<p><strong>ತಿರುವನಂತಪುರ:</strong> ಕೇರಳದಲ್ಲೀಗ ಕ್ರೈಸ್ತ ಮಹಿಳೆಯರನ್ನು ಲವ್ ಜಿಹಾದ್ ಮೂಲಕ ಆಮಿಷವೊಡ್ಡಿ, ಮತಾಂತರಗೊಳಿಸಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರಿಸಲಾಗುತ್ತಿದ್ದು, ಇದರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕ್ರೈಸ್ತ ಸಮುದಾಯದವರು ಆರೋಪಿಸಿದ್ದಾರೆ.</p>.<p>ಕಳೆದೆರಡು ವರ್ಷಗಳಲ್ಲಿ ಕೇರಳದಿಂದ ಐಎಸ್ಗೆ ನೇಮಕಗೊಂಡ 21 ಮಂದಿಯಲ್ಲಿ ಅರ್ಧದಷ್ಟು ಕ್ರೈಸ್ತ ಧರ್ಮದಿಂದ ಮತಾಂತರಗೊಂಡವರು ಎಂದು ಕಾರ್ಡಿನಲ್ ಜಾರ್ಜ್ ಅಲನ್ ಚೇರಿ ನೇತೃತ್ವದ ಸಿರೊ–ಮಲಬಾರ್ ಚರ್ಚ್ನ ವೇದಿಕೆಯುಹೇಳಿಕೆಯಲ್ಲಿ ತಿಳಿಸಿದೆ. ಇದು ಕೇರಳದ ಅತಿದೊಡ್ಡ ಕ್ರಿಶ್ಚಿಯನ್ ಘಟಕವಾಗಿದೆ.</p>.<p>ಕೇರಳದಲ್ಲಿ 'ಲವ್ ಜಿಹಾದ್' ಎಂಬುದು ಆತಂಕಕಾರಿಯಾಗಿ ಬೆಳೆಯುತ್ತಿದೆ ಮತ್ತು ಇದು ಜಾತ್ಯತೀತತೆ ಮತ್ತು ಸಾಮಾಜಿಕ ಸಮಾನತೆಗೆ ಅಪಾಯ ತಂದೊಡ್ಡುತ್ತಿದೆ ಎಂದು ಮೂರು ದಿನಗಳ ಸಭೆಯ ಬಳಿಕ ಚರ್ಚ್ನ ಸಿನೋಡ್ ಹೇಳಿಕೆ ನೀಡಿದೆ.</p>.<p>ಸಿನೋಡ್ ಎಂಬುದು ಎಲ್ಲ ಬಿಷಪ್ಪರನ್ನೊಳಗೊಂಡಿರುವ ಚರ್ಚ್ನ ಪರಮೋಚ್ಚ ಸಂಸ್ಥೆಯಾಗಿದೆ. ಇದೇ ವಿಷಯದಲ್ಲಿ ಕೇರಳದಲ್ಲಿ ಕ್ರಿಶ್ಚಿಯನ್ ಯುವತಿಯರನ್ನು ಹತ್ಯೆ ಮಾಡಲಾಗುತ್ತಿದೆ ಎಂದಿರುವ ಸಿನೋಡ್, ಈ ಬಗ್ಗೆ ಪೋಷಕರು ಮತ್ತು ಯುವತಿಯರಲ್ಲಿ ಜಾಗೃತಿ ಅಭಿಯಾನ ನಡೆಯಬೇಕಿದೆ ಎಂದು ಹೇಳಿದೆ.</p>.<p>ಆದರೆ, ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ಲಾಮಿಕ್ ಸಂಘಟನೆಯಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಹಿಂದುತ್ವದ ಫ್ಯಾಸಿಸಂ ವಿರುದ್ಧ ಸಮಾಜದ ಎಲ್ಲ ವರ್ಗಗಳ ಏಕತೆ ಬೆಳೆಯುತ್ತಿರುವ ಈ ಹಂತದಲ್ಲಿ ಇಂತಹಾ ಆರೋಪಗಳು ವಿಭಜನೆಗೆ ಕಾರಣವಾಗಬಹುದು. ಚರ್ಚ್ ತನ್ನ ಹೇಳಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ. ಆದರೆ, ವಿಶ್ವ ಹಿಂದು ಪರಿಷತ್ ಚರ್ಚ್ ಹೇಳಿಕೆಯನ್ನು ಸ್ವಾಗತಿಸಿದ್ದು, ಕೇರಳದಲ್ಲಿ ಲವ್ ಜಿಹಾದ್ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಕೇರಳದಲ್ಲೀಗ ಕ್ರೈಸ್ತ ಮಹಿಳೆಯರನ್ನು ಲವ್ ಜಿಹಾದ್ ಮೂಲಕ ಆಮಿಷವೊಡ್ಡಿ, ಮತಾಂತರಗೊಳಿಸಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರಿಸಲಾಗುತ್ತಿದ್ದು, ಇದರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕ್ರೈಸ್ತ ಸಮುದಾಯದವರು ಆರೋಪಿಸಿದ್ದಾರೆ.</p>.<p>ಕಳೆದೆರಡು ವರ್ಷಗಳಲ್ಲಿ ಕೇರಳದಿಂದ ಐಎಸ್ಗೆ ನೇಮಕಗೊಂಡ 21 ಮಂದಿಯಲ್ಲಿ ಅರ್ಧದಷ್ಟು ಕ್ರೈಸ್ತ ಧರ್ಮದಿಂದ ಮತಾಂತರಗೊಂಡವರು ಎಂದು ಕಾರ್ಡಿನಲ್ ಜಾರ್ಜ್ ಅಲನ್ ಚೇರಿ ನೇತೃತ್ವದ ಸಿರೊ–ಮಲಬಾರ್ ಚರ್ಚ್ನ ವೇದಿಕೆಯುಹೇಳಿಕೆಯಲ್ಲಿ ತಿಳಿಸಿದೆ. ಇದು ಕೇರಳದ ಅತಿದೊಡ್ಡ ಕ್ರಿಶ್ಚಿಯನ್ ಘಟಕವಾಗಿದೆ.</p>.<p>ಕೇರಳದಲ್ಲಿ 'ಲವ್ ಜಿಹಾದ್' ಎಂಬುದು ಆತಂಕಕಾರಿಯಾಗಿ ಬೆಳೆಯುತ್ತಿದೆ ಮತ್ತು ಇದು ಜಾತ್ಯತೀತತೆ ಮತ್ತು ಸಾಮಾಜಿಕ ಸಮಾನತೆಗೆ ಅಪಾಯ ತಂದೊಡ್ಡುತ್ತಿದೆ ಎಂದು ಮೂರು ದಿನಗಳ ಸಭೆಯ ಬಳಿಕ ಚರ್ಚ್ನ ಸಿನೋಡ್ ಹೇಳಿಕೆ ನೀಡಿದೆ.</p>.<p>ಸಿನೋಡ್ ಎಂಬುದು ಎಲ್ಲ ಬಿಷಪ್ಪರನ್ನೊಳಗೊಂಡಿರುವ ಚರ್ಚ್ನ ಪರಮೋಚ್ಚ ಸಂಸ್ಥೆಯಾಗಿದೆ. ಇದೇ ವಿಷಯದಲ್ಲಿ ಕೇರಳದಲ್ಲಿ ಕ್ರಿಶ್ಚಿಯನ್ ಯುವತಿಯರನ್ನು ಹತ್ಯೆ ಮಾಡಲಾಗುತ್ತಿದೆ ಎಂದಿರುವ ಸಿನೋಡ್, ಈ ಬಗ್ಗೆ ಪೋಷಕರು ಮತ್ತು ಯುವತಿಯರಲ್ಲಿ ಜಾಗೃತಿ ಅಭಿಯಾನ ನಡೆಯಬೇಕಿದೆ ಎಂದು ಹೇಳಿದೆ.</p>.<p>ಆದರೆ, ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ಲಾಮಿಕ್ ಸಂಘಟನೆಯಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಹಿಂದುತ್ವದ ಫ್ಯಾಸಿಸಂ ವಿರುದ್ಧ ಸಮಾಜದ ಎಲ್ಲ ವರ್ಗಗಳ ಏಕತೆ ಬೆಳೆಯುತ್ತಿರುವ ಈ ಹಂತದಲ್ಲಿ ಇಂತಹಾ ಆರೋಪಗಳು ವಿಭಜನೆಗೆ ಕಾರಣವಾಗಬಹುದು. ಚರ್ಚ್ ತನ್ನ ಹೇಳಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ. ಆದರೆ, ವಿಶ್ವ ಹಿಂದು ಪರಿಷತ್ ಚರ್ಚ್ ಹೇಳಿಕೆಯನ್ನು ಸ್ವಾಗತಿಸಿದ್ದು, ಕೇರಳದಲ್ಲಿ ಲವ್ ಜಿಹಾದ್ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>