ರೋಹ್ಟಕ್ (ಹರಿಯಾಣ): ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಅವರು1984ರ ಸಿಖ್ ನರಮೇಧ ಕುರಿತು ‘ಆಗಿದ್ದು ಆಗಿಹೋಯಿತು, ಈಗೇನು’ ಎಂಬ ಹೇಳಿಕೆ ನೀಡಿದ್ದು ರಾಜಕೀಯ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಗೆ ಕಾಂಗ್ರೆಸ್ ಪಕ್ಷವು ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ‘ಇದು, ಕಾಂಗ್ರೆಸ್ ವ್ಯಕ್ತಿತ್ವ, ಮನಃಸ್ಥಿತಿಯ ಅಭಿವ್ಯಕ್ತಿ’ ಎಂದುಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.