ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಆಂಧ್ರ ಪ್ರದೇಶ ವಿಭಜನೆಯಾಗಿ ತೆಲಂಗಾಣ ರಚನೆಯಾಯಿತು. ಆ ಸಂದರ್ಭ, ಕೇಶವ ರಾವ್ ಅವರ ಮುತ್ಸದ್ದಿತನ ಮತ್ತು ಮನವೊಲಿಸುವ ಕೌಶಲ ಚಂದ್ರಶೇಖರ ರಾವ್ ಅವರ ನೆರವಿಗೆ ಬಂದಿತ್ತು. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕಾಂಗ್ರೆಸ್ ಜತೆ ವಿಲೀನವಾಗದಂತೆ ನೋಡಿಕೊಳ್ಳುವಲ್ಲಿ, ಆ ನಿಟ್ಟಿನಲ್ಲಿಚಂದ್ರಶೇಖರ ರಾವ್ ಅವರನ್ನು ತಡೆಯುವಲ್ಲಿ ಕೇಶವ ರಾವ್ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಜತೆ ಸೇರಿದರೆ ಜನ ನಿಮ್ಮನ್ನು ಕ್ಷಮಿಸಲಾರರು ಎಂಬುದನ್ನು ಕೇಶವ ರಾವ್ ಅವರೇ ಚಂದ್ರಶೇಖರ ರಾವ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ.