್ನ 21 ವರ್ಷ ವಯಸ್ಸಿನ ವಿದ್ಯಾರ್ಥಿ ಹಾಸ್ಟೆಲ್ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶನಿವಾರ ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ಸಿಕಂದರಾಬಾದ್ ಮೂಲದ ವಿದ್ಯಾರ್ಥಿ ಅನಿರುಧ್ಯ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದಾಗ ಆಯತಪ್ಪಿ ಐಐಟಿ ಕ್ಯಾಂಪಸ್ ಹಾಸ್ಟೆಲ್ ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದಿರಬಹುದು ಎಂದು ಮೊದಲು ಊಹಿಸಲಾಗಿತ್ತು.</p>.<p>ಆದರೆ, ತನಿಖೆ ಮುಂದುವರಿದಂತೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಾಕ್ಷ್ಯಗಳು ದೊರೆತಿವೆ. ಖಿನ್ನತೆಗೆ ಒಳಗಾಗಿದ್ದ ಅನಿರುಧ್ಯ, ಬದುಕು ಅಂತ್ಯಗೊಳಿಸಿ ಕೊಳ್ಳುತ್ತಿರುವುದಾಗಿ ತನ್ನ ಸ್ನೇಹಿತಿಗೆ ಸಂದೇಶ ಕಳುಹಿಸಿದ್ದ. ಗುರುವಾರ ನಡೆದಿದ್ದ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ತನಿಖೆ ಕೈಗೊಂಡಿದ್ದರು.</p>.<p>ಅನಿರುಧ್ಯ ಕಳುಹಿಸಿರುವ ಸಂದೇಶದಲ್ಲಿ ’ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ನಾನು ಮಾಡಿರುವ ಅಂದಾಜಿನ ಪ್ರಕಾರ, ಬದುಕನ್ನು ಕೊನೆಗೊಳಿಸಿಕೊಳ್ಳುವ ನನ್ನ ನಿರ್ಧಾರ ಸಂಪೂರ್ಣ ತಾರ್ಕಿಕವಾದುದಾಗಿದೆ. ಜೀವನದಲ್ಲಿ ಇನ್ನು ಆಸಕ್ತಿ ಉಳಿದಿಲ್ಲ ಹಾಗೂ ಸಮಯ ಕಳೆದಂತೆ ನಿತ್ಯದ ಕೆಲಸಗಳು ಮತ್ತಷ್ಟು ಕಠಿಣಗೊಳ್ಳುತ್ತಿವೆ’ ಎಂದು ಬರೆದಿದ್ದಾನೆ.</p>.<p>ಸಾಕಷ್ಟು ಚಿಂತಿಸಿದ ನಂತರವೇ ಕಳೆದ ವಾರ ಈ ಅಂತಿಮ ಆಲೋಚನೆ ಮಾಡಿರುವೆ ಎಂದು ಸಂದೇಶದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ಮನಸ್ಥಿತಿಯಲ್ಲಿ ಕೆಲವು ದಿನಗಳ ಹಿಂದಷ್ಟೇ ಅನಿರುಧ್ಯ ಮನಃಶಾಸ್ತ್ರಜ್ಞರನ್ನು ಭೇಟಿ ಮಾಡಿ ಬಂದಿದ್ದ ಎಂದು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>