ಕೊಚ್ಚಿ: ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ನಡೆಸುವ ಎಲ್ಲಾ ರೀತಿಯ ಚಳವಳಿಗಳಿಗೆ ಕೇರಳ ಹೈಕೋರ್ಟ್ ಬುಧವಾರ ನಿಷೇಧ ಹೇರಿದೆ.
ಶಿಕ್ಷಣ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸಿ ನಡೆಸುವ ಘೇರಾವ್, ಧರಣಿ ಸೇರಿದಂತೆ ಎಲ್ಲಾ ರೀತಿಯ ಚಳವಳಿಗಳಿಗೆ ನಿಷೇಧ ಹೇರಿರುವ ನ್ಯಾಯಾಲಯ, ‘ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳನ್ನು ಯಾರೂ ಪ್ರೇರೇಪಿಸುವಂತಿಲ್ಲ’ ಎಂದಿದೆ.
‘ಚಳವಳಿಗಳಿಂದ ಶಾಂತಿಯುತ ವಾತಾವರಣಕ್ಕೆ ಧಕ್ಕೆ ಉಂಟಾಗುತ್ತಿದೆ’ ಎಂದು ಆರೋಪಿಸಿ ಹಲವು ಶಾಲಾ– ಕಾಲೇಜುಗಳ ಆಡಳಿತ ಮಂಡಳಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.