<p><strong>ಚಂಡಿಗಡ</strong>: ಹರಿಯಾಣದಲ್ಲಿ ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ ಎಂಬುದನ್ನು ಅಲ್ಲಿನ ಪ್ರಮುಖ ರಾಜಕಾರಣಿಗಳ ಪಕ್ಷಾಂತರವೇ ಸೂಚಿಸುವಂತಿದೆ. ಪಕ್ಷಾಂತರ ಮಾಡಿರುವ ರಾಜಕಾರಣಿಗಳ ಲೆಕ್ಕಾಚಾರವೇ ಸರಿ ಎಂದಾದರೆ ಹರಿಯಾಣದಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ.</p>.<p>ಹರಿಯಾಣದ ಪ್ರಮುಖ ವಿರೋಧ ಪಕ್ಷ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್ಎಲ್ಡಿ) ಮತ್ತು ಇತರ ರಾಜಕೀಯ ಪಕ್ಷಗಳ ಹಲವು ಮುಖಂಡರು ಈಗಾಗಲೇ ಬಿಜೆಪಿ ಪಾಳಯ ಸೇರಿದ್ದಾರೆ. ಪಕ್ಷಾಂತರ ಮಾಡಿರುವ ಸುಮಾರು 40 ಮುಖಂಡರಲ್ಲಿ ಹಾಲಿ ಶಾಸಕರೂ ಇದ್ದಾರೆ.</p>.<p>ಅತಿ ಹೆಚ್ಚು ನಷ್ಟವಾಗಿರುವುದು ಐಎನ್ಎಲ್ಡಿಗೆ. ದಾಯಾದಿ ಕಲಹದಿಂದಾಗಿಈ ಪಕ್ಷವು ಈಗಾಗಲೇ ಎರಡಾಗಿ ವಿಭಜನೆಗೊಂಡಿದೆ. ದುಷ್ಯಂತ್ ಚೌತಾಲಾ ನೇತೃತ್ವದ ಜೆಜೆಪಿ ಮತ್ತು ಐಎನ್ಎಲ್ಡಿ ಒಂದಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ಹಾಗಾಗಿ, ಈ ಬಾರಿಯ ಚುನಾವಣೆ ಈ ಎರಡೂ ಪಕ್ಷಗಳ ಅಸ್ತಿತ್ವವನ್ನು ನಿರ್ಧರಿಸಬಹುದು ಎನ್ನಲಾಗಿದೆ.</p>.<p>ಎರಡೂ ಗುಂಪುಗಳ ನಡುವೆ ರಾಜಿ ಮಾಡಲು ಪಂಜಾಬ್ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಜಾತಿ ಪಂಚಾಯಿತಿಯ ಪ್ರಭಾವಿ ಮುಖಂಡರು ಶ್ರಮಿಸಿದ್ದಾರೆ. ಆದರೆ, ಅದು ಫಲ ನೀಡಿಲ್ಲ. ಈಗ, ಬಿಜೆಪಿ ಭಾರಿ ಪ್ರಬಲ ಎಂಬಂತೆ ಕಾಣಿಸುತ್ತಿರುವ ಈ ಸಂದರ್ಭದಲ್ಲಿ ಎರಡೂ ಪಕ್ಷಗಳು ಅಸ್ತಿತ್ವ ಕಳೆದುಕೊಳ್ಳುವುದು ಸನ್ನಿಹಿತ ಎಂದು ಹೇಳಲಾಗುತ್ತಿದೆ.</p>.<p>2014ರ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಐಎನ್ಎಲ್ಡಿ ಗೆದ್ದಿತ್ತು. ಆದರೆ, ಪಕ್ಷದಲ್ಲಿ ಈಗ ಉಳಿದಿರುವ ಶಾಸಕರ ಸಂಖ್ಯೆ ನಾಲ್ಕು ಮಾತ್ರ. ಕಳೆದ ಬಾರಿ ಆ ಪಕ್ಷಕ್ಕೆ ಶೇ 24ರಷ್ಟು ಮತವೂ ಸಿಕ್ಕಿತ್ತು. ಒಳಜಗಳದಿಂದಾಗಿ ಈ ಬಾರಿ ಇಂತಹ ಸಾಧನೆ ಸಾಧ್ಯವೇ ಇಲ್ಲದ ಸ್ಥಿತಿ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡಿಗಡ</strong>: ಹರಿಯಾಣದಲ್ಲಿ ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ ಎಂಬುದನ್ನು ಅಲ್ಲಿನ ಪ್ರಮುಖ ರಾಜಕಾರಣಿಗಳ ಪಕ್ಷಾಂತರವೇ ಸೂಚಿಸುವಂತಿದೆ. ಪಕ್ಷಾಂತರ ಮಾಡಿರುವ ರಾಜಕಾರಣಿಗಳ ಲೆಕ್ಕಾಚಾರವೇ ಸರಿ ಎಂದಾದರೆ ಹರಿಯಾಣದಲ್ಲಿ ಬಿಜೆಪಿಯೇ ಗೆಲುವು ಸಾಧಿಸಲಿದೆ.</p>.<p>ಹರಿಯಾಣದ ಪ್ರಮುಖ ವಿರೋಧ ಪಕ್ಷ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್ಎಲ್ಡಿ) ಮತ್ತು ಇತರ ರಾಜಕೀಯ ಪಕ್ಷಗಳ ಹಲವು ಮುಖಂಡರು ಈಗಾಗಲೇ ಬಿಜೆಪಿ ಪಾಳಯ ಸೇರಿದ್ದಾರೆ. ಪಕ್ಷಾಂತರ ಮಾಡಿರುವ ಸುಮಾರು 40 ಮುಖಂಡರಲ್ಲಿ ಹಾಲಿ ಶಾಸಕರೂ ಇದ್ದಾರೆ.</p>.<p>ಅತಿ ಹೆಚ್ಚು ನಷ್ಟವಾಗಿರುವುದು ಐಎನ್ಎಲ್ಡಿಗೆ. ದಾಯಾದಿ ಕಲಹದಿಂದಾಗಿಈ ಪಕ್ಷವು ಈಗಾಗಲೇ ಎರಡಾಗಿ ವಿಭಜನೆಗೊಂಡಿದೆ. ದುಷ್ಯಂತ್ ಚೌತಾಲಾ ನೇತೃತ್ವದ ಜೆಜೆಪಿ ಮತ್ತು ಐಎನ್ಎಲ್ಡಿ ಒಂದಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ಹಾಗಾಗಿ, ಈ ಬಾರಿಯ ಚುನಾವಣೆ ಈ ಎರಡೂ ಪಕ್ಷಗಳ ಅಸ್ತಿತ್ವವನ್ನು ನಿರ್ಧರಿಸಬಹುದು ಎನ್ನಲಾಗಿದೆ.</p>.<p>ಎರಡೂ ಗುಂಪುಗಳ ನಡುವೆ ರಾಜಿ ಮಾಡಲು ಪಂಜಾಬ್ನ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಜಾತಿ ಪಂಚಾಯಿತಿಯ ಪ್ರಭಾವಿ ಮುಖಂಡರು ಶ್ರಮಿಸಿದ್ದಾರೆ. ಆದರೆ, ಅದು ಫಲ ನೀಡಿಲ್ಲ. ಈಗ, ಬಿಜೆಪಿ ಭಾರಿ ಪ್ರಬಲ ಎಂಬಂತೆ ಕಾಣಿಸುತ್ತಿರುವ ಈ ಸಂದರ್ಭದಲ್ಲಿ ಎರಡೂ ಪಕ್ಷಗಳು ಅಸ್ತಿತ್ವ ಕಳೆದುಕೊಳ್ಳುವುದು ಸನ್ನಿಹಿತ ಎಂದು ಹೇಳಲಾಗುತ್ತಿದೆ.</p>.<p>2014ರ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಐಎನ್ಎಲ್ಡಿ ಗೆದ್ದಿತ್ತು. ಆದರೆ, ಪಕ್ಷದಲ್ಲಿ ಈಗ ಉಳಿದಿರುವ ಶಾಸಕರ ಸಂಖ್ಯೆ ನಾಲ್ಕು ಮಾತ್ರ. ಕಳೆದ ಬಾರಿ ಆ ಪಕ್ಷಕ್ಕೆ ಶೇ 24ರಷ್ಟು ಮತವೂ ಸಿಕ್ಕಿತ್ತು. ಒಳಜಗಳದಿಂದಾಗಿ ಈ ಬಾರಿ ಇಂತಹ ಸಾಧನೆ ಸಾಧ್ಯವೇ ಇಲ್ಲದ ಸ್ಥಿತಿ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>