ತಿರುವನಂತಪುರಂ: ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿರುವವರಿಗೆ ವೈದ್ಯರು ನೀಡುವ ಸಲಹಾ ಚೀಟಿಯನ್ನು ಆಧರಿಸಿ ಅಬಕಾರಿ ಇಲಾಖೆಯಿಂದ ಮದ್ಯವನ್ನು ಖರೀದಿಸಲು ವಿಶೇಷ ಪಾಸ್ಗಳನ್ನು ವಿತರಿಸಲು ಕೇರಳ ಸರ್ಕಾರ ತೀರ್ಮಾನಿಸಿದೆ.
ವೈದ್ಯರ ಸಂಘದ ವಿರೋಧದ ನಡುವೆಯೂ ಈ ಕುರಿತು ಸೋಮವಾರ ಸರ್ಕಾರಿ ಆದೇಶ ಹೊರಬಿದ್ದಿದೆ. 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ವೈದ್ಯರ ಸಲಹಾ ಚೀಟಿ ಆಧರಿಸಿ ಮದ್ಯ ಖರೀದಿಸಲು ಅವಕಾಶ ನೀಡಲಾಗಿದೆ.