<p><strong>ರಾಂಚಿ:</strong> ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಹಾಗೂ ಸ್ವಯಂ ಉದ್ಯೋಗ ಕೈಗೊಂಡವರಿಗೆ ಪಿಂಚಣಿ ಸೌಲಭ್ಯ ನೀಡುವ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಲ್ಲಿ ಚಾಲನೆ ನೀಡಿದರು.</p>.<p>ಸಣ್ಣ ಹಾಗೂ ಮಧ್ಯಮ ರೈತರು ‘ಪ್ರಧಾನ್ ಮಂತ್ರಿ ಕಿಸಾನ್ ಮಾನ್ಧನ್ ಯೋಜನೆ’ಯಡಿ ನೋಂದಣಿ ಮಾಡಿಕೊಳ್ಳಬಹುದು. ಅವರಿಗೆ 60 ವರ್ಷ ಆದಾಗ, ಮಾಸಿಕ ಕನಿಷ್ಠ ₹ 3,000 ಪಿಂಚಣಿ ನೀಡಲಾಗುತ್ತದೆ.</p>.<p>ಸಣ್ಣ ವ್ಯಾಪಾರಿಗಳು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ‘ಪ್ರಧಾನ್ ಮಂತ್ರಿ ಲಘು ವ್ಯಾಪಾರಿ ಮಾನ್ಧನ್ ಯೋಜನೆ’, ಸ್ವಯಂ ಉದ್ಯೋಗ ಕೈಗೊಂಡವರಿಗಾಗಿ ‘ಸ್ವರೋಜಗಾರ್ ಪಿಂಚಣಿ ಯೋಜನೆ’ಗೂ ಚಾಲನೆ ನೀಡಲಾಯಿತು.</p>.<p><strong>ಯೋಜನೆಯ ವೈಶಿಷ್ಟ್ಯಗಳು</strong></p>.<p>*18–40 ವರ್ಷದ ಒಳಗಿನವರು ಹಾಗೂ ಮಾಸಿಕ ₹ 15,000ಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು</p>.<p>*ಫಲಾನುಭವಿ ತುಂಬುವ ಕಂತಿನ ಮೊತ್ತದಷ್ಟೇ ಹಣವನ್ನು ಸರ್ಕಾರ ಭರಿಸುವುದು. ಈ ಯೋಜನೆಯಡಿ ನೋಂದಣಿಗೆ ಕನಿಷ್ಠ ಶಿಕ್ಷಣ ಪಡೆದಿರಬೇಕು ಎಂಬ ನಿಬಂಧನೆ ಇಲ್ಲ.</p>.<p>*ಎನ್ಪಿಎಸ್, ಇಎಸ್ಐಸಿ, ಇಪಿಎಫ್ ಸೌಲಭ್ಯ ಹೊಂದಿದವರು ಹಾಗೂ ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗಳ ಲಾಭ ಪಡೆಯಲು ಅರ್ಹರಲ್ಲ.</p>.<p>*ಫಲಾನುಭವಿಯ ವಯಸ್ಸಿಗೆ ಅನುಗುಣವಾಗಿ ಮಾಸಿಕ ₹ 55 ರಿಂದ ₹ 400 ರಂತೆ 60 ವರ್ಷದ ವರೆಗೆ ಕಂತು ತುಂಬಬೇಕು. ಯೋಜನೆ ಕುರಿತ ವಿವರಗಳಿಗೆ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ:</strong> ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ಹಾಗೂ ಸ್ವಯಂ ಉದ್ಯೋಗ ಕೈಗೊಂಡವರಿಗೆ ಪಿಂಚಣಿ ಸೌಲಭ್ಯ ನೀಡುವ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಲ್ಲಿ ಚಾಲನೆ ನೀಡಿದರು.</p>.<p>ಸಣ್ಣ ಹಾಗೂ ಮಧ್ಯಮ ರೈತರು ‘ಪ್ರಧಾನ್ ಮಂತ್ರಿ ಕಿಸಾನ್ ಮಾನ್ಧನ್ ಯೋಜನೆ’ಯಡಿ ನೋಂದಣಿ ಮಾಡಿಕೊಳ್ಳಬಹುದು. ಅವರಿಗೆ 60 ವರ್ಷ ಆದಾಗ, ಮಾಸಿಕ ಕನಿಷ್ಠ ₹ 3,000 ಪಿಂಚಣಿ ನೀಡಲಾಗುತ್ತದೆ.</p>.<p>ಸಣ್ಣ ವ್ಯಾಪಾರಿಗಳು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ‘ಪ್ರಧಾನ್ ಮಂತ್ರಿ ಲಘು ವ್ಯಾಪಾರಿ ಮಾನ್ಧನ್ ಯೋಜನೆ’, ಸ್ವಯಂ ಉದ್ಯೋಗ ಕೈಗೊಂಡವರಿಗಾಗಿ ‘ಸ್ವರೋಜಗಾರ್ ಪಿಂಚಣಿ ಯೋಜನೆ’ಗೂ ಚಾಲನೆ ನೀಡಲಾಯಿತು.</p>.<p><strong>ಯೋಜನೆಯ ವೈಶಿಷ್ಟ್ಯಗಳು</strong></p>.<p>*18–40 ವರ್ಷದ ಒಳಗಿನವರು ಹಾಗೂ ಮಾಸಿಕ ₹ 15,000ಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು</p>.<p>*ಫಲಾನುಭವಿ ತುಂಬುವ ಕಂತಿನ ಮೊತ್ತದಷ್ಟೇ ಹಣವನ್ನು ಸರ್ಕಾರ ಭರಿಸುವುದು. ಈ ಯೋಜನೆಯಡಿ ನೋಂದಣಿಗೆ ಕನಿಷ್ಠ ಶಿಕ್ಷಣ ಪಡೆದಿರಬೇಕು ಎಂಬ ನಿಬಂಧನೆ ಇಲ್ಲ.</p>.<p>*ಎನ್ಪಿಎಸ್, ಇಎಸ್ಐಸಿ, ಇಪಿಎಫ್ ಸೌಲಭ್ಯ ಹೊಂದಿದವರು ಹಾಗೂ ಆದಾಯ ತೆರಿಗೆ ಪಾವತಿಸುವವರು ಈ ಯೋಜನೆಗಳ ಲಾಭ ಪಡೆಯಲು ಅರ್ಹರಲ್ಲ.</p>.<p>*ಫಲಾನುಭವಿಯ ವಯಸ್ಸಿಗೆ ಅನುಗುಣವಾಗಿ ಮಾಸಿಕ ₹ 55 ರಿಂದ ₹ 400 ರಂತೆ 60 ವರ್ಷದ ವರೆಗೆ ಕಂತು ತುಂಬಬೇಕು. ಯೋಜನೆ ಕುರಿತ ವಿವರಗಳಿಗೆ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>