<p><strong>ತಿರುವನಂತಪುರ:</strong> ಖಾಸಗಿ ಸಂಸ್ಥೆಯೊಂದು ಮಾರಾಟ ತೆರಿಗೆ ವಿನಾಯ್ತಿ ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳಿಸಲು ವಿಳಂಬ ಮಾಡಿದ್ದಕ್ಕಾಗಿ, ಕೇರಳ ಹೈಕೋರ್ಟ್ ಐಎಎಸ್ ಅಧಿಕಾರಿಯೊಬ್ಬರಿಗೆ 100 ಸಸಿಗಳನ್ನು ನೆಡುವ ಶಿಕ್ಷೆ ವಿಧಿಸಿದೆ.</p>.<p>ಕೈಗಾರಿಕಾ ನಿರ್ದೇಶಕರಾಗಿರುವ ಕೆ. ಬಿಜು ಅವರು ಈ ಶಿಕ್ಷೆಗೆ ಗುರಿಯಾದವರು.</p>.<p>ರಾಸಾಯನಿಕ ಕ್ಷೇತ್ರದ ಖಾಸಗಿ ಸಂಸ್ಥೆಯೊಂದು ಮಾರಾಟ ತೆರಿಗೆ ವಿನಾಯ್ತಿ ಕೋರಿ 2001ರಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಕೈಗಾರಿಕಾ ಇಲಾಖೆ ಇದನ್ನು ತಿರಸ್ಕರಿಸಿತ್ತು. ಬಳಿಕ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. 2003ರಲ್ಲಿ ಈ ಸಂಬಂಧ ಆದೇಶ ನೀಡಿದ ಹೈಕೋರ್ಟ್, ಅರ್ಜಿ ಪರಿಶೀಲಿಸುವಂತೆ ಇಲಾಖೆಗೆ ಸೂಚಿಸಿತ್ತು. ಸಾಕಷ್ಟು ಬಾರಿ ವಿಚಾರಣೆ ನಡೆಸಿದರೂ ಇಲಾಖೆ ಅರ್ಜಿ ಇತ್ಯರ್ಥಗೊಳಿಸಿರಲಿಲ್ಲ.</p>.<p>ಮತ್ತೆ ಸಂಸ್ಥೆಯು ಹೈಕೋರ್ಟ್ ಮೊರೆ ಹೋದಾಗ, ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ರಾವಲ್ ಅವರು 2001ರಿಂದ ಈವರೆಗೆ ಕೈಗಾರಿಕಾ ನಿರ್ದೇಶಕ ಹುದ್ದೆ ನಿರ್ವಹಿಸಿದ ಎಲ್ಲರನ್ನೂ ಈ ವಿಳಂಬಕ್ಕೆ ಕಾರಣ ಎಂದು ಹೊಣೆ ಹೊರಿಸಿದ್ದಾರೆ. ಆದರೆ ಪ್ರಸ್ತುತ ಕೆ.ಬಿಜು ಅವರು ಈ ಹುದ್ದೆಯಲ್ಲಿರುವುದರಿಂದ 100 ಸಸಿಗಳನ್ನು ನೆಡುವಂತೆ ಅವರಿಗೆ ಸೂಚಿಸಲಾಗಿದೆ.</p>.<p>ಕೆ.ಬಿಜು ಅವರು ಕೇರಳ ಜಲಸಂಪನ್ಮೂಲ ಸಚಿವ ಕೆ.ಕೃಷ್ಣನ್ಕುಟ್ಟಿ ಅವರ ಮಗ. ಕುಟ್ಟಿ ಅವರು ಪಾಲಕ್ಕಾಡ್ನಲ್ಲಿ ಪ್ರಸಿದ್ಧ ಕೃಷಿಕರು ಸಹ ಆಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಖಾಸಗಿ ಸಂಸ್ಥೆಯೊಂದು ಮಾರಾಟ ತೆರಿಗೆ ವಿನಾಯ್ತಿ ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಗೊಳಿಸಲು ವಿಳಂಬ ಮಾಡಿದ್ದಕ್ಕಾಗಿ, ಕೇರಳ ಹೈಕೋರ್ಟ್ ಐಎಎಸ್ ಅಧಿಕಾರಿಯೊಬ್ಬರಿಗೆ 100 ಸಸಿಗಳನ್ನು ನೆಡುವ ಶಿಕ್ಷೆ ವಿಧಿಸಿದೆ.</p>.<p>ಕೈಗಾರಿಕಾ ನಿರ್ದೇಶಕರಾಗಿರುವ ಕೆ. ಬಿಜು ಅವರು ಈ ಶಿಕ್ಷೆಗೆ ಗುರಿಯಾದವರು.</p>.<p>ರಾಸಾಯನಿಕ ಕ್ಷೇತ್ರದ ಖಾಸಗಿ ಸಂಸ್ಥೆಯೊಂದು ಮಾರಾಟ ತೆರಿಗೆ ವಿನಾಯ್ತಿ ಕೋರಿ 2001ರಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಕೈಗಾರಿಕಾ ಇಲಾಖೆ ಇದನ್ನು ತಿರಸ್ಕರಿಸಿತ್ತು. ಬಳಿಕ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. 2003ರಲ್ಲಿ ಈ ಸಂಬಂಧ ಆದೇಶ ನೀಡಿದ ಹೈಕೋರ್ಟ್, ಅರ್ಜಿ ಪರಿಶೀಲಿಸುವಂತೆ ಇಲಾಖೆಗೆ ಸೂಚಿಸಿತ್ತು. ಸಾಕಷ್ಟು ಬಾರಿ ವಿಚಾರಣೆ ನಡೆಸಿದರೂ ಇಲಾಖೆ ಅರ್ಜಿ ಇತ್ಯರ್ಥಗೊಳಿಸಿರಲಿಲ್ಲ.</p>.<p>ಮತ್ತೆ ಸಂಸ್ಥೆಯು ಹೈಕೋರ್ಟ್ ಮೊರೆ ಹೋದಾಗ, ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ರಾವಲ್ ಅವರು 2001ರಿಂದ ಈವರೆಗೆ ಕೈಗಾರಿಕಾ ನಿರ್ದೇಶಕ ಹುದ್ದೆ ನಿರ್ವಹಿಸಿದ ಎಲ್ಲರನ್ನೂ ಈ ವಿಳಂಬಕ್ಕೆ ಕಾರಣ ಎಂದು ಹೊಣೆ ಹೊರಿಸಿದ್ದಾರೆ. ಆದರೆ ಪ್ರಸ್ತುತ ಕೆ.ಬಿಜು ಅವರು ಈ ಹುದ್ದೆಯಲ್ಲಿರುವುದರಿಂದ 100 ಸಸಿಗಳನ್ನು ನೆಡುವಂತೆ ಅವರಿಗೆ ಸೂಚಿಸಲಾಗಿದೆ.</p>.<p>ಕೆ.ಬಿಜು ಅವರು ಕೇರಳ ಜಲಸಂಪನ್ಮೂಲ ಸಚಿವ ಕೆ.ಕೃಷ್ಣನ್ಕುಟ್ಟಿ ಅವರ ಮಗ. ಕುಟ್ಟಿ ಅವರು ಪಾಲಕ್ಕಾಡ್ನಲ್ಲಿ ಪ್ರಸಿದ್ಧ ಕೃಷಿಕರು ಸಹ ಆಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>