<p>ಕೋವಿಡ್–19 ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆ ಅಧಿಕವಾಗಿರುವ ವರ್ಗಗಳ ಜನರನ್ನು ಸಮೀಕ್ಷೆಗೆ ಒಳಪಡಿಸಿ ಎಂದು ಎಲ್ಲಾ ರಾಜ್ಯಗಳಿಗೆ ಐಸಿಎಂಆರ್ ಸೂಚನೆ ನೀಡಿದೆ.</p>.<p>ಆರ್ಟಿ–ಪಿಸಿಆರ್ ತಪಾಸಣೆಗೆ ಎಲ್ಲರನ್ನೂ ಒಳಪಡಿಸಲು ಸಾಧ್ಯವಿಲ್ಲ. ಸೋಂಕು ತಗುಲಿದ 5 ದಿನಗಳ ಒಳಗೆ ಈ ಪರೀಕ್ಷೆ ನಡೆಸಿದರಷ್ಟೇ ಅನುಕೂಲವಿದೆ. ಹೀಗಾಗಿ ಐಜಿಜಿ ಎಲಿಸಾ ಆ್ಯಂಟಿಬಾಡಿ ತಪಾಸಣೆ ನಡೆಸಿದರೆ, ಸೋಂಕು ಹರಡುವಿಕೆಯ ಪ್ರದೇಶವನ್ನು ಪತ್ತೆಮಾಡಬಹುದು. ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆ ಅತ್ಯಧಿಕವಾಗಿರುವ ವರ್ಗಗಳನ್ನು ಆದ್ಯತೆ ಮೇರೆಗೆ ಈ ತಪಾಸಣೆಗೆ ಒಳಪಡಿಸಿ. ಹೀಗೆ ತಪಾಸಣೆಗೆ ಒಳಗಾದವರಲ್ಲಿ ಸೋಂಕು ಪತ್ತೆಯಾದರೆ, ಸೋಂಕು ಹರಡುವಿಕೆಯ ವ್ಯಾಪ್ತಿ ತಿಳಿಯುತ್ತದೆ ಎಂದು ಐಸಿಎಂಆರ್ ಹೇಳಿದೆ.</p>.<p>ಐಸಿಎಂಆರ್ ಮತ್ತು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ ಜಂಟಿಯಾಗಿ ಐಜಿಜಿ ಎಲಿಸ್ಸಾ ಆ್ಯಂಟಿಬಾಡಿ ತಪಾಸಣಾ ಕಿಟ್ ಅಭಿವೃದ್ಧಿಪಡಿಸಿವೆ.ಈ ಕಿಟ್ಗಳನ್ನು ತಯಾರಿಸಲು ದೇಶದ ಹಲವು ಕಂಪನಿಗಳಿಗೆ ತಂತ್ರಜ್ಞಾನವನ್ನು ಉಚಿತವಾಗಿ ವರ್ಗಾವಣೆ ಮಾಡಲಾಗಿದೆ. ಅಗತ್ಯಬಿದ್ದರೆ ಮತ್ತಷ್ಟು ಕಂಪನಿಗಳಿಗೆ ತಂತ್ರಜ್ಞಾನ ವರ್ಗಾವಣೆ ಮಾಡಲಾಗುತ್ತದೆ. ರಾಜ್ಯಗಳು ಬೇಡಿಕೆ ಇಟ್ಟರೆ, ಈ ಕಂಪನಿಗಳು ತಪಾಸಣಾ ಕಿಟ್ಗಳನ್ನು ತಯಾರಿಸಿ ಕೊಡಲಿವೆ. ಸಮೀಕ್ಷೆ ನಡೆಸಲು ಅಗತ್ಯವಿರುವ ನೆರವನ್ನೂ ಐಸಿಎಂಆರ್ ನೀಡಲಿದೆ ಎಂದು ರಾಜ್ಯಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ವಿವರಿಸಲಾಗಿದೆ.</p>.<p><strong>ಅಧಿಕ ಅಪಾಯದ 17 ವರ್ಗಗಳು</strong></p>.<p>17 ವರ್ಗದ ಜನರನ್ನು ಐಸಿಎಂಆರ್ ಗುರುತಿಸಿದ್ದು, ಅವರನ್ನು ಸಮೀಕ್ಷೆಗೆ ಒಳಪಡಿಸಿ ಎಂದು ಸೂಚಿಸಿದೆ.</p>.<p>1. ರೋಗಿಗಳು: ಎಚ್ಐವಿ, ಕ್ಷಯ, ತೀವ್ರ ಉಸಿರಾಟದ ತೊಂದರೆ ಇರುವವರು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು</p>.<p>2. ಕಂಟೈನ್ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸಮೀಕ್ಷೆಗೆ ಒಳಪಡಿಸಬೇಕು</p>.<p>3. ವೈದ್ಯಕೀಯ ಸಿಬ್ಬಂದಿ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸಹಾಯಕರು, ದಾದಿಯರು ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ</p>.<p>4. ಭದ್ರತಾ ಸಿಬ್ಬಂದಿ: ಜನರ ಸಂಪರ್ಕಕ್ಕೆ ಬರುವ ಭದ್ರತಾ ಸಿಬ್ಬಂದಿ, ಎಲ್ಲಾ ಕಚೇರಿಗಳಲ್ಲಿ ಜನರನ್ನು ತಪಾಸಣೆಗೆ ಒಳಪಡಿಸುವವರು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಎಲ್ಲಾ ಸಿಬ್ಬಂದಿ</p>.<p>5. ಪೊಲೀಸರು: ಪೊಲೀಸರು, ಗೃಹದಳದ ಸಿಬ್ಬಂದಿ, ಕೋವಿಡ್ ಸ್ವಯಂಸೇವಕರು</p>.<p>6. ಮಾಧ್ಯಮ ಸಿಬ್ಬಂದಿ: ವರದಿಗಾರಿಕೆ ಮತ್ತು ಛಾಯಾಗ್ರಹಣಕ್ಕೆ ಹೋಗುವ ಸಿಬ್ಬಂದಿ, ಛಾಯಾಗ್ರಾಹಕರು, ಚಾಲಕರು ಮತ್ತು ಸಹಾಯಕ ಸಿಬ್ಬಂದಿ</p>.<p>7. ಗ್ರಾಮೀಣ ಭಾಗದ ಜನರು: ನಗರಗಳಿಂದ ಹಳ್ಳಿಗಳಿಗೆ ವಾಪಸ್ ಆಗಿರುವ ವಲಸೆ ಕಾರ್ಮಿಕರನ್ನು ಆದ್ಯತೆ ಮೇರೆಗೆ ಸಮೀಕ್ಷೆಗೆ ಒಳಪಡಿಸಬೇಕು. ಈ ಜನರ ಸಂಪರ್ಕಕ್ಕೆ ಬಂದಿರುವವರನ್ನೂ ಸಮೀಕ್ಷೆಗೆ ಒಳಪಡಿಸಬೇಕು</p>.<p>8. ಕಾರ್ಮಿಕರು: ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ದಿನಗೂಲಿ ನೌಕರರು, ವಲಸೆ ಕಾರ್ಮಿಕರನ್ನು ಸಮೀಕ್ಷೆಗೆ ಒಳಪಡಿಸಬೇಕು. ಸೇವಾ ವಲಯದಲ್ಲಿ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು</p>.<p>9. ರೈತರು ಮತ್ತು ವ್ಯಾಪಾರಿಗಳು: ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ದೊಡ್ಡ ಮಾರುಕಟ್ಟೆಗಳಿಗೆ ಭೇಟಿ ನೀಡಿರುವ ಮತ್ತು ನೀಡುವ ರೈತರು, ಕೂಲಿ ಕಾರ್ಮಿಕರು, ಹಮಾಲಿಗಳು, ವ್ಯಾಪಾರಿಗಳು, ದಲ್ಲಾಳಿಗಳು ಮತ್ತು ವಾಹನ ಚಾಲಕರು</p>.<p>10. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ನಗರಪಾಲಿಕೆ, ನಗರ ಸಭೆ, ಪುರ ಸಭೆ ಮತ್ತು ಗ್ರಾಮ ಪಂಚಾಯಿತಿಗಳ ಎಲ್ಲಾ ಸಿಬ್ಬಂದಿ. ನೀರು ಸರಬರಾಜು ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಎಲ್ಲಾ ಸಿಬ್ಬಂದಿ</p>.<p>11. ಚಾಲಕರು: ಆಸ್ಪತ್ರೆ, ಆಂಬುಲೆನ್ಸ್, ಬಸ್, ಟ್ರಕ್, ಟ್ಯಾಕ್ಸಿ ಮತ್ತು ಆಟೊ ಚಾಲಕರು. ಬಸ್ ಕಂಡಕ್ಟರ್ಗಳು, ಬಸ್ ಮತ್ತು ಟ್ರಕ್ನ ಕ್ಲೀನರ್ಗಳು ಮತ್ತು ಸಹಾಯಕ ಸಿಬ್ಬಂದಿ</p>.<p>12. ಬ್ಯಾಂಕ್, ಅಂಚೆ ಮತ್ತು ದೂರವಾಣಿ ಸಿಬ್ಬಂದಿ: ಬ್ಯಾಂಕಿಂಗ್ ಸಿಬ್ಬಂದಿ, ಅಂಚೆ ಇಲಾಖೆ ನೌಕರರು, ಕೊರಿಯರ್ ಮತ್ತು ಪಾರ್ಸಲ್ ಸೇವೆ ನೌಕರರು ಮತ್ತು ದೂರಸಂಪರ್ಕ ವಲಯದಲ್ಲಿರುವ ಕ್ಷೇತ್ರ ಸಿಬ್ಬಂದಿ</p>.<p>13: ಅಂಗಡಿ: ದಿನಸಿ, ತರಕಾರಿ, ಅಗತ್ಯ ವಸ್ತುಗಳ ಅಂಗಡಿ, ಹೋಟೆಲ್ಗಳು, ಪಾರ್ಸೆಲ್ ಸೇವೆ ನೀಡುತ್ತಿರುವ ಹೋಟೆಲ್ಗಳು, ಹಾಲಿನ ಅಂಗಡಿ, ಔಷಧ ಅಂಗಡಿಗಳಮಾಲೀಕರು, ಕೆಲಸಗಾರರು</p>.<p>14: ವಿಮಾನಯಾನ ಸಿಬ್ಬಂದಿ: ವಿಮಾನ ನಿಲ್ದಾಣದ ಎಲ್ಲಾ ಸಿಬ್ಬಂದಿ, ವಿಮಾನಯಾನ ಸಂಸ್ಥೆಯ ಎಲ್ಲಾ ಸಿಬ್ಬಂದಿ</p>.<p>15: ವಿದೇಶಗಳಿಂದ ಭಾರತೀಯರನ್ನು ಕರೆತರಲು ದುಡಿದ ಎಲ್ಲಾ ಸಿಬ್ಬಂದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು</p>.<p>16: ವೃದ್ಧಾಶ್ರಮ, ಅನಾಥಾಶ್ರಮ, ನಿರಾಶ್ರಿತ ಶಿಬಿರಗಳಲ್ಲಿ ಇರುವವರನ್ನು ಸಮೀಕ್ಷೆಗೆ ಒಳಪಡಿಸಬೇಕು. ಗಾಳಿಯಾಡದಂತಹ ಇಕ್ಕಟ್ಟಿನ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಮತ್ತು ದುಡಿಯುತ್ತಿರುವವರನ್ನೂ ಸಮೀಕ್ಷೆಗೆ ಒಳಪಡಿಸಬೇಕು</p>.<p>17: ಕೈದಿಗಳು: ಎಲ್ಲಾ ಜೈಲುಗಳಲ್ಲಿ ಇರುವ ಕೈದಿಗಳು ಮತ್ತು ಹೊಸದಾಗಿ ಜೈಲಿಗೆ ಬರುವ ಕೈದಿಗಳನ್ನೂ ಸಮೀಕ್ಷೆಗೆ ಒಳಪಡಿಸಬೇಕು</p>.