ನಾಥದ್ವಾರ–ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರು ತಡೆದು ಪರಿಶೀಲಿಸಿದ ಭಯೋತ್ಪಾದನಾ ನಿಗ್ರಹ ಪಡೆಯು 600 ಕೆ.ಜಿ ಬೆಳ್ಳಿ ಆಭರಣ ಹಾಗೂ ಐವರನ್ನು ವಶಕ್ಕೆ ಪಡೆದಿದೆ ಎಂದು ನಾಥದ್ವಾರ ಪೊಲೀಸ್ ಠಾಣೆ ಉಸ್ತುವಾರಿ ಜೀತೇಂದ್ರಕುಮಾರ್ ಅಂಚಾಲಿಯಾ ತಿಳಿಸಿದ್ದಾರೆ. ಶಿರೋಹಿಯಲ್ಲಿ ಬಸ್ನಲ್ಲಿ ಸಾಗಿಸುತ್ತಿದ್ದ 16.5 ಕೆ.ಜಿ ಬೆಳ್ಳಿ ಗಟ್ಟಿ ಹಾಗೂ ವ್ಯಕ್ತಿಯೊಬ್ಬನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.