‘ನಮ್ಮ ಒಂದು ಅಜಾಗರೂಕ ನಡೆಯು, ಕೋವಿಡ್ ವಿರುದ್ಧದ ಹೋರಾಟದಲ್ಲಿ ಈವರೆಗೆ ನಾವು ಸಾಧಿಸಿರುವುದನ್ನು ನಾಶಗೊಳಿಸಲಿದೆ. ಈ ಸ್ಥಿತಿಯಲ್ಲಿ ಸಮಯೋಚಿತ ನಿರ್ಧಾರ ಕೈಗೊಳ್ಳುವುದು ಮುಖ್ಯವಾಗಿದೆ. ಹಲವು ದೇಶಗಳಲ್ಲಿ ಕೊರೊನಾ ಕುರಿತು ಚರ್ಚೆ ಆರಂಭವಾಗದ ಸಂದರ್ಭದಲ್ಲೇ, ಭಾರತವು ಈ ಪಿಡುಗಿನ ವಿರುದ್ಧದ ಹೋರಾಟಕ್ಕೆ ಸಿದ್ಧತೆಯನ್ನು ಆರಂಭಿಸಿತ್ತು. ದೇಶದ ಜನರ ಜೀವ ಉಳಿಸಲು ನಾವು ಹಗಲು, ರಾತ್ರಿ ದುಡಿದಿದ್ದೇವೆ’ ಎಂದರು.