ಆಗಸ್ಟ್ 25ರಂದು ಬಡ್ವಾನಿಜಿಲ್ಲೆಯಲ್ಲಿ ಮೇಧಾ ಅವರು ನರ್ಮದಾ ಚುನೌತಿ ಸತ್ಯಾಗ್ರಹ ಆರಂಭಿಸಿದ್ದರು. ನಾಲ್ಕು ದಿನಗಳ ನಂತರ ಎಂಟು ಗ್ರಾಮಸ್ಥರು ಈ ಸತ್ಯಾಗ್ರಹಕ್ಕೆ ಕೈ ಜೋಡಿಸಿದರು. ಸೆಪ್ಟೆಂಬರ್ 3ರಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರು ಮೇಧಾ ಅವರು ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್ಸಿ ಬೆಹರ್ ಅವರನ್ನು ಕಳಿಸಿ ಬೇಡಿಕೆಯ ಬಗ್ಗೆ ಮಾಹಿತಿ ಪಡೆದಿದ್ದರು.