<p><strong>ನವದೆಹಲಿ:</strong> ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನದಲ್ಲಿ ಭಾನುವಾರ ಶೇ. 61.14ರಷ್ಟು ಮತದಾನವಾಗಿದೆ.</p>.<p>ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿದ್ದು, ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 5 ಹಂತಗಳ ಮತದಾನ ಪೂರ್ಣಗೊಂಡಿದ್ದು, ಭಾನುವಾರ (ಮೇ.12) ಆರನೇ ಹಂತದ ಮತದಾನ ಪ್ರಕ್ರಿಯೆ ನಡೆಯಿತು. ಆರನೇ ಹಂತದ ವ್ಯಾಪ್ತಿಗೆ ಒಳಪಡುವ ಕ್ಷೇತ್ರಗಳಲ್ಲಿ ಒಟ್ಟಾರೆ 61.14ರಷ್ಟು ಮತದಾನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.</p>.<p>ಪಶ್ಚಿಮ ಬಂಗಾಳದಲ್ಲಿ 80.16, ದೆಹಲಿ–56.11, ಹರಿಯಾಣ–62.91, ಉತ್ತರ ಪ್ರದೇಶ 53.37, ಬಿಹಾರ–59.29, ಜಾರ್ಖಂಡ್–64.46, ಮಧ್ಯಪ್ರದೇಶ 60.40ರಷ್ಟು ಮತದಾನವಾಗಿದೆ.</p>.<p>ಆರನೇ ಹಂತದ ಮತದಾನದ ವ್ಯಾಪ್ತಿಗೆ ಪ್ರತಿಷ್ಠಿತ ರಾಜಕೀಯ ನಾಯಕರ ಕ್ಷೇತ್ರಗಳೂ ಒಳಪಟ್ಟಿದ್ದವು. ಪ್ರಮುಖನಾಯಕರ ಮತದಾನವೂ ಈ ಹಂತದಲ್ಲಿಯೇ ನಡೆಯಿತು. ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದ್ರ ಸಿಂಗ್, ಕೇಂದ್ರ ಸಚಿವ ಹರ್ಷವರ್ಧನ್, ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಿಗೂ ಇಂದು ಮತದಾನ ನಡೆಯಿತು.</p>.<p>ಇಂದು ಮಾಜಿ ರಾಷ್ಟಪತಿ ಪ್ರಣಾವ್ ಮುಖರ್ಜಿ,ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ಮತ ಚಲಾವಣೆ ಮಾಡಿದರು.</p>.<p>ಇನ್ನು ಹಿಂದಿನ ಮತದಾನಗಳ ವೇಳೆ ನಡೆದಿದ್ದ ಘರ್ಷಣೆಗಳಂತೆಯೇ ಆರನೇ ಹಂತದ ಮತದಾನದ ವೇಳೆಯೂ ಘರ್ಷಣೆಗಳು ನಡೆದ ವರದಿಯಾಗಿದೆ. ಪಶ್ಚಿಮ ಬಂಗಾಳದಿಂದಲೇ ಹೆಚ್ಚಿನ ಪ್ರಕರಣಗಳು ಕೇಳಿಬಂದಿವೆ.</p>.<p><strong>ಇದನ್ನೂ ಓದಿ:</strong> <a href="https://www.prajavani.net/stories/national/bjps-bharati-ghosh-breaks-down-636016.html" target="_blank">ಮತಗಟ್ಟೆಯಿಂದ ಹೊರದಬ್ಬಿದರು: ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನದಲ್ಲಿ ಭಾನುವಾರ ಶೇ. 61.14ರಷ್ಟು ಮತದಾನವಾಗಿದೆ.</p>.<p>ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿದ್ದು, ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 5 ಹಂತಗಳ ಮತದಾನ ಪೂರ್ಣಗೊಂಡಿದ್ದು, ಭಾನುವಾರ (ಮೇ.12) ಆರನೇ ಹಂತದ ಮತದಾನ ಪ್ರಕ್ರಿಯೆ ನಡೆಯಿತು. ಆರನೇ ಹಂತದ ವ್ಯಾಪ್ತಿಗೆ ಒಳಪಡುವ ಕ್ಷೇತ್ರಗಳಲ್ಲಿ ಒಟ್ಟಾರೆ 61.14ರಷ್ಟು ಮತದಾನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.</p>.<p>ಪಶ್ಚಿಮ ಬಂಗಾಳದಲ್ಲಿ 80.16, ದೆಹಲಿ–56.11, ಹರಿಯಾಣ–62.91, ಉತ್ತರ ಪ್ರದೇಶ 53.37, ಬಿಹಾರ–59.29, ಜಾರ್ಖಂಡ್–64.46, ಮಧ್ಯಪ್ರದೇಶ 60.40ರಷ್ಟು ಮತದಾನವಾಗಿದೆ.</p>.<p>ಆರನೇ ಹಂತದ ಮತದಾನದ ವ್ಯಾಪ್ತಿಗೆ ಪ್ರತಿಷ್ಠಿತ ರಾಜಕೀಯ ನಾಯಕರ ಕ್ಷೇತ್ರಗಳೂ ಒಳಪಟ್ಟಿದ್ದವು. ಪ್ರಮುಖನಾಯಕರ ಮತದಾನವೂ ಈ ಹಂತದಲ್ಲಿಯೇ ನಡೆಯಿತು. ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದ್ರ ಸಿಂಗ್, ಕೇಂದ್ರ ಸಚಿವ ಹರ್ಷವರ್ಧನ್, ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಿಗೂ ಇಂದು ಮತದಾನ ನಡೆಯಿತು.</p>.<p>ಇಂದು ಮಾಜಿ ರಾಷ್ಟಪತಿ ಪ್ರಣಾವ್ ಮುಖರ್ಜಿ,ವಿರಾಟ್ ಕೊಹ್ಲಿ, ಗೌತಮ್ ಗಂಭೀರ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ಮತ ಚಲಾವಣೆ ಮಾಡಿದರು.</p>.<p>ಇನ್ನು ಹಿಂದಿನ ಮತದಾನಗಳ ವೇಳೆ ನಡೆದಿದ್ದ ಘರ್ಷಣೆಗಳಂತೆಯೇ ಆರನೇ ಹಂತದ ಮತದಾನದ ವೇಳೆಯೂ ಘರ್ಷಣೆಗಳು ನಡೆದ ವರದಿಯಾಗಿದೆ. ಪಶ್ಚಿಮ ಬಂಗಾಳದಿಂದಲೇ ಹೆಚ್ಚಿನ ಪ್ರಕರಣಗಳು ಕೇಳಿಬಂದಿವೆ.</p>.<p><strong>ಇದನ್ನೂ ಓದಿ:</strong> <a href="https://www.prajavani.net/stories/national/bjps-bharati-ghosh-breaks-down-636016.html" target="_blank">ಮತಗಟ್ಟೆಯಿಂದ ಹೊರದಬ್ಬಿದರು: ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>