'ಲಾಕ್ಡೌನ್ನಿಂದ ಬಾಧಿತರಾಗಿರುವ ವಲಸೆ ಕಾರ್ಮಿಕರಿಗೆ ಪಿಎಂ-ಕೇರ್ಸ್ನಿಂದ ₹1,000 ಕೋಟಿ ಘೋಷಿಸಲಾಗಿದೆ. ಆದರೆ, ಈ ಹಣವನ್ನು ವಲಸೆ ಕಾರ್ಮಿಕರಿಗೆ ನೇರವಾಗಿ ನೀಡಲಾಗುವುದಿಲ್ಲ. ವಲಸೆ ಕಾರ್ಮಿಕರ ಪ್ರಯಾಣ, ವಸತಿ, ಔಷಧಿ ಮತ್ತು ಆಹಾರದ ವೆಚ್ಚಗಳನ್ನು ಪೂರೈಸಲು ರಾಜ್ಯ ಸರ್ಕಾರಗಳಿಗೆ ಈ ದುಡ್ಡನ್ನು ನೀಡಲಾಗುತ್ತದೆ. ವಲಸೆ ಕಾರ್ಮಿಕರ ಕೈಗೆ ಏನೂ ತಲುಪುವುದಿಲ್ಲ. ದಯಮಾಡಿ ಇಂತಹ ಸಣ್ಣತಪ್ಪನ್ನು ಮಾಡಬೇಡಿ' ಎಂದು ಕೇಂದ್ರ ಸರ್ಕಾರಕ್ಕೆ ಪಿ.ಚಿದಂಬರಂ ಹೇಳಿದ್ದಾರೆ.