ಸೋಮವಾರ ದೆಹಲಿಯ ಗಾಂಧಿ ಸ್ಮೃತಿ ಸ್ಮಾರಕಭವನದಲ್ಲಿ ಗಾಂಧಿ ಬಗ್ಗೆ ಇರುವ 'ಗಾಂಧಿ ಕೊ ಸಮಝ್ನೇ ಕಾ ಯಹೀ ಸಮಯ್' ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಭಾಗವತ್, ಗಾಂಧಿ ಕಟ್ಟಾ ಸನಾತನಿ ಹಿಂದೂ ಆಗಿದ್ದರಿಂದ ದೇವರನ್ನು ಪೂಜಿಸಲು ವಿವಿಧ ವಿಧಾನಗಳ ಬಗ್ಗೆ ತಾರತಮ್ಯ ಮಾಡುತ್ತಿರಲಿಲ್ಲ. ಹಾಗಾಗಿ ಅವರು ತಮ್ಮ ನಂಬಿಕೆಗೆ ಬದ್ಧರಾಗಿದ್ದು, ಇತರರ ನಂಬಿಕೆಗಳನ್ನೂ ಗೌರವಿಸುವಂತೆ ಹೇಳುತ್ತಿದ್ದರು ಎಂದಿದ್ದಾರೆ.