‘ಮಂದಿರ ಜಾಗದ ವಿವಾದದ ವಿಚಾರಣೆ ಹಲವು ವರ್ಷಗಳಿಂದ ಕೋರ್ಟ್ನಲ್ಲಿ ನಡೆಯುತ್ತಿದೆ. ಆದರೆ, ಸರ್ಕಾರ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು. ಇದು ಕೇವಲ ಶಿವಸೇನಾಕ್ಕೆ ಸೀಮಿತವಾಗಿಲ್ಲ, ವಿಶ್ವದ ಎಲ್ಲ ಹಿಂದೂಗಳ ಅಪೇಕ್ಷೆಯಾಗಿದೆ. ಆದ್ದರಿಂದ ಬೇಗನೆ ಮಂದಿರ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಬೇಕು’ ಎಂದ ಅವರು, ‘ಕಾನೂನು ರೂಪಿಸಿ, ಮಂದಿರ ಕಟ್ಟಿ’ ಎಂಬ ಘೋಷಣೆ ಕೂಗಿದರು.