<p><strong>ಆಧಾರ: ಐಸಿಎಂಆರ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋವಿಡ್–19 ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆ ಅಧಿಕವಾಗಿರುವ ವರ್ಗಗಳ ಜನರನ್ನು ಸಮೀಕ್ಷೆಗೆ ಒಳಪಡಿಸಿ ಎಂದು ಎಲ್ಲಾ ರಾಜ್ಯಗಳಿಗೆ ಐಸಿಎಂಆರ್ ಸೂಚನೆ ನೀಡಿದೆ.</p>.<p>ಆರ್ಟಿ–ಪಿಸಿಆರ್ ತಪಾಸಣೆಗೆ ಎಲ್ಲರನ್ನೂ ಒಳಪಡಿಸಲು ಸಾಧ್ಯವಿಲ್ಲ. ಸೋಂಕು ತಗುಲಿದ 5 ದಿನಗಳ ಒಳಗೆ ಈ ಪರೀಕ್ಷೆ ನಡೆಸಿದರಷ್ಟೇ ಅನುಕೂಲವಿದೆ. ಹೀಗಾಗಿ ಐಜಿಜಿ ಎಲಿಸಾ ಆ್ಯಂಟಿಬಾಡಿ ತಪಾಸಣೆ ನಡೆಸಿದರೆ, ಸೋಂಕು ಹರಡುವಿಕೆಯ ಪ್ರದೇಶವನ್ನು ಪತ್ತೆಮಾಡಬಹುದು. ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆ ಅತ್ಯಧಿಕವಾಗಿರುವ ವರ್ಗಗಳನ್ನು ಆದ್ಯತೆ ಮೇರೆಗೆ ಈ ತಪಾಸಣೆಗೆ ಒಳಪಡಿಸಿ. ಹೀಗೆ ತಪಾಸಣೆಗೆ ಒಳಗಾದವರಲ್ಲಿ ಸೋಂಕು ಪತ್ತೆಯಾದರೆ, ಸೋಂಕು ಹರಡುವಿಕೆಯ ವ್ಯಾಪ್ತಿ ತಿಳಿಯುತ್ತದೆ ಎಂದು ಐಸಿಎಂಆರ್ ಹೇಳಿದೆ.</p>.<p>ಐಸಿಎಂಆರ್ ಮತ್ತು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ ಜಂಟಿಯಾಗಿ ಐಜಿಜಿ ಎಲಿಸ್ಸಾ ಆ್ಯಂಟಿಬಾಡಿ ತಪಾಸಣಾ ಕಿಟ್ ಅಭಿವೃದ್ಧಿಪಡಿಸಿವೆ.ಈ ಕಿಟ್ಗಳನ್ನು ತಯಾರಿಸಲು ದೇಶದ ಹಲವು ಕಂಪನಿಗಳಿಗೆ ತಂತ್ರಜ್ಞಾನವನ್ನು ಉಚಿತವಾಗಿ ವರ್ಗಾವಣೆ ಮಾಡಲಾಗಿದೆ. ಅಗತ್ಯಬಿದ್ದರೆ ಮತ್ತಷ್ಟು ಕಂಪನಿಗಳಿಗೆ ತಂತ್ರಜ್ಞಾನ ವರ್ಗಾವಣೆ ಮಾಡಲಾಗುತ್ತದೆ. ರಾಜ್ಯಗಳು ಬೇಡಿಕೆ ಇಟ್ಟರೆ, ಈ ಕಂಪನಿಗಳು ತಪಾಸಣಾ ಕಿಟ್ಗಳನ್ನು ತಯಾರಿಸಿ ಕೊಡಲಿವೆ. ಸಮೀಕ್ಷೆ ನಡೆಸಲು ಅಗತ್ಯವಿರುವ ನೆರವನ್ನೂ ಐಸಿಎಂಆರ್ ನೀಡಲಿದೆ ಎಂದು ರಾಜ್ಯಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ವಿವರಿಸಲಾಗಿದೆ.</p>.<p><strong>ಅಧಿಕ ಅಪಾಯದ 17 ವರ್ಗಗಳು</strong></p>.<p>17 ವರ್ಗದ ಜನರನ್ನು ಐಸಿಎಂಆರ್ ಗುರುತಿಸಿದ್ದು, ಅವರನ್ನು ಸಮೀಕ್ಷೆಗೆ ಒಳಪಡಿಸಿ ಎಂದು ಸೂಚಿಸಿದೆ.</p>.<p>1. ರೋಗಿಗಳು: ಎಚ್ಐವಿ, ಕ್ಷಯ, ತೀವ್ರ ಉಸಿರಾಟದ ತೊಂದರೆ ಇರುವವರು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು</p>.<p>2. ಕಂಟೈನ್ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸಮೀಕ್ಷೆಗೆ ಒಳಪಡಿಸಬೇಕು</p>.<p>3. ವೈದ್ಯಕೀಯ ಸಿಬ್ಬಂದಿ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸಹಾಯಕರು, ದಾದಿಯರು ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ</p>.<p>4. ಭದ್ರತಾ ಸಿಬ್ಬಂದಿ: ಜನರ ಸಂಪರ್ಕಕ್ಕೆ ಬರುವ ಭದ್ರತಾ ಸಿಬ್ಬಂದಿ, ಎಲ್ಲಾ ಕಚೇರಿಗಳಲ್ಲಿ ಜನರನ್ನು ತಪಾಸಣೆಗೆ ಒಳಪಡಿಸುವವರು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಎಲ್ಲಾ ಸಿಬ್ಬಂದಿ</p>.<p>5. ಪೊಲೀಸರು: ಪೊಲೀಸರು, ಗೃಹದಳದ ಸಿಬ್ಬಂದಿ, ಕೋವಿಡ್ ಸ್ವಯಂಸೇವಕರು</p>.<p>6. ಮಾಧ್ಯಮ ಸಿಬ್ಬಂದಿ: ವರದಿಗಾರಿಕೆ ಮತ್ತು ಛಾಯಾಗ್ರಹಣಕ್ಕೆ ಹೋಗುವ ಸಿಬ್ಬಂದಿ, ಛಾಯಾಗ್ರಾಹಕರು, ಚಾಲಕರು ಮತ್ತು ಸಹಾಯಕ ಸಿಬ್ಬಂದಿ</p>.<p>7. ಗ್ರಾಮೀಣ ಭಾಗದ ಜನರು: ನಗರಗಳಿಂದ ಹಳ್ಳಿಗಳಿಗೆ ವಾಪಸ್ ಆಗಿರುವ ವಲಸೆ ಕಾರ್ಮಿಕರನ್ನು ಆದ್ಯತೆ ಮೇರೆಗೆ ಸಮೀಕ್ಷೆಗೆ ಒಳಪಡಿಸಬೇಕು. ಈ ಜನರ ಸಂಪರ್ಕಕ್ಕೆ ಬಂದಿರುವವರನ್ನೂ ಸಮೀಕ್ಷೆಗೆ ಒಳಪಡಿಸಬೇಕು</p>.<p>8. ಕಾರ್ಮಿಕರು: ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ದಿನಗೂಲಿ ನೌಕರರು, ವಲಸೆ ಕಾರ್ಮಿಕರನ್ನು ಸಮೀಕ್ಷೆಗೆ ಒಳಪಡಿಸಬೇಕು. ಸೇವಾ ವಲಯದಲ್ಲಿ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು</p>.<p>9. ರೈತರು ಮತ್ತು ವ್ಯಾಪಾರಿಗಳು: ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ದೊಡ್ಡ ಮಾರುಕಟ್ಟೆಗಳಿಗೆ ಭೇಟಿ ನೀಡಿರುವ ಮತ್ತು ನೀಡುವ ರೈತರು, ಕೂಲಿ ಕಾರ್ಮಿಕರು, ಹಮಾಲಿಗಳು, ವ್ಯಾಪಾರಿಗಳು, ದಲ್ಲಾಳಿಗಳು ಮತ್ತು ವಾಹನ ಚಾಲಕರು</p>.<p>10. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ನಗರಪಾಲಿಕೆ, ನಗರ ಸಭೆ, ಪುರ ಸಭೆ ಮತ್ತು ಗ್ರಾಮ ಪಂಚಾಯಿತಿಗಳ ಎಲ್ಲಾ ಸಿಬ್ಬಂದಿ. ನೀರು ಸರಬರಾಜು ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಎಲ್ಲಾ ಸಿಬ್ಬಂದಿ</p>.<p>11. ಚಾಲಕರು: ಆಸ್ಪತ್ರೆ, ಆಂಬುಲೆನ್ಸ್, ಬಸ್, ಟ್ರಕ್, ಟ್ಯಾಕ್ಸಿ ಮತ್ತು ಆಟೊ ಚಾಲಕರು. ಬಸ್ ಕಂಡಕ್ಟರ್ಗಳು, ಬಸ್ ಮತ್ತು ಟ್ರಕ್ನ ಕ್ಲೀನರ್ಗಳು ಮತ್ತು ಸಹಾಯಕ ಸಿಬ್ಬಂದಿ</p>.<p>12. ಬ್ಯಾಂಕ್, ಅಂಚೆ ಮತ್ತು ದೂರವಾಣಿ ಸಿಬ್ಬಂದಿ: ಬ್ಯಾಂಕಿಂಗ್ ಸಿಬ್ಬಂದಿ, ಅಂಚೆ ಇಲಾಖೆ ನೌಕರರು, ಕೊರಿಯರ್ ಮತ್ತು ಪಾರ್ಸಲ್ ಸೇವೆ ನೌಕರರು ಮತ್ತು ದೂರಸಂಪರ್ಕ ವಲಯದಲ್ಲಿರುವ ಕ್ಷೇತ್ರ ಸಿಬ್ಬಂದಿ</p>.<p>13: ಅಂಗಡಿ: ದಿನಸಿ, ತರಕಾರಿ, ಅಗತ್ಯ ವಸ್ತುಗಳ ಅಂಗಡಿ, ಹೋಟೆಲ್ಗಳು, ಪಾರ್ಸೆಲ್ ಸೇವೆ ನೀಡುತ್ತಿರುವ ಹೋಟೆಲ್ಗಳು, ಹಾಲಿನ ಅಂಗಡಿ, ಔಷಧ ಅಂಗಡಿಗಳಮಾಲೀಕರು, ಕೆಲಸಗಾರರು</p>.<p>14: ವಿಮಾನಯಾನ ಸಿಬ್ಬಂದಿ: ವಿಮಾನ ನಿಲ್ದಾಣದ ಎಲ್ಲಾ ಸಿಬ್ಬಂದಿ, ವಿಮಾನಯಾನ ಸಂಸ್ಥೆಯ ಎಲ್ಲಾ ಸಿಬ್ಬಂದಿ</p>.<p>15: ವಿದೇಶಗಳಿಂದ ಭಾರತೀಯರನ್ನು ಕರೆತರಲು ದುಡಿದ ಎಲ್ಲಾ ಸಿಬ್ಬಂದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು</p>.<p>16: ವೃದ್ಧಾಶ್ರಮ, ಅನಾಥಾಶ್ರಮ, ನಿರಾಶ್ರಿತ ಶಿಬಿರಗಳಲ್ಲಿ ಇರುವವರನ್ನು ಸಮೀಕ್ಷೆಗೆ ಒಳಪಡಿಸಬೇಕು. ಗಾಳಿಯಾಡದಂತಹ ಇಕ್ಕಟ್ಟಿನ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಮತ್ತು ದುಡಿಯುತ್ತಿರುವವರನ್ನೂ ಸಮೀಕ್ಷೆಗೆ ಒಳಪಡಿಸಬೇಕು</p>.<p>17: ಕೈದಿಗಳು: ಎಲ್ಲಾ ಜೈಲುಗಳಲ್ಲಿ ಇರುವ ಕೈದಿಗಳು ಮತ್ತು ಹೊಸದಾಗಿ ಜೈಲಿಗೆ ಬರುವ ಕೈದಿಗಳನ್ನೂ ಸಮೀಕ್ಷೆಗೆ ಒಳಪಡಿಸಬೇಕು</p>.<p><strong>ಆಧಾರ: ಐಸಿಎಂಆರ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>