ಪಟ್ನಾ (ಬಿಹಾರ): ಬಿಹಾರದ ಜೆಡಿಯುನಲ್ಲಿ ಭಿನ್ನಮತ ಮತ್ತೆ ಉಲ್ಬಣಗೊಂಡಿದ್ದು ಪವನ್ ವರ್ಮಾ ಅವರು ಯಾವ ಪಕ್ಷಕ್ಕೆ ಬೇಕಾದರೂ ಹೋಗಲು ಸ್ವತಂತ್ರರಾಗಿದ್ದಾರೆ ಎಂದು ಬಿಹಾರಮುಖ್ಯಮಂತ್ತಿ ನಿತಿಶ್ ಕುಮಾರ್ ಗುರುವಾರ ಹೇಳಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಪವನ್ ವರ್ಮಾ ಅವರು ದೆಹಲಿ ಬಿಜೆಪಿಯ ಜೊತೆ ಚುನಾವಣೆ ಮೈತ್ರಿ ಮಾಡಿಕೊಂಡಿರುವುದನ್ನುಪ್ರಶ್ನೆ ಮಾಡಿದ್ದರು. ಸಿಎಎ, ಎನ್ಆರ್ಸಿ ವಿರೋಧಿಸುವ ಜೆಡಿಯು ದೆಹಲಿಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದರ ಔಚಿತ್ಯವೇನು ಎಂದು ಪ್ರಶ್ನೆ ಮಾಡಿದ್ದರು.
Bihar CM Nitish Kumar on JDU leader Pawan Verma's letter to him on CAA and NRC: If anyone has any issues then the person can discuss it within party or at party meetings, but such kind of public statements are surprising. He can go and join any party he likes, my best wishes pic.twitter.com/GjmKOZtquM
ವರ್ಮಾ ಅವರು ಪಕ್ಷದೊಳಗಿನ ಆಂತರಿಕ ವಿಚಾರಗಳನ್ನು ಪಕ್ಷದ ಸಭೆಯಲ್ಲಿ ಮಾತ್ರ ಚರ್ಚಿಸಿಬೇಕು, ಅವರು ಸಾರ್ವಜನಿಕವಾಗಿ ಮಾತನಾಡುವ ಅವಶ್ಯಕತೆ ಇರಲಿಲ್ಲ, ಅವರು ನನ್ನ ಬಳಿ ಹೇಳಿರುವ ಹಲವು ವಿಚಾರಗಳನ್ನು ನಾನು ಸಾರ್ವಜನಿಕವಾಗಿ ಬಹಿರಂಗಪಡಿಸಲೇ ಎಂದು ಪ್ರಶ್ನೆ ಮಾಡಿದರು.
ಅವರು ಜೆಡಿಯು ಬಿಟ್ಟು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು, ಅವರಿಗೆ ಶುಭವಾಗಲಿ ಎಂದು ನಿತಿಶ್ ಕುಮಾರ್ ಹೇಳಿದ್ದಾರೆ.