<p><strong>ನವದೆಹಲಿ:</strong> ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿನಾಶಕಾರಿ ಮತ್ತು ಹಗೆ ಸಾಧಿಸುವ ಮನೋಭಾವದವರು. ನನ್ನ ಆತ್ಮಹತ್ಯೆಗೆ ಅವರೇ ಕಾರಣಎಂದು ನಿವೃತ್ತ ಐಪಿಎಸ್ ಅಧಿಕಾರಿ ಆತ್ಮಹತ್ಯಾ ಪತ್ರ ಬರೆದಿದ್ದಾರೆ.</p>.<p>ಗೌರವ್ ದತ್ ಅವರು 1986ರ ಬ್ಯಾಚ್ನ ಐಪಿಎಸ್ ಅಧಿಕಾರಿ. ಪುರುಷ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 2010ರಲ್ಲಿ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು ಮತ್ತು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು.</p>.<p>ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ದತ್, ‘ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪಶ್ಚಿಮ ಬಂಗಾಳದ ಈಗಿನ ಮುಖ್ಯಮಂತ್ರಿಯೇ ಕಾರಣ’ ಎಂದು ಪತ್ರದಲ್ಲಿ ಹೇಳಿದ್ದಾರೆ.</p>.<p><strong>ಹತ್ತು ವರ್ಷಗಳವರೆಗೆ ನನ್ನನ್ನು ಗೋಳಾಡಿಸಿದರು</strong></p>.<p>‘ನನ್ನ ಮೇಲಿನ ದ್ವೇಷದಿಂದ ಹಾಕಲಾಗಿದ್ದ ಎರಡು ಪ್ರಕರಣಗಳನ್ನು ತೆರವುಗೊಳಿಸಲು ಎಷ್ಟು ಬಾರಿ ಕೇಳಿದರೂ ಮುಖ್ಯಮಂತ್ರಿ ಅದನ್ನುನಿರಾಕಿಸಿದರು. 10 ವರ್ಷಗಳ ವರೆಗೆ ನನ್ನ ಮೇಲೆ ಹಗೆ ಸಾಧಿಸಿದರು’ ಎಂದು ಪತ್ರದಲ್ಲಿ ಹೇಳಿದ್ದಾರೆ.</p>.<p>‘ನನ್ನ ಮೇಲಿದ್ದ ಒಂದು ಪ್ರಕರಣದ ಕಡತವನ್ನು ಉದ್ದೇಶಪೂರ್ವಕವಾಗಿಯೇ ಅವರು ಕಳೆದು ಹಾಕಿದ್ದರು. ಇನ್ನು ಎರಡನೇ ಪ್ರಕರಣದಲ್ಲಿ ಭ್ರಷ್ಟಾಚಾರಆರೋಪವನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯ ಬಳಿಪೊಲೀಸ್ ಮಹಾನಿರ್ದೇಶಕರೂ ವಿನಂತಿಸಿದ್ದರು. ಆದರೆ, ಪ್ರಯೋಜನವಾಗಲಿಲ್ಲ’ ಎಂದಿದ್ದಾರೆ.</p>.<p>‘ಆತ್ಮಹತ್ಯೆಯ ನಂತರವಾದರೂ ನನ್ನ ಮೇಲಿನ ಪ್ರಕರಣಗಳನ್ನು ಕೈಬಿಟ್ಟು, ನನ್ನ ಉಳಿತಾಯದ ಹಣವನ್ನು ಕುಟುಂಬದವರಿಗೆ ನೀಡಿದರೆ, ಅವರಾದರೂ ಗೌರವಯುತವಾಗಿ ಬದುಕುತ್ತಾರೆ. ನನ್ನ ಮೇಲಿನ ದ್ವೇಷದಿಂದ, ನನಗೆ ಪಾಠ ಕಲಿಸಬೇಕೆನ್ನುವ ಒಂದೇ ಉದ್ದೇಶದಿಂದ ನಿವೃತ್ತಿಯ ನಂತರವೂ ನನ್ನ ಉಳಿತಾಯದ ಹಣವನ್ನು ನೀಡಲಿಲ್ಲ’ ಎಂದು ಹೇಳಿದ್ದಾರೆ.</p>.<p>‘ಮಮತಾ ಅವರ ಈ ರೀತಿಯ ಸೇಡಿನ ಮನೋಭಾವದಿಂದ ರಾಜ್ಯದಲ್ಲಿ ಯಾರೊಬ್ಬರು ಧೈರ್ಯದಿಂದ ಮಾತನಾಡುವುದಿಲ್ಲ. ಎಲ್ಲರೂ ಇಲ್ಲಿ ಬಂಧಿಗಳಾಗಿದ್ದಾರೆ. ಇಲ್ಲೊಂದು ರೀತಿ ಕಾಫ್ಕ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಲ್ಲೊಂದುವಿಷಪೂರಿತ ನರಕವನ್ನೇಸೃಷ್ಟಿಸಿದ್ದಾರೆ. ಇದು ಎಂದೂ ಮುಗಿಯುವುದಿಲ್ಲಎನ್ನಿಸುತ್ತದೆ’ ಎಂದು ಬೇಸರದಿಂದ ನುಡಿದಿದ್ದಾರೆ.</p>.<p>‘ನನ್ನ ಈ ಪತ್ರ ಪ್ರಮಾಣಿಕ ಅಧಿಕಾರಿಗಳ ಸಮಸ್ಯೆಗಳ ಬಗ್ಗೆ ಬೆಳಕಚೆಲ್ಲಲಿದೆ. ಇನ್ನು ಮುಂದಾದರೂ ಪ್ರಾಮಾಣಿಕ ಅಧಿಕಾರಿಗಳಿಗೆ ಹಿಂಸೆ ನೀಡುವ ಮುನ್ನ ಸರ್ಕಾರ ಎರಡು ಬಾರಿ ಯೋಚಿಸಲಿದೆ ಎಂದು ಭಾವಿಸುತ್ತೇನೆ. ಗೌರವದಿಂದ ಬದುಕಲು ಸಾಧ್ಯವಾಗದಿದ್ದರೆ, ಸಾಯುವುದೇ ಉತ್ತಮ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿನಾಶಕಾರಿ ಮತ್ತು ಹಗೆ ಸಾಧಿಸುವ ಮನೋಭಾವದವರು. ನನ್ನ ಆತ್ಮಹತ್ಯೆಗೆ ಅವರೇ ಕಾರಣಎಂದು ನಿವೃತ್ತ ಐಪಿಎಸ್ ಅಧಿಕಾರಿ ಆತ್ಮಹತ್ಯಾ ಪತ್ರ ಬರೆದಿದ್ದಾರೆ.</p>.<p>ಗೌರವ್ ದತ್ ಅವರು 1986ರ ಬ್ಯಾಚ್ನ ಐಪಿಎಸ್ ಅಧಿಕಾರಿ. ಪುರುಷ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 2010ರಲ್ಲಿ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು ಮತ್ತು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು.</p>.<p>ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ದತ್, ‘ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪಶ್ಚಿಮ ಬಂಗಾಳದ ಈಗಿನ ಮುಖ್ಯಮಂತ್ರಿಯೇ ಕಾರಣ’ ಎಂದು ಪತ್ರದಲ್ಲಿ ಹೇಳಿದ್ದಾರೆ.</p>.<p><strong>ಹತ್ತು ವರ್ಷಗಳವರೆಗೆ ನನ್ನನ್ನು ಗೋಳಾಡಿಸಿದರು</strong></p>.<p>‘ನನ್ನ ಮೇಲಿನ ದ್ವೇಷದಿಂದ ಹಾಕಲಾಗಿದ್ದ ಎರಡು ಪ್ರಕರಣಗಳನ್ನು ತೆರವುಗೊಳಿಸಲು ಎಷ್ಟು ಬಾರಿ ಕೇಳಿದರೂ ಮುಖ್ಯಮಂತ್ರಿ ಅದನ್ನುನಿರಾಕಿಸಿದರು. 10 ವರ್ಷಗಳ ವರೆಗೆ ನನ್ನ ಮೇಲೆ ಹಗೆ ಸಾಧಿಸಿದರು’ ಎಂದು ಪತ್ರದಲ್ಲಿ ಹೇಳಿದ್ದಾರೆ.</p>.<p>‘ನನ್ನ ಮೇಲಿದ್ದ ಒಂದು ಪ್ರಕರಣದ ಕಡತವನ್ನು ಉದ್ದೇಶಪೂರ್ವಕವಾಗಿಯೇ ಅವರು ಕಳೆದು ಹಾಕಿದ್ದರು. ಇನ್ನು ಎರಡನೇ ಪ್ರಕರಣದಲ್ಲಿ ಭ್ರಷ್ಟಾಚಾರಆರೋಪವನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯ ಬಳಿಪೊಲೀಸ್ ಮಹಾನಿರ್ದೇಶಕರೂ ವಿನಂತಿಸಿದ್ದರು. ಆದರೆ, ಪ್ರಯೋಜನವಾಗಲಿಲ್ಲ’ ಎಂದಿದ್ದಾರೆ.</p>.<p>‘ಆತ್ಮಹತ್ಯೆಯ ನಂತರವಾದರೂ ನನ್ನ ಮೇಲಿನ ಪ್ರಕರಣಗಳನ್ನು ಕೈಬಿಟ್ಟು, ನನ್ನ ಉಳಿತಾಯದ ಹಣವನ್ನು ಕುಟುಂಬದವರಿಗೆ ನೀಡಿದರೆ, ಅವರಾದರೂ ಗೌರವಯುತವಾಗಿ ಬದುಕುತ್ತಾರೆ. ನನ್ನ ಮೇಲಿನ ದ್ವೇಷದಿಂದ, ನನಗೆ ಪಾಠ ಕಲಿಸಬೇಕೆನ್ನುವ ಒಂದೇ ಉದ್ದೇಶದಿಂದ ನಿವೃತ್ತಿಯ ನಂತರವೂ ನನ್ನ ಉಳಿತಾಯದ ಹಣವನ್ನು ನೀಡಲಿಲ್ಲ’ ಎಂದು ಹೇಳಿದ್ದಾರೆ.</p>.<p>‘ಮಮತಾ ಅವರ ಈ ರೀತಿಯ ಸೇಡಿನ ಮನೋಭಾವದಿಂದ ರಾಜ್ಯದಲ್ಲಿ ಯಾರೊಬ್ಬರು ಧೈರ್ಯದಿಂದ ಮಾತನಾಡುವುದಿಲ್ಲ. ಎಲ್ಲರೂ ಇಲ್ಲಿ ಬಂಧಿಗಳಾಗಿದ್ದಾರೆ. ಇಲ್ಲೊಂದು ರೀತಿ ಕಾಫ್ಕ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಲ್ಲೊಂದುವಿಷಪೂರಿತ ನರಕವನ್ನೇಸೃಷ್ಟಿಸಿದ್ದಾರೆ. ಇದು ಎಂದೂ ಮುಗಿಯುವುದಿಲ್ಲಎನ್ನಿಸುತ್ತದೆ’ ಎಂದು ಬೇಸರದಿಂದ ನುಡಿದಿದ್ದಾರೆ.</p>.<p>‘ನನ್ನ ಈ ಪತ್ರ ಪ್ರಮಾಣಿಕ ಅಧಿಕಾರಿಗಳ ಸಮಸ್ಯೆಗಳ ಬಗ್ಗೆ ಬೆಳಕಚೆಲ್ಲಲಿದೆ. ಇನ್ನು ಮುಂದಾದರೂ ಪ್ರಾಮಾಣಿಕ ಅಧಿಕಾರಿಗಳಿಗೆ ಹಿಂಸೆ ನೀಡುವ ಮುನ್ನ ಸರ್ಕಾರ ಎರಡು ಬಾರಿ ಯೋಚಿಸಲಿದೆ ಎಂದು ಭಾವಿಸುತ್ತೇನೆ. ಗೌರವದಿಂದ ಬದುಕಲು ಸಾಧ್ಯವಾಗದಿದ್ದರೆ, ಸಾಯುವುದೇ ಉತ್ತಮ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>