ಕೇಂದ್ರ ಸರ್ಕಾರದ ನಿರ್ದೇಶನದಂತೆ ಏಳೆಂಟು ವೈದ್ಯಾಧಿಕಾರಿಗಳ ತಂಡ ಮರ್ಕಜ್ನಲ್ಲಿ ಭಾಗಿಯಾದವರ ಪತ್ತೆ ಕಾರ್ಯ ಡೆಸುತ್ತಿದೆ.ಇಲ್ಲಿಯವರೆಗೆ ಮುಂಬ್ರಾದಲ್ಲಿರುವ ಎರಡು ಮದರಸಗಳಿಂದ 25 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಕೊರೊನಾ ಪ್ರಕರಣಗಳ ಪತ್ತೆ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿ ಡಾ.ಕೆ.ಟಿ ಕೇಂದ್ರೆ ಹೇಳಿದ್ದಾರೆ. ಈಗ ನಾವು ಪತ್ತೆ ಹಚ್ಚಿದ ವ್ಯಕ್ತಿಗಳಲ್ಲಿ ಯಾರೊಬ್ಬರಿಗೂ ಆರೋಗ್ಯ ಸಮಸ್ಯೆ ಇಲ್ಲ ಎಂದ ಹೇಳಿರುವ ಕೇಂದ್ರೆ, ಅಲ್ಲಿ ಭಾಗವಹಿಸಿರುವ ಎಲ್ಲ ಜನರನ್ನು ಪತ್ತೆ ಹಚ್ಚಿದ ನಂತರವೇ ಮುಂದಿನ ಕಾರ್ಯ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.