ಕೇರಳದಲ್ಲಿ 7,801 ಹೆಕ್ಟೇರ್ ಮತ್ತು ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಕ್ರಮವಾಗಿ 1,691 ಹೆಕ್ಟೇರ್ ಮತ್ತು 3,056 ಹೆಕ್ಟೇರ್ ಅರಣ್ಯ ಅತಿಕ್ರಮಣವಾಗಿದೆ. ‘ದೇಶದಲ್ಲಿ ಒಟ್ಟು 12,81,397 ಹೆಕ್ಟೇರ್ ಅರಣ್ಯ ನಾಶವಾಗಿದೆ ಎಂಬುದು ಆಘಾತಕರ ವಿಚಾರ. 250 ಕೋಟಿ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಹೀರುವಷ್ಟು ಅರಣ್ಯ ಮತ್ತು ಮರಗಳನ್ನು ಹೆಚ್ಚುವರಿಯಾಗಿ ಬೆಳೆಸಬೇಕು ಎಂಬುದು ದೇಶದ ಗುರಿ. ಆದರೆ, ಅದು ಈಗಿನ ಸ್ಥಿತಿಯಲ್ಲಿ ಸುಲಭವಲ್ಲ’ ಎಂದುಆರ್ಟಿಐ ಅಡಿ ಅರಣ್ಯ ಒತ್ತುವರಿ ಮಾಹಿತಿ ಪಡೆದುಕೊಂಡ ಪರಿಸರವಾದಿ ಮತ್ತು ವಕೀಲ ಅಕಾಶ್ ವಶಿಷ್ಠ ಹೇಳಿದ್ದಾರೆ.