ನವದೆಹಲಿ: ಕೋವಿಡ್ ಹಿನ್ನೆಲೆಯಲ್ಲಿ ಇಲ್ಲಿನ ಹೈಕೋರ್ಟ್ ಮತ್ತು ಜಿಲ್ಲಾ ಹಂತದ ಕೋರ್ಟ್ ಗಳಕಲಾಪವನ್ನು ಜುಲೈ 15ರವರೆಗೆ ತುರ್ತು ಪ್ರಕರಣಗಳಿಗಷ್ಟೇ ಸೀಮಿತಗೊಳಿಸಲಾಗಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ನೇತೃತ್ವದ ಆಡಳಿತ ಮತ್ತು ಸಾಮಾನ್ಯ ಕಾರ್ಯವಿಧಾನಗಳ ಪರಿಶೀಲನಾ ಸಮಿತಿ, ಈ ನಿರ್ಧಾರ ಕೈಗೊಂಡಿದೆ. ತುರ್ತು ಪ್ರಕರಣಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಿದೆ.