<p><strong>ಕೊಕ್ರಝಾರ್:</strong> ‘ಬೋಡೊ ಜನರ ಹಕ್ಕುಗಳು, ಸಂಸ್ಕೃತಿ ಹಾಗೂ ಭಾಷೆ ಸೇರಿದಂತೆ ಆ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ. ಈ ಉದ್ದೇಶ ಈಡೇರಿಕೆಗಾಗಿ ಮೂರು ವರ್ಷಗಳಲ್ಲಿ ₹ 1,500 ಕೋಟಿ ವ್ಯಯಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದರು.</p>.<p>ಬೋಡೊ ಶಾಂತಿ ಒಪ್ಪಂದಕ್ಕೆ ಅಂಕಿತ ಹಾಕಿರುವ ಹಿನ್ನೆಲೆಯಲ್ಲಿ ಇಲ್ಲಿನ ‘ಬೋಡೊ ಪ್ರಾದೇಶಿಕ ಜಿಲ್ಲೆ’ (ಬಿಟಿಎಡಿ)ಯಲ್ಲಿ ಸಂಭ್ರಮಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಅವರು ಮಾತನಾಡಿದರು.</p>.<p>‘ನಿಮ್ಮೆಲ್ಲರ ಸಹಕಾರದಿಂದಾಗಿ ಬೋಡೊ ಶಾಂತಿ ಒಪ್ಪಂದಕ್ಕೆ ಅಂಕಿತ ಸಾಧ್ಯವಾಯಿತು. ಅಸ್ಸಾಂನಲ್ಲಿ ಹೊಸ ಶಕೆಗೆ ಈ ಒಪ್ಪಂದ ನಾಂದಿ ಹಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>‘ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸುವ ಕಾಲ ಕೂಡಿ ಬಂದಿದೆ. ಯಾವುದೇ ಕಾರಣಕ್ಕೂ ಇಲ್ಲಿ ಹಿಂಸೆ ಮರುಕಳಿಸಲು ಅವಕಾಶ ನೀಡುವುದಿಲ್ಲ’ ಎಂದರು.</p>.<p>‘1993 ಹಾಗೂ 2003ರಲ್ಲಿ ಏರ್ಪಟ್ಟ ಒಪ್ಪಂದದಿಂದ ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯಾಗಲಿಲ್ಲ. ಜನವರಿ 27ರಂದು ಸಹಿ ಹಾಕಲಾದ ಒಪ್ಪಂದದಿಂದಾಗಿ ಬೋಡೊ ಜನರ ಎಲ್ಲ ಬೇಡಿಕೆಗಳನ್ನೂ ಈಡೇರಿಸಿದಂತಾಗಿದೆ. ಇದು ಎಲ್ಲರ ಗೆಲುವು. ಶಾಂತಿ ಮತ್ತು ಮಾನವೀಯತೆಯ ಗೆಲುವು. ಇಲ್ಲಿ ಯಾರ ಸೋಲೂ ಇಲ್ಲ.’ ಎಂದರು.</p>.<p><strong>‘ಕಾಶ್ಮೀರದ ಉಗ್ರರು, ಮಾವೊವಾದಿಗಳಿಗೆ ಬೊಡೊ ಜನ ಮಾದರಿ’</strong></p>.<p>‘ಕಾಶ್ಮೀರದ ಉಗ್ರಗಾಮಿಗಳು, ಮಾವೊವಾದಿಗಳಿಗೆ ಬೋಡೊ ಯುವಕರು ಮಾದರಿ. ದಶಕಗಳ ಕಾಲ ತಾವು ಹಿಡಿದಿದ್ದ ಹಿಂಸಾ ಮಾರ್ಗವನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ಮುಂದಾಗಿದ್ದಾರೆ. ಇದಕ್ಕಾಗಿ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದರು.</p>.<p>‘ಅಭಿವೃದ್ಧಿ ವಂಚಿತ ಪ್ರದೇಶಗಳಲ್ಲಿರುವ ಎಡಪಂಥೀಯ ತೀವ್ರಗಾಮಿಗಳಿರಬಹುದು, ಜಮ್ಮು–ಕಾಶ್ಮೀರ ಇಲ್ಲವೇ ಈಶಾನ್ಯ ರಾಜ್ಯಗಳಲ್ಲಿನ ಉಗ್ರರಿರಬಹುದು. ಹಿಂಸಾಮಾರ್ಗ ಬಿಟ್ಟು ಅಭಿವೃದ್ಧಿಯತ್ತ ಮುಖ ಮಾಡಿರುವ ಬೋಡೊ ಯುವಕರಿಂದ ಇವರೆಲ್ಲ ಕಲಿಯಬೇಕು’ ಎಂದರು.</p>.<p>‘ಹಿಂಸೆ ಎಂದಿಗೂ ಯಶಸ್ಸು ನೀಡಿಲ್ಲ ಅಥವಾ ಯಾವುದೇ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ’ ಎಂದೂ ಹೇಳಿದರು.</p>.<p><strong>ಸಿಎಎ ಜಾರಿ ನಂತರ ಮೊದಲ ಭೇಟಿ</strong></p>.<p>ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದ ನಂತರ ಸಾಕಷ್ಟು ಪ್ರತಿಭಟನೆ, ಹಿಂಸೆಯಿಂದ ನಲುಗಿದ್ದ ಅಸ್ಸಾಂಗೆ ಮೊದಿ ಇದೇ ಮೊದಲ ಬಾರಿ ಭೇಟಿ ನೀಡಿದರು.</p>.<p>ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಗುವಾಹಟಿಯಲ್ಲಿ ಸಭೆ ನಿಗದಿಯಾಗಿತ್ತು. ಆದರೆ, ಸಿಎಎ, ಎನ್ಆರ್ಸಿ ವಿರೋಧಿ ಭಾರಿ ಪ್ರತಿಭಟನೆ ನಡೆದ ಕಾರಣ, ಈ ಅಬೆ ಭೇಟಿಯನ್ನು ರದ್ದುಗೊಳಿಸಿದ್ದರಿಂದ ಮೋದಿ ಸಹ ಅಸ್ಸಾಂಗೆ ಭೇಟಿ ನೀಡಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಕ್ರಝಾರ್:</strong> ‘ಬೋಡೊ ಜನರ ಹಕ್ಕುಗಳು, ಸಂಸ್ಕೃತಿ ಹಾಗೂ ಭಾಷೆ ಸೇರಿದಂತೆ ಆ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ. ಈ ಉದ್ದೇಶ ಈಡೇರಿಕೆಗಾಗಿ ಮೂರು ವರ್ಷಗಳಲ್ಲಿ ₹ 1,500 ಕೋಟಿ ವ್ಯಯಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದರು.</p>.<p>ಬೋಡೊ ಶಾಂತಿ ಒಪ್ಪಂದಕ್ಕೆ ಅಂಕಿತ ಹಾಕಿರುವ ಹಿನ್ನೆಲೆಯಲ್ಲಿ ಇಲ್ಲಿನ ‘ಬೋಡೊ ಪ್ರಾದೇಶಿಕ ಜಿಲ್ಲೆ’ (ಬಿಟಿಎಡಿ)ಯಲ್ಲಿ ಸಂಭ್ರಮಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಅವರು ಮಾತನಾಡಿದರು.</p>.<p>‘ನಿಮ್ಮೆಲ್ಲರ ಸಹಕಾರದಿಂದಾಗಿ ಬೋಡೊ ಶಾಂತಿ ಒಪ್ಪಂದಕ್ಕೆ ಅಂಕಿತ ಸಾಧ್ಯವಾಯಿತು. ಅಸ್ಸಾಂನಲ್ಲಿ ಹೊಸ ಶಕೆಗೆ ಈ ಒಪ್ಪಂದ ನಾಂದಿ ಹಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>‘ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸುವ ಕಾಲ ಕೂಡಿ ಬಂದಿದೆ. ಯಾವುದೇ ಕಾರಣಕ್ಕೂ ಇಲ್ಲಿ ಹಿಂಸೆ ಮರುಕಳಿಸಲು ಅವಕಾಶ ನೀಡುವುದಿಲ್ಲ’ ಎಂದರು.</p>.<p>‘1993 ಹಾಗೂ 2003ರಲ್ಲಿ ಏರ್ಪಟ್ಟ ಒಪ್ಪಂದದಿಂದ ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯಾಗಲಿಲ್ಲ. ಜನವರಿ 27ರಂದು ಸಹಿ ಹಾಕಲಾದ ಒಪ್ಪಂದದಿಂದಾಗಿ ಬೋಡೊ ಜನರ ಎಲ್ಲ ಬೇಡಿಕೆಗಳನ್ನೂ ಈಡೇರಿಸಿದಂತಾಗಿದೆ. ಇದು ಎಲ್ಲರ ಗೆಲುವು. ಶಾಂತಿ ಮತ್ತು ಮಾನವೀಯತೆಯ ಗೆಲುವು. ಇಲ್ಲಿ ಯಾರ ಸೋಲೂ ಇಲ್ಲ.’ ಎಂದರು.</p>.<p><strong>‘ಕಾಶ್ಮೀರದ ಉಗ್ರರು, ಮಾವೊವಾದಿಗಳಿಗೆ ಬೊಡೊ ಜನ ಮಾದರಿ’</strong></p>.<p>‘ಕಾಶ್ಮೀರದ ಉಗ್ರಗಾಮಿಗಳು, ಮಾವೊವಾದಿಗಳಿಗೆ ಬೋಡೊ ಯುವಕರು ಮಾದರಿ. ದಶಕಗಳ ಕಾಲ ತಾವು ಹಿಡಿದಿದ್ದ ಹಿಂಸಾ ಮಾರ್ಗವನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಲು ಮುಂದಾಗಿದ್ದಾರೆ. ಇದಕ್ಕಾಗಿ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದರು.</p>.<p>‘ಅಭಿವೃದ್ಧಿ ವಂಚಿತ ಪ್ರದೇಶಗಳಲ್ಲಿರುವ ಎಡಪಂಥೀಯ ತೀವ್ರಗಾಮಿಗಳಿರಬಹುದು, ಜಮ್ಮು–ಕಾಶ್ಮೀರ ಇಲ್ಲವೇ ಈಶಾನ್ಯ ರಾಜ್ಯಗಳಲ್ಲಿನ ಉಗ್ರರಿರಬಹುದು. ಹಿಂಸಾಮಾರ್ಗ ಬಿಟ್ಟು ಅಭಿವೃದ್ಧಿಯತ್ತ ಮುಖ ಮಾಡಿರುವ ಬೋಡೊ ಯುವಕರಿಂದ ಇವರೆಲ್ಲ ಕಲಿಯಬೇಕು’ ಎಂದರು.</p>.<p>‘ಹಿಂಸೆ ಎಂದಿಗೂ ಯಶಸ್ಸು ನೀಡಿಲ್ಲ ಅಥವಾ ಯಾವುದೇ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ’ ಎಂದೂ ಹೇಳಿದರು.</p>.<p><strong>ಸಿಎಎ ಜಾರಿ ನಂತರ ಮೊದಲ ಭೇಟಿ</strong></p>.<p>ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದ ನಂತರ ಸಾಕಷ್ಟು ಪ್ರತಿಭಟನೆ, ಹಿಂಸೆಯಿಂದ ನಲುಗಿದ್ದ ಅಸ್ಸಾಂಗೆ ಮೊದಿ ಇದೇ ಮೊದಲ ಬಾರಿ ಭೇಟಿ ನೀಡಿದರು.</p>.<p>ಜಪಾನ್ ಪ್ರಧಾನಿ ಶಿಂಜೊ ಅಬೆ ಅವರೊಂದಿಗೆ ಗುವಾಹಟಿಯಲ್ಲಿ ಸಭೆ ನಿಗದಿಯಾಗಿತ್ತು. ಆದರೆ, ಸಿಎಎ, ಎನ್ಆರ್ಸಿ ವಿರೋಧಿ ಭಾರಿ ಪ್ರತಿಭಟನೆ ನಡೆದ ಕಾರಣ, ಈ ಅಬೆ ಭೇಟಿಯನ್ನು ರದ್ದುಗೊಳಿಸಿದ್ದರಿಂದ ಮೋದಿ ಸಹ ಅಸ್ಸಾಂಗೆ ಭೇಟಿ ನೀಡಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>