ಇಂದು ಬೆಳಗ್ಗೆ ಯಶವಂತ್ ಸಿನ್ಹಾ ಅವರು ಶ್ರೀನಗರಕ್ಕೆ ಹೋಗುತ್ತಿರುವುದಾಗಿ ಟ್ವೀಟ್ ಮಾಡಿದ್ದರು. ‘ನಾವೀಗ ಶ್ರೀನಗರ ದಾರಿಯಲ್ಲಿದ್ದೇವೆ. ಕಾಶ್ಮೀರದ ಬಗ್ಗೆ ಕಾಳಜಿ ಹೊಂದಿರುವ ನಾಲ್ಕು ಜನರ ಗುಂಪು ಅಲ್ಲಿನ ನೈಜ ಸ್ಥಿತಿಯ ಬಗ್ಗೆ ಸ್ವತಂತ್ರವಾಗಿ ಮೌಲ್ಯಮಾಪನ ಮಾಡಲಿದೆ. ಸರ್ಕಾರದ ಕ್ರಮದಿಂದ ಕಣಿವೆಯಲ್ಲಿ ಆಗಿರುವ ಆರ್ಥಿಕ ಹಾನಿಯ ಬಗ್ಗೆ ತಿಳಿದುಕೊಳ್ಳಲಿದೆ. ಕಾಶ್ಮೀರಕ್ಕೆ ನಮಗೆ ಪ್ರವೇಶ ನೀಡುವ ಭರವಸೆ ಇದೆ,’ ಎಂದು ಟ್ವೀಟ್ ಮೂಲಕ ಹೇಳಿದ್ದರು.