ಭುವನೇಶ್ವರ: ‘ವಲಸೆ ಕಾರ್ಮಿಕರೊಬ್ಬರ ಮೃತದೇಹವು ಕಟಕ್ ಜಿಲ್ಲೆಯ ಕ್ವಾರಂಟೈನ್ ಕೇಂದ್ರವೊಂದರ ಬಳಿ ಪತ್ತೆಯಾಗಿದೆ’ ಎಂದು ಪೊಲೀಸರು ಸೋಮವಾರ ತಿಳಿಸಿದರು.
‘ಮೃತ ವಲಸೆ ಕಾರ್ಮಿಕನನ್ನು ಬ್ರಜಬಂಧು ರಾಣಾ (40) ಎಂದು ಗುರುತಿಸಲಾಗಿದೆ. ಇವರು ಒಡಿಶಾದ ಕೃಷ್ಣಾಪುರ ಗ್ರಾಮದವರು. ಮುಂಬೈನಿಂದ ಬಂದ ಇವರನ್ನು ಮೇ 26ರಿಂದ ಕ್ವಾರಂಟೈನ್ನಲ್ಲಿ ಇಡಲಾಗಿತ್ತು’ ಎಂದರು.
‘ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿನ ಕಾರಣ ತನಿಖೆ ಪ್ರಾರಂಭಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.