<p><strong>ದೆಹಲಿ:</strong><a href="https://www.prajavani.net/tags/citizenship-amendment-act-0" target="_blank">ಪೌರತ್ವ ತಿದ್ದುಪಡಿಕಾಯ್ದೆ</a>ವಿರೋಧಿಸಿ ದೆಹಲಿಯ <a href="https://www.prajavani.net/tags/shaheen-bagh" target="_blank">ಶಾಹೀನ್ಬಾಗ್</a>ನಲ್ಲಿ ಮಂಗಳವಾರಪ್ರತಿಭಟನೆ ನಡೆಯುತ್ತಿದ್ದಾಗಗನ್ ಹಿಡಿದ ವ್ಯಕ್ತಿಯೊಬ್ಬಪ್ರತಿಭಟನಕಾರರ ನಡುವೆ ನುಗ್ಗಿದ್ದಾನೆ. ವ್ಯಕ್ತಿಯ ಕೈಯಲ್ಲಿ ಗನ್ ಇರುವುದನ್ನು ಗಮನಿಸಿದ ಪ್ರತಿಭಟನಕಾರರು ತಕ್ಷಣವೇ ಅದನ್ನು ವಶ ಪಡಿಸಿಕೊಂಡಿದ್ದಾರೆ.</p>.<p>ಪ್ರತಿಭಟನಕಾರರಲ್ಲಿ ಮಾತನಾಡುವ ಸಲುವಾಗಿ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದ ವ್ಯಕ್ತಿಯ ಕೈಯಲ್ಲಿ ಇದ್ದದ್ದು ಪರವಾನಗಿ ಇರುವ ಗನ್ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.</p>.<p>ಶಸ್ತ್ರಾಸ್ತ್ರ ಹೊಂದಿದ ಸಮಾಜ ದ್ರೋಹಿಯೊಬ್ಬ ಪ್ರತಿಭಟನಕಾರರ ನಡುವೆ ನುಗ್ಗಿದ್ದಾನೆ ಎಂದು ಶಾಹೀನ್ಬಾಗ್ ಪ್ರತಿಭಟನೆಯ ಸಂಚಾಲಕರುಪ್ರತಿಕ್ರಿಯಿಸಿದ್ದಾರೆ.</p>.<p>ಬಲಪಂಥೀಯ ಗುಂಪುಗಳ ಜನರು ಇಲ್ಲಿ ನುಗ್ಗಿ ದಾಳಿ ನಡೆಸಬಹುದು ಎಂಬ ಬೆದರಿಕೆ ನಮಗಿದೆ. ಈ ಪ್ರತಿಭಟನೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಹಿಂಸಾ ಚಟುವಟಿಕೆಗಳ ವಿರುದ್ದ ನಿಲ್ಲಬೇಕು ಎಂದು ಸಂಚಾಲಕರು ಟ್ವೀಟಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/bjp-mp-parvesh-verma-says-shaheen-bagh-protesters-will-enter-houses-rape-sisters-and-daughters-701240.html" target="_blank">ಕಾಶ್ಮೀರದ ಪರಿಸ್ಥಿತಿ ದೆಹಲಿಗೂ ಬಂದೀತು ಜೋಕೆ: ಬಿಜೆಪಿ ಸಂಸದ ಪರ್ವೇಶ್ ವರ್ಮಾ</a></p>.<p>ಶಾಹೀನ್ಬಾಗ್ ಪ್ರತಿಭಟನಕಾರರುನಿಮ್ಮ ಮನೆಗೆ ನುಗ್ಗಿ ಮಕ್ಕಳು, ಸಹೋದರಿಯರ ಮೇಲೆ ಅತ್ಯಾಚಾರವೆಸಗುತ್ತಾರೆ ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/now-anurag-thakurs-turn-to-shoot-the-traitors-701178.html" target="_blank">ದೆಹಲಿ ಪ್ರಚಾರದಲ್ಲಿ ‘ಗುಂಡಿಕ್ಕಿ ಕೊಲ್ಲಿ’!</a></p>.<p>ಸೋಮವಾರ ದೆಹಲಿ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್ದೇಶದ್ರೋಹಿಗಳನ್ನು’ ಎಂದು ಕೂಗಿದಾಗ, ನೆರೆದಿದ್ದ ಜನರು ‘ಗುಂಡಿಕ್ಕಿ’ ಕೊಲ್ಲಿ ಎಂದು ಘೋಷಣೆ ಕೂಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೆಹಲಿ:</strong><a href="https://www.prajavani.net/tags/citizenship-amendment-act-0" target="_blank">ಪೌರತ್ವ ತಿದ್ದುಪಡಿಕಾಯ್ದೆ</a>ವಿರೋಧಿಸಿ ದೆಹಲಿಯ <a href="https://www.prajavani.net/tags/shaheen-bagh" target="_blank">ಶಾಹೀನ್ಬಾಗ್</a>ನಲ್ಲಿ ಮಂಗಳವಾರಪ್ರತಿಭಟನೆ ನಡೆಯುತ್ತಿದ್ದಾಗಗನ್ ಹಿಡಿದ ವ್ಯಕ್ತಿಯೊಬ್ಬಪ್ರತಿಭಟನಕಾರರ ನಡುವೆ ನುಗ್ಗಿದ್ದಾನೆ. ವ್ಯಕ್ತಿಯ ಕೈಯಲ್ಲಿ ಗನ್ ಇರುವುದನ್ನು ಗಮನಿಸಿದ ಪ್ರತಿಭಟನಕಾರರು ತಕ್ಷಣವೇ ಅದನ್ನು ವಶ ಪಡಿಸಿಕೊಂಡಿದ್ದಾರೆ.</p>.<p>ಪ್ರತಿಭಟನಕಾರರಲ್ಲಿ ಮಾತನಾಡುವ ಸಲುವಾಗಿ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದ ವ್ಯಕ್ತಿಯ ಕೈಯಲ್ಲಿ ಇದ್ದದ್ದು ಪರವಾನಗಿ ಇರುವ ಗನ್ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.</p>.<p>ಶಸ್ತ್ರಾಸ್ತ್ರ ಹೊಂದಿದ ಸಮಾಜ ದ್ರೋಹಿಯೊಬ್ಬ ಪ್ರತಿಭಟನಕಾರರ ನಡುವೆ ನುಗ್ಗಿದ್ದಾನೆ ಎಂದು ಶಾಹೀನ್ಬಾಗ್ ಪ್ರತಿಭಟನೆಯ ಸಂಚಾಲಕರುಪ್ರತಿಕ್ರಿಯಿಸಿದ್ದಾರೆ.</p>.<p>ಬಲಪಂಥೀಯ ಗುಂಪುಗಳ ಜನರು ಇಲ್ಲಿ ನುಗ್ಗಿ ದಾಳಿ ನಡೆಸಬಹುದು ಎಂಬ ಬೆದರಿಕೆ ನಮಗಿದೆ. ಈ ಪ್ರತಿಭಟನೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಹಿಂಸಾ ಚಟುವಟಿಕೆಗಳ ವಿರುದ್ದ ನಿಲ್ಲಬೇಕು ಎಂದು ಸಂಚಾಲಕರು ಟ್ವೀಟಿಸಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/bjp-mp-parvesh-verma-says-shaheen-bagh-protesters-will-enter-houses-rape-sisters-and-daughters-701240.html" target="_blank">ಕಾಶ್ಮೀರದ ಪರಿಸ್ಥಿತಿ ದೆಹಲಿಗೂ ಬಂದೀತು ಜೋಕೆ: ಬಿಜೆಪಿ ಸಂಸದ ಪರ್ವೇಶ್ ವರ್ಮಾ</a></p>.<p>ಶಾಹೀನ್ಬಾಗ್ ಪ್ರತಿಭಟನಕಾರರುನಿಮ್ಮ ಮನೆಗೆ ನುಗ್ಗಿ ಮಕ್ಕಳು, ಸಹೋದರಿಯರ ಮೇಲೆ ಅತ್ಯಾಚಾರವೆಸಗುತ್ತಾರೆ ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/now-anurag-thakurs-turn-to-shoot-the-traitors-701178.html" target="_blank">ದೆಹಲಿ ಪ್ರಚಾರದಲ್ಲಿ ‘ಗುಂಡಿಕ್ಕಿ ಕೊಲ್ಲಿ’!</a></p>.<p>ಸೋಮವಾರ ದೆಹಲಿ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದಹಣಕಾಸು ಖಾತೆ ರಾಜ್ಯಸಚಿವ ಅನುರಾಗ್ ಸಿಂಗ್ ಠಾಕೂರ್ದೇಶದ್ರೋಹಿಗಳನ್ನು’ ಎಂದು ಕೂಗಿದಾಗ, ನೆರೆದಿದ್ದ ಜನರು ‘ಗುಂಡಿಕ್ಕಿ’ ಕೊಲ್ಲಿ ಎಂದು ಘೋಷಣೆ ಕೂಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>