‘ಪ್ರಧಾನಿ ನರೇಂದ್ರ ಮೋದಿಯವರೂ ನಮ್ಮ ಈ ಕಾರ್ಯವನ್ನು ಗುರುತಿಸುತ್ತಾರೆ ಎಂದುಕೊಂಡಿರಲಿಲ್ಲ. ಶಾಲೆಯ ಹಲವು ಸ್ನೇಹಿತರೂ ಅಭಿನಂದಿಸಿದ್ದಾರೆ. 2013ರಲ್ಲಿ ನಮ್ಮ ಕುಟುಂಬ ಎಲ್ಲ ಹಣವನ್ನೂ ಕಳೆದುಕೊಂಡು, ಬೀದಿಗೆ ಬೀಳುವ ಸ್ಥಿತಿ ಬಂದಿತ್ತು. ತಂದೆಯ ಸ್ನೇಹಿತರೇ ಅವರಿಗೆ ಮೋಸ ಮಾಡಿದ್ದರು. ಹಸಿವಿನ ಅರಿವು ನಮಗಿದೆ. ಹೀಗಾಗಿ ಸಹಾಯಕ್ಕೆ ಮುಂದಾದೆವು’ ಎಂದು ಐಎಎಸ್ ಕನಸು ಹೊತ್ತಿರುವ ನೇತ್ರಾ ಹೇಳಿದರು.