ಬೆಂಗಳೂರು: ಕೋವಿಡ್ 19 ಮಹಾಮಾರಿ ರಾಜ್ಯದಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಸಚಿವರು, ಅಧಿಕಾರಿಗಳ ಸಭೆ ನಡೆಸಿದರು. ಈ ಸಭೆಯಲ್ಲಿ ವೈದ್ಯಕೀಯ ಕ್ಷೇತ್ರದ ಪ್ರಮುಖರೂ ಇದ್ದರು. ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
– ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲವರನ್ನೂ ನಿರ್ಬಂಧಿಸಲಾಗಿದೆ.
– ನಗರದ ಜನರ ಯಾರೂ ಹಳ್ಳಿಗಳಿಗೆ ಹೋಗಬಾರದು.
– ಇಂದಿರಾ ಕ್ಯಾಂಟೀನ್ನಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ದಿನವಿಡೀ ಉಚಿತ ಆಹಾರ
– ರಾಜ್ಯವನ್ನೇ ಲಾಕ್ಡೌನ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ವಿರೋಧ ಪಕ್ಷಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
– ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದಲೇ ನಿಷೇಧಿಸಲಾಗಿದೆ.
– ವೈದ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ. ಅದನ್ನು ನಾವು ಪಾಲಿಸುತ್ತೇವೆ.
– ವಿಕ್ಟೋರಿಯಾ ಆಸ್ಪತ್ರೆಗೆ 1000 ಹಾಸಿಗಳಗನ್ನು ಪೂರೈಸಲಾಗುತ್ತದೆ.
– ಹೋಂ ಕ್ವಾರಂಟೈನ್ನ ಮನೆಗಳ ಕುರಿತು ಅಧಿಸೂಚನೆ
– ಚುನಾಯಿತ ಪ್ರತಿನಿಧಿಗಳು, ಹೆದರಿ ಕಲಾಪಗಳಿಂದ ದೂರವಿರುವುದು ಸರಿಯಲ್ಲ ಎಂದು ಮೋದಿ ನಿರ್ಧರಿಸಿದ್ದಾರೆ. ಆದರೂ, ಕಲಾಪದಲ್ಲಿ ಚರ್ಚಿಸಿ ಮಾ 27ರ ನಂತರ ಮುಂದೂಡುವ ಕುರಿತು ಚಿಂತನೆ